ವಕ್ಫ್ ಆಸ್ತಿ ಅನಧೀಕೃತ ಮಾರಾಟ: ಡಿಸೆಂಬರ್ 12 ರಂದು ವಿಚಾರಣೆ ಹಾಜರಾಗಲು ಸಮನ್ಸ್ ಜಾರಿ

ಕಲಬುರಗಿ: ಕಲಬುರಗಿ ನಗರದ ದರ್ಗಾ ಹಜರತ್ ಮೌಲಾಲಿ ಶಹಾಬಜಾರ ಅಧಿಸೂಚಿತ ವಕ್ಫ್ ಸಂಸ್ಥೆಗೆ ಸೇರಿದ ಆಸ್ತಿಗಳಿಗೆ ಸಂಬಂಧಿಸಿದಂತೆ ಅನಧೀಕೃತ ಆಸ್ತಿ ಮಾರಾಟ ಹಾಗೂ ಖರೀದಿಸಿದ ತಲಾ ೮ ಜನ ಪ್ರತಿವಾದಿಗಳನ್ನು ೨೦೧೯ರ ಡಿಸೆಂಬರ್ ೧೨ರಂದು ಮಧ್ಯಾಹ್ನ ೩ ಗಂಟೆಗೆ ವಿಚಾರಣಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕರ್ನಾಟಕ ವಕ್ಫ್ ಬೋರ್ಡ್ ಬೆಂಗಳೂರು ಇಲ್ಲಿ ಖುದ್ದಾಗಿ ಅಥವಾ ವಕೀಲರ ಮೂಲಕ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲಾ ವಕ್ಫ್ ಅಧಿಕಾರಿಗಳು ತಿಳಿಸಿದ್ದಾರೆ.

ವಕ್ಫ್ ಕಾಯ್ದೆ ೧೯೫೫ರ ಅಧಿನಿಯಮ ೫೨ರ ಅಡಿಯಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದೆ.
ವಿಚಾರಣೆ ಸಂಖ್ಯೆ ಇ.ಎನ್.ಕ್ಯೂ./೫೦/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/೧ಬಿ, ಪ್ಲಾಟ್ ನಂ. ೫೨ನ್ನು ಕಲಬುರಗಿ ಕೈಲಾಸ ನಗರದ ಬಸವರಾಜ ಶಿವಶರಣಪ್ಪ ಪಾಟೀಲ ಇವರು ಸಂಗಪ್ಪ ಶಿವಲಿಂಗಪ್ಪ ಮದರಿ ಅವರಿಗೆ ಮಾರಾಟ, ವಿಚಾರಣೆ ಸಂಖ್ಯೆ ಇ.ಎನ್.ಕ್ಯೂ./೫೧/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/ಬಿ, ಪ್ಲಾಟ್ ನಂ. ೭೩ನ್ನು ಕಲಬುರಗಿ ಆಳಂದ ರಸ್ತೆಯ ಕೈಲಾಸ ನಗರದ ರೇವಣಸಿದ್ದಪ್ಪ ಶರಣಪ್ಪ ಬೇಲೂರ ಇವರು ಜಯಾ ಪಟೇಲ್ ಲಾಲಜೀ ಭಾಯಿ ಪಟೇಲ್ ಅವರಿಗೆ ಮಾರಾಟ, ವಿಚಾರಣೆ ಸಂಖ್ಯೆ ಇ.ಎನ್.ಕ್ಯೂ./೫೨/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/ಬಿ, ಪ್ಲಾಟ್ ನಂ. ೫೧ ನ್ನು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೌಡಗಾಂವದ ಮಲ್ಲಿಕಾರ್ಜುನ ಅಣ್ಣಾರಾವ ಪಾಟೀಲ ಅವರು ಶ್ರೀನಿವಾಸ ಆರ್. ಸೋದಮ್ ರೇವನ್ನಾಥ ಸೋದಮ್ ಅವರಿಗೆ ಪ್ಲಾಟ್ ಮಾರಾಟ ಮಾಡಿದ್ದಾರೆ.

ವಿಚಾರಣೆ ಸಂಖ್ಯೆ ಇ.ಎನ್.ಕ್ಯೂ/೫೭/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/೧ಬಿ, ಪ್ಲಾಟ್ ನಂ. ೫೪ ನ್ನು ಕಲಬುರಗಿ ಶೆಟ್ಟಿ ಕಾಂಪ್ಲೆಕ್ಸ್ ಮಿಲ್ ರಸ್ತೆಯ ಎಂ.ಎಸ್. ಶೆಟ್ಟಿ ಕನ್‌ಸ್ಟ್ರಕ್ಷನ್ ಇವರು ವನವಾಡಾ ಸಂಗೀತಾ ರಾಜು ಗಂಡ ವನವಾಡಾ ರಾಜು ಅವರಿಗೆ ಮಾರಾಟ ಹಾಗೂ ವಿಚಾರಣೆ ಸಂಖ್ಯೆ ಇ.ಎನ್.ಕ್ಯೂ/೫೮/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/೧ಬಿ, ಪ್ಲಾಟ್ ನಂ. ೭೪ ನ್ನು ಕಲಬುರಗಿ ಶೆಟ್ಟಿ ಕಾಂಪ್ಲೆಕ್ಸ್‌ನ ಮಿಲ್‌ನ ರಸ್ತೆಯ ಎಂ.ಎಸ್. ಶೆಟ್ಟಿ ಕನ್‌ಸ್ಟ್ರಕ್ಷನ್ ಇವರು ಕುಪೇಂದ್ರ ತಂದೆ ಧರ್ಮರಾವ ಚಿಂಚೋಳಿ ಅವರಿಗೆ ಪ್ಲಾಟ್ ಮಾರಾಟ ಮಾಡಿದ್ದಾರೆ.

ವಿಚಾರಣೆ ಸಂಖ್ಯೆ ಎ.ಎನ್.ಕ್ಯೂ./೫೯/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/೧ಬಿ, ಪ್ಲಾಟ್ ನಂ. ೬೧ ನ್ನು ಕಲಬುರಗಿ ಶೆಟ್ಟಿ ಕಾಂಪ್ಲೆಕ್ಸ್ ಮಿಲ್‌ನ ರಸ್ತೆಯ ಎಂ.ಎಸ್. ಶೆಟ್ಟಿ ಕನ್‌ಸ್ಟ್ರಕ್ಷನ್ ಇವರು ಬಾಗವಾನ ನರಹರಿರಾವ್ ಅಷ್ಠೇಕರ್ ಅವರಿಗೆ ಮಾರಾಟ ಹಾಗೂ ವಿಚಾರಣೆ ಸಂಖ್ಯೆ ೬೦/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/೧ಬಿ, ಪ್ಲಾಟ್ ನಂ. ೪೬ ನ್ನು ಕಲಬುರಗಿ ಶೆಟ್ಟಿ ಕಾಂಪ್ಲೆಕ್ಸ್ ಮಿಲ್ ರಸ್ತೆಯ ಎಂ.ಎಸ್. ಶೆಟ್ಟಿ ಕನ್‌ಸ್ಟ್ರಕ್ಷನ್ ಇವರು ದಿನೇಶ ಜಯಂತಿಲಾಲ್ ಟ್ಯಾಂಕ್ ಅವರಿಗೆ ಪ್ಲಾಟ್ ಮಾರಾಟ ಹಾಗೂ ವಿಚಾರಣೆ ಸಂಖ್ಯೆ ಇ.ಎನ್.ಕ್ಯೂ../೬೧/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/೧ಬಿ, ಪ್ಲಾಟ್ ನಂ. ೪೯/ಎ ನ್ನು ಕಲಬುರಗಿ ಶಹಾಬಜಾರನ ಚಂದ್ರಕಲಾ ಗಂಡ ರೇವಣಯ್ಯಾ ಇವರು ತಮೀಳನಾಡ್ ಮೇರ್‌ಕ್ಯಾನ್‌ಟೈಲ್ ಬ್ಯಾಂಕ್ ಲಿಮಿಟೆಡ್ (Tamilnad Mercantile Bank Ltd) ಅವರಿಗೆ ಪ್ಲಾಟ್ ಮಾರಾಟ ಮಾಡಿದ್ದಾರೆ.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

6 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

9 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

9 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

9 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

9 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

9 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420