ಸುರಪುರ: ನಗರದ ಜನತೆಗೆ ಸದಾಕಾಲ ಕಾಡುವ ಸಮಸ್ಯೆಗಳಲ್ಲಿ ಮೂಲವಾದುದು ಕುಡಿಯುವ ನೀರಿನ ಸಮಸ್ಯೆ.ಇದರ ನಿವಾರಣಗೆ ಜನರು ನಿತ್ಯವೂ ಹೋರಾಟ ಮಾಡುತ್ತಾರೆ.ಆದರೆ ಶಾಸ್ವತ ಪರಿಹಾರಮಾತ್ರ ಮರೀಚಿಕೆಯಾಗಿದೆ.
ಇದರ ಮದ್ಯೆ ಆಗಾಗ ಒಂದಿಷ್ಟು ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆಯಾದರೂ ನದಿಯಿಂದ ನಗರದಲ್ಲಿರುವ ಟ್ಯಾಂಕ್ಗಳಿಗೆ ನೀರು ತುಂಬಿಸುವ ಮುನ್ನವೇ ಅಪಾರ ಪ್ರಮಾಣದ ನೀರು ಪೈಪ್ ಒಡೆದು ವ್ಯರ್ಥ ಹರಿದು ಹೋಗುತ್ತಿದೆ. ನಗರಸಭೆ ದುರಸ್ಥಿಗೆ ಮುಂದಾಗದೆ ತಮಗು ಅದಕ್ಕೂ ಸಂಬಂಧವೆ ಇಲ್ಲ ಎನ್ನುವಂತೆ ಇರುವುದು ಜನರಲ್ಲಿ ಬೇಸರ ಮೂಡಿಸಿದೆ.
ಕೃಷ್ಣಾ ನದಿಯಿಂದ ನಗರದಲ್ಲಿರುವ ಹುಲಕಲ್ ಗುಡ್ಡದಲ್ಲಿನ ಟ್ಯಾಂಕರ್ಗೆ ನೀರು ತುಂಬಿಸಲಾಗುತ್ತದೆ,ಈ ಟ್ಯಾಂಕರಿನಿಂದ ನಗರದ ಅನೇಕ ವಾರ್ಡುಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ.ಆದರೆ ಟ್ಯಾಂಕರಿಗೆ ಜೋಡಿಸಿದ ಪೈಪ್ಗಳು ಒಡೆದು ಅನೇಕ ತಿಂಗಳುಗಳಾದರೂ ಅವುಗಳ ದುರಸ್ಥಿ ಇಲ್ಲ.ಇದರಿಂದ ಕುಡಿಯುವ ನೀರಿನ ಸಮಸ್ಯೆ ಮತ್ತಿಷ್ಟು ಹೆಚ್ಚಾಗುತ್ತಿದೆ.ಇದರ ಕುರಿತು ಸಾರ್ವಜನಿಕರು ಅನೇಕ ಬಾರಿ ನಗರಸಭೆಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ಮನವಿ ಮಾಡಿದರು ಕ್ರಮಕ್ಕೆ ಮುಂದಾಗುತ್ತಿಲ್ಲವೆಂದು ಸಂಘ ಸಂಸ್ಥೆಗಳು ಮತ್ತು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ವಿಷಯದ ಕುರಿತು ಸಗರಸಭೆಯ ಅಧಿಕಾರಿಗಳಿಗೆ ಕೇಳಿದರೆ ಅವರುಗಳು ಎಂದಿನಂತೆ ಸಬೂಬುಗಳನ್ನು ಹೇಳುತ್ತಾರೆ.ಈಗಾಗಲೆ ಪೈಪ್ಗಳ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದೆ.ಟೆಂಡರ್ ಮುಗಿದಿದ್ದು ಕೆಲವು ದಿನಗಳಲ್ಲಿ ಹೊಸ ಪೈಪ್ಗಳನ್ನು ಹಾಕಲಾಗುತ್ತಿದೆ.ಅಲ್ಲಿವರೆಗೂ ನೀರು ಪೋಲಾಗುವುದನ್ನು ತಡೆಯಲು ಆಗದು.ಕೆಲವು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎನ್ನುತ್ತಾರೆ ನಗರಸಭೆ ಪೌರಾಯುಕ್ತರು.
ಒಡೆದ ಪೈಪ್ಗಳ ಸಮಸ್ಯೆಯ ಕುರಿತು ಮೇದಾಗಲ್ಲಿ, ಗುಡಾಳಕೇರಾ, ಗಾಂಧಿ ನಗರ, ಬೋವಿಗಲ್ಲಿ ಸೇರಿದಂತೆ ಹುಲಕಲ್ ಗುಡ್ಡದ ಟ್ಯಾಂಕ್ ನೀರು ಉಪಯೋಗಿಸುವ ಅನೇಕ ವಾರ್ಡುಗಳ ಜನತೆ ನಗರಸಭೆ ವಿರುಧ್ಧ ತಮ್ಮ ಬೇಸರ ಹೊರಹಾಕುತ್ತಿದ್ದಾರಲ್ಲದೆ. ಕೂಡಲೆ ಈ ಪೈಪಗಳ ದುರಸ್ಥಿಯಾಗಲಿ ಅಥವಾ ಹೊಸ ಪೈಪ್ಗಳ ಹಾಕುವುದಾಗಲಿ ಮಾಡದಿದ್ದಲ್ಲಿ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಸಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದಾರೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…