ಇಂಡೊನೇಷ್ಯಾ: ಹಣದ ದುರ್ಬಳಕೆ, ಸಮಯದ ಉಳಿತಾಯ ಮಾಡಲು ಇಂಡೊನೇಷ್ಯಾ ಸರ್ಕಾರ ಒಂದೇ ದಿನದಲ್ಲಿ ಅಧ್ಯಕ್ಷಿಯ ಚುನಾವಣೆ, ಸಂಸದೀಯ ಚುನಾವಣೆ ಸೇರಿದಂತೆ ಸ್ಥಳೀಯ ಚುನಾವಣೆಗಳನ್ನೂ ಏಪ್ರಿಲ್ 17 ರಂದು ನಡೆಸಿತ್ತು. ಮೇ 22 ರಂದು ಎಲ್ಲಾ ಚುನಾವಣೆಯ ರಿಸಲ್ಟ್ ಘೋಷಣೆ ಆಗಲಿದ್ದು, ಮತ ಎಣಿಕೆ ಕಾರ್ಯದಲ್ಲಿ ತೊಡಗಿದ ಅಧಿಕಾರಿಗಳ ಪೈಕಿ 270ಕ್ಕೂ ಹೆಚ್ಚು ಅಧಿಕಾರಿ ಹಾಗೂ ಸಿಬ್ಬಂದಿಗಳು ಮೃತಪಟ್ಟಿರುವ ಘಟನೆ ಇಂಡೊನೇಷ್ಯಾ ದೇಶದಲ್ಲಿ ನಡೆದಿದೆ.
ಸುಮಾರು 8 ಲಕ್ಷ ಪೋಲಿಂಗ್ ಬೂತ್ಗಳಲ್ಲಿ, ಶೇಕಡ 80% ರಷ್ಟು ಮತದಾನ ಆಗಿದೆ. ಏಕಕಾಲಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷಿಯ ಚುನಾವಣೆ, ಸಂಸದೀಯ ಚುನಾವಣೆ ಸೇರಿದಂತೆ ಸ್ಥಳೀಯ ಚುನಾವಣೆಗಳಿಗೂ ಸೇರಿ 5 ರೀತಿಯ ಚುನಾವಣೆಗಳಿಗೆ ಮತದಾರರು ಮತ ಹಾಕಿದ್ದಾರೆ. ಮತದಾನಕ್ಕೆ ವೋಟಿಂಗ್ಗೆ ಮತಪತ್ರಗಳನ್ನ ಬಳಸಲಾಗಿದೆ. ಈ ಮತಗಳನ್ನು ಅಧಿಕಾರಿಗಳು ಖುದ್ದು ಕೈಯಿಂದ ಎಣಿಸಬೇಕು ಮತ್ತು ವಿಂಗಡಿಸಬೇಕು. ಈ ಪ್ರಕ್ರಿಯೆಗಾಗಿ ಸಾವಿರಾರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಧಿಕಾರಿಗಳು ಮತದಾನವಾಗಿರುವ ಮತಗಳನ್ನು ಕೈನಿಂದಲೇ ಮತಗಳನ್ನ ಎಣಿಸಬೇಕಾಗಿದ್ದು, ನಿನ್ನೆಯಿಂದ ಸತತವಾಗಿ ಮತ ಎಣಿಕೆ ನಡಿಯುತ್ತಿದೆ. ಆದರೆ ಮತ ಎಣಿಕೆಯ ಸ್ಟ್ರೆಸ್ ತಡೆಯಲಾಗದೆ ಇಲ್ಲಿವರೆಗೂ 270ಕ್ಕೂ ಹೆಚ್ಚು ಅಧಿಕಾರಿ ಹಾಗೂ ಸಿಬ್ಬಂದಿಗಳು ಮೃತಪಟ್ಟಿದ್ದಾರೆಂದು ತಿಳಿದುಬಂದಿದ್ದು, ಇನ್ನೂ ಮತ ಎಣಿಕೆ ಕಾರ್ಯ ಬಾಕಿ ಇದೆ.
ಮೃತಪಟ್ಟ ಅಧಿಕಾರಿಗಳ ಕುಟುಂಬಕ್ಕೆ ಪರಿಹಾರ ನೀಡಲು ಆರ್ಥಿಕ ಸಚಿವಾಲಯ ಕಾರ್ಯಪ್ರವೃತ್ತವಾಗಿದ್ದು, ಇನ್ನೂ ಕರ್ತವ್ಯ ನಿರತ ಅಧಿಕಾರಿಗಳ ಆರೋಗ್ಯದ ಬಗ್ಗೆ ಗಮನಹರಿಸಲು ತಜ್ಞ ವೈದ್ಯರನ್ನೂ ನೇಮಿಸಿ ವ್ಯವಸ್ಥೆಯು ಮಾಡಲಾಗಿದೆಂದು ಮಾಹಿತಿ ಇದೆ.
ಕಲಬುರಗಿ: ಕಲ್ಯಾಣ ಕರ್ನಾಟಕ ವಿಭಾಗದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾದ ಮಾರ್ಗದರ್ಶಿ ತರಬೇತಿ ಕೇಂದ್ರ ಕಲಬುರಗಿಯಲ್ಲಿ ನೂತನ ಗ್ರಂಥಾಲಯವನ್ನು…
ಸುರಪುರ: ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಸರಕಾರ ದಿಂದ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ…
ಸುರಪುರ: ಕಣ್ವಮಠದ ಯತಿಗಳಾದ ವಿದ್ಯಾ ತಪೋನಿಧಿ ತೀರ್ಥರ ಆರಾಧನೆ ಜೂನ್ 22 ರಿಂದ 24 ರವರೆಗೆ, ವಿದ್ಯಾಮನೋಹರ ತೀರ್ಥರ ಆರಾಧನೆ…
ಸುರಪುರ: ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆ ವತಿಯಿಂದ ಬೇಸಿಗೆ ಸಂದರ್ಭದಲ್ಲಿ ಮಕ್ಕಳಿಗಾಗಿ ಯೋಗ…
ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಜೂನ್ 3 ರಂದು ನಡೆಯುವ ಮತದಾನಕ್ಕೆ ಕ್ಷೇತ್ರದಾದ್ಯಂತ 99,121 ಪುರುಷರು, 57,483…
ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…