ಕಲಬುರಗಿ: ತಾಯಿಯ ಕೈತುತ್ತು ಅಮೃತಕ್ಕೆ ಸಮಾನ ಎಂದು ಇಂಗ್ಲೀಷ್ ಮಾಧ್ಯಮ ಮುಖ್ಯ ಶಿಕ್ಷಕಿ ಸೌಭಾಗ್ಯ ಜಿ. ಬಿಲಗುಂದಿ ಅವರು ಹೇಳಿದರು.
ನಗರದ ಹುಮ್ನಾಬಾದ್ ರಸ್ತೆಯಲ್ಲಿನ ರಾಮನಗರದಲ್ಲಿರುವ ಶ್ರೀ ಗುರು ಸಂಗಮೇಶ್ವರ್ ಶಿಕ್ಷಣ ಹಾಗೂ ಕಲ್ಯಾಣ ಸಂಸ್ಥೆಯ ಎಸ್.ಜಿ.ಎಸ್. ಲಿಟ್ಲ್ ಲೋಟಸ್ ಇಂಟರ್ ನ್ಯಾಶನಲ್ ವರ್ಣಾಶ್ರಮ ಶಾಲೆಯಲ್ಲಿ ಬುಧವಾರ ಜರುಗಿದ ತಾಯಿ ತುತ್ತು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಾಯಿಯ ಕೈತುತ್ತು ಪುಣ್ಯಾತ್ಮರಿಗೆ ಮಾತ್ರ ಸಿಗುವ ಅಜರಾಮರವಾದ ಮೃಷ್ಟಾನ್ನ ಬೋಜನವಾಗಿದೆ ಎಂದರು.
ನಮ್ಮ ವೇದೋಪನಿಷತುಗಳಲ್ಲಿ ವಿಘ್ನ ನಿವಾರಕನಾದ ಗಣಪ ಪ್ರಥಮ ವಂದಿತನಾದರೆ. ಪ್ರಥಮ ಪೂಜಿತೆ ತಾಯಿ ಮಾತೃ ದೇವೋಭವ ಎಂದು ಕರೆಯಿಸಿಕೊಳ್ಳುತ್ತಾಳೆ. ಅಮ್ಮ ಎಂದರೆ ಅದೇನೊ ಹರುಷ. ಆ ಎರಡಕ್ಷರದ ಪದದಲ್ಲಿ ಅದಮ್ಯ ಚೈತನ್ಯವಿದೆ ಎಂದು ಅವರು ಹೇಳಿದರು.
ಒಂದು ಮಗುವಿನ ಒಳ್ಳೆಯ ಭವಿಷ್ಯ ರೂಪಿಸುವಲ್ಲಿ ತಾಯಿ ಪಾತ್ರ ಪ್ರಧಾನವಾಗಿದ್ದು, ಅಂತಹ ಒಂದು ತಾಯಿ ತುತ್ತು ಹಾಕಿ ಬೆಳೆಸುವ ಪ್ರೀತಿ ವಾತ್ಸಲ್ಯಕ್ಕೆ ಹೆಚ್ಚು ಬೆಲೆ ಇದೆ. ಆದರೆ, ಇಂದಿನ ಯಾಂತ್ರಿಕ ಜೀವನದಲ್ಲಿ ಆಡಂಬರದಿಂದ ಬಾಳಬೇಕೆಂಬ ಮಹದಾಸೆಯಿಂದ ತಾಯಿ ತಂದೆ ಇಬ್ಬರು ದುಡಿಯಲಾರಂಭಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ತಾಯಿ ಸಹಜ ಪ್ರೀತಿ ವಾತ್ಸಲ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ವಿದ್ಯಾರ್ಥಿಯ ಪಾಲಕಿ ಲಕ್ಷ್ಮೀ ಗೋಪಾಲ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಗುರುಗಳಾದ ಪ್ರತಿಭಾ ಆರ್. ಕಣಜಿಕರ್, ಶರಣು ವಿ. ದಸ್ತಾಪೂರ್, ಸಹ ಶಿಕ್ಷಕರು ಮತ್ತು ಬೋಧಕೇತರ ಶಿಕ್ಷಕರು ಉಪಸ್ಥಿತರಿದ್ದರು. ಸಂದೀಪ ಪಾಟಿಲ್ ಅವರು ಕಾರ್ಯಕ್ರಮ ನಿರೂಪಿಸಿದರು. ಸವಿತಾ ಅವರು ಸ್ವಾಗತಿಸಿದರು. ರೇಣುಕಾ ಅವರು ವಂದಿಸಿದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…