ಕಾರ್ಮಿಕರಿಗೆ ವೇತನದ ದಾನ ಧರ್ಮ ಬೇಕಾಗಿಲ್ಲ: ಕೆ. ಸೋಮಶೇಖರ

ಕಲಬುರಗಿ/ಸೇಡಂ: ಕಾರ್ಮಿಕರಿಗೆ ವೇತನದ ದಾನ ಧರ್ಮ ಬೇಕಾಗಿಲ್ಲ, ದುಡಿದಿರುವ ಕೆಲಸಕ್ಕೆ ಸರಿಯಾಗಿ ವೇತನವನ್ನು ಗೌರವದಿಂದ ಪಾವತಿಸಿ ಎಂದು ಎ.ಐ.ಯು.ಟಿ.ಯು.ಸಿ ರಾಜ್ಯ ಕಾರ್ಯದರ್ಶಿಗಳು ಕೆ. ಸೋಮಶೇಖರ ಬಳ್ಳಾರಿ ಹೇಳಿದರು.

ಸೇಡಂ ನಲ್ಲಿ ನಡೆದ ಪ್ರಥಮ ಕಾರ್ಮಿಕ ಸಮ್ಮೇಳನಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಹಿರಿಯರೂ, ಸಾಹಿತಿಗಳೂ ಆಗಿರುವ ಶ್ರೀ ಲಿಂಗಾರೆಡ್ಡಿ ಶೇರಿಕರ್ ರವರು ಮಾತನಾಡುತ್ತಾ – ನಮ್ಮ ಸಮಯಕ್ಕೆ ತಕ್ಕ ಬೆಲಯನ್ನು ಸರ್ಕಾರಗಳು ಕೊಡದೇ ಇರುವುದು ದುಃಖಕರ ವಿಷಯವಾಗಿದೆ. ಕಾರ್ಮಿಕರನ್ನು ಕನಿಷ್ಠವಾಗಿ ನೋಡಕೊಳ್ಳಲಾಗುತ್ತಿದೆ. ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳುವ ಕೆಲಸಕ್ಕೆ ಜೀವನ ಭದ್ರತೆಯೇ ಇಲ್ಲ. ಆದ್ದರಿಂದಲೇ ಸಮಾನವಾದ ಬಾಳಿಗಾಗಿ ಹೋರಾಡಬೇಕಾಗಿದೆ ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸಂಘಟನೆಯ ರಾಜ್ಯ ಕಾರ್ಯದರ್ಶಿಗಳಾದ ಕಾಮ್ರೇಡ್ ಕೆ. ಸೋಮಶೇಖರ್ ಬಳ್ಳಾರಿ ಯವರು ಮಾತನಾಡುತ್ತಾ _ ದೇಶದಲ್ಲಿ ಕಾರ್ಮಿಕರ ಪರಿಸ್ಥಿತಿ ಭೀಕರವಾಗಿದೆ. ನಿನ್ನೆಯಷ್ಟೇ ಹಸಿವೆಯನ್ನು ತಾಳದೆ ತಮಿಳುನಾಡಿನಲ್ಲಿ ಒಂದು ಮಗು ಮಣ್ಣು ತಿಂದು ಹೊಟ್ಟೆ ತುಂಬಿಸಿಕೊಂಡಿದೆ. ದಿನವಿಡೀ ಕೆಲಸಮಾಡುವ ಎಲ್ಲರಿಗೂ ನೌಕರರಿಗೆ ಸರ್ಕಾರಿ ನೌಕಕರೆಂದು ಪರಿಗಣಿಸಬೇಕು. ಈಗಿರುವ ವೇತನದಲ್ಲಿಯೇ ತಿಂಗಳ ಜೀವನ ನಡೆಸಲು ಆಗುವುದಿಲ್ಲ. ಕೇವಲ ೮೫ ಮನೆತನಗಳು ದೇಶದ ಸಂಪತ್ತು ಅವರ ಕೈಯಲ್ಲಿಟ್ಟುಕೊಂಡಿದ್ದಾರೆ. ಬೆಲೆಏರಿಕೆಯ ಈ ದಿನಗಳಲ್ಲಿ ಈಗ ಕಾರ್ಮಿಕರಿಗೆ ಕನಿಷ್ಠ ೨೧,೦೦೦ ರೂ. ವೇತನ ನೀಡಬೇಕೆಂದು ದೇಶದಾದ್ಯಂತ ಕಾರ್ಮಿಕರು ಹೋರಾಡಿದರೂ ಸರ್ಕಾರಗಳು ಮನಸ್ಸು ಮಾಡುತ್ತಿಲ್ಲ. ಏಕೆಂದರೆ ಆಳುವ ಎಲ್ಲಾ ಸರ್ಕಾರಗಳು ಕಾಂಇಕ ವಿರೋಧಿಯಾಗಿವೆ. ಬಂಡವಾಳಶಾಹಿಗಳ ಪರವಾಗಿ ಕಾನೂನುಗಳನ್ನು ಜಾರಿಗೊಳಿಸುತ್ತಿವೆ.

ಈ ಕಾನೂನುಗಳನ್ನು ಕಾರ್ಮಿಕರು ರಕ್ತ ಹರಿಸಿದ್ದರಿಂದ ರಚಿಸಲಾಗಿದೆ. ಆದರೆ, ಮೋದಿಯವರ ಜಿ.ಎಸ್.ಟಿ. ಜಾರಿಗೊಳಿಸಿದಾಗಿನಿಂದಲೂ ಲಕ್ಷಾಂತರ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಲಾಗುತ್ತಿದೆ. ದಿನಗೂಲಿ ಗುತ್ತಿಗೆಯ ಹೆಸರಿನಲ್ಲಿ ಜುಜುಬಿ ಹಣವನ್ನು ನೀಡಿ ಮೋಸ ಮಾಡಿ ದುಡಿಸಿಕೊಳ್ಳಲಾಗುತ್ತಿದೆ. ಅಂಬಾನಿ ಅದಾನಿಗಳಿಗಾಗಿ ದೇಶದ ಬೊಕ್ಕಸವನ್ನೇ ದಾರೆಯೆರುಯುತ್ತಿದ್ದಾರೆ. ಆದರೆ ಜನತೆಗಾಗಿ ಮಾತ್ರ ಏನು ಇಲ್ಲ. ಯಾವ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಈ ಅನ್ಯಾಯ ಶೋಷಣೆಗಳನ್ನು ಸರಿಪಡಿಸಲಿಕ್ಕಾಗುವುದಿಲ್ಲ. ಆದ್ದರಿಂದಲೇ, ಆಮೂಲಾಗ್ರ ಕಾರ್ಮಿಕರ ಹೋರಾಟವನ್ನು ಬೆಳೆಸಿ ಕಾರ್ಮಿಕರ ಸಮಾಜ ಬರುವವರೆಗೂ ಮುಂದುವರೆಸಬೇಕು. ಅಲ್ಲಿ ಶೋಷಣೆ, ಅನ್ಯಾಯ ಇರದ ಸಮಾಜಕ್ಕಾಗಿ ಹೋರಾಡಬೇಕಾಗಿದೆ. ಈ ಸಮ್ಮೇಲನವು ಅನ್ಯಾಯದ ವಿರುದ್ಧ ಹೋರಾಡಲು, ಸಂಘಟನೆಯನ್ನು ಬಲಪಡಿಸಲು ಇರುವುದರಿಂದ ಎಲ್ಲರೂ ಜವಾಬ್ದಾರಿಗಳನ್ನು ತೆಗೆದುಕೊಂಡು ಜಿಲ್ಲೆಯಲ್ಲಿ ಬಲಿಷ್ಠ ಕಾರ್ಮಿಕ ಹೋರಾಟಕ್ಕೆ ಸಜ್ಜಾಗಬೇಕೆಂದು ಕರೆ ನೀಡಿದರು.

ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಎಸ್.ಯು.ಸಿ.ಐ.(ಸಿ) ನ ಜಿಲ್ಲಾ ಸಮಿತಿಯ ಸೆಕ್ರೆಟ್ರಿಯೇಟ್ ಸದಸ್ಯರಾದ  ಆರ್. ಕೆ. ವೀರಭದ್ರಪ್ಪ ರವರು ಮಾತನಾಡುತ್ತಾ – ಗೌರವಧನ, ಸಹಾಯಧನ, ಹೊರಗುತ್ತಿಗೆ ಹೆಸರಿನಲ್ಲಿ ಕಾರ್ಮಿಕರನ್ನು ಹೀನಾಯವಾಗಿ ದುಡಿಸಿಕೊಳ್ಳುತ್ತಿದೆ. ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ಸರ್ಕಾರಗಳು ಇಂತಹ ದುರ್ನೀತಿಗಳನ್ನು ತರುತ್ತಿದೆ. ನೀತಿ ಆಯೋಗದ ಪ್ರಕಾರ ಈಗಾಗಲೇ ೪೨ ದೊಡ್ಡ ಕೈಗಾರಿಕೆಗಳನ್ನು ಖಾಸಗೀಯವರಿಗೆ ಒಪ್ಪಿಸಲು ಸರ್ಕಾರವು ಸಿದ್ಧವಾಗಿದೆ. ಅಚ್ಛೇ ದಿನ ಹೆಸರಿನಲ್ಲಿ ಕಾರ್ಮಿಕರನ್ನು ಶೋಷಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿಯಾಗಿವೆ. ಹಿಗಾಗಿ ಕಾರ್ಮಿಕರ ಹತ್ತಿರ ಕೇವಲ ಮಾಂಸಖಂಡ ಮತ್ತು ಎಲುಬುಗಳ ಹೊರತು ಇನ್ನೇನು ಉಳಿದಿಲ್ಲ ಎಂದರು.

ಭಾಷಣಕಾರರಾಗಿ ಆಗಮಿಸಿದ್ದ ಕಾಂಇಕ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಕಾಮ್ರೇಡ್ ಕೆ. ಸೋಮಶೇಖರ್ ಯಾದಗಿರಿ,  ಅಂಗನವಾಡಿ ನೌಕರರ ಸಂದ ರಾಜ್ಯ ಉಪಾಧ್ಯಕ್ಷರಾದ ಕಾಮ್ರೇಡ್ ಡಿ. ಉಮಾದೇವಿಯವರು, ಕಾಮ್ರೇಡ್ ಎಸ್.ಎಂ. ಶರ್ಮಾ ರವರು ಮಾತನಾಡಿದರು.

ಸಮ್ಮೇಳನದ ಬೇಡಿಕೆಗಳನ್ನು ತೆಗೆದುಕೊಂಡು ನಗರದಾದ್ಯಂತ ಮುಖ್ಯರಸ್ತೆಯಲ್ಲಿ ಮೆರವಣಿಗೆಯನ್ನು ಮಾಡಿ ನಗರದ ಕೆ.ಎನ್.ಝಡ್. ಹಾಲ್ ನಲ್ಲಿ ಬಹಿರಂಗ ಸಭೆಯನ್ನು ನಡೆಸಲಾಯಿತು. ನಂತರ ಮೊದಲಿಗೆ ಇತ್ತೀಚೆಗೆ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಕೊಲೆ ಪ್ರಕರಣಗಳನ್ನು ಖಂಡಿಸಿ ಖಂಡನಾಪತ್ರವನ್ನು ಮಂಡಿಸಲಾಯಿತು. ಸಂಯುಕ್ತ ಅಂಗನವಾಡಿ ಸಂಘಟನೆಯ ಸೇಡಂ ತಾಲ್ಲೂಕಿನ ಅಧ್ಯಕ್ಷರಾದ ಕಾಮ್ರೇಡ್ ನಾಗಮಣಿಯವರು ಮಂಡಿಸಿದರು.

ವೇದಿಕೆಯ ಮೇಲೆ ಜಿಲ್ಲಾ ಸಮಿತಿಯ ವಿ.ಜಿ. ದೇಸಾಯಿ, ಮಹೇಶ ನಾಡಗೌಡ, ಸಂತೋಷ್ ಕುಮಾರ್ ಹಿರವೆ, ಭಾಗಣ್ಣ ಬುಕ್ಕಾರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಧ್ಯಕ್ಷರಾದ ಕಾಮ್ರೇಡ್ ರಾಘವೇದ್ರ ಎಂ.ಜಿ. ಯವರು ಅಧ್ಯಕ್ಷತೆ ವಹಿಸಿದ್ದರು.

emedialine

Recent Posts

ಸುರಪುರ:ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಅಂಗವಾಗಿ ಪೂರ್ವಭಾವಿ ಸಭೆ

ಸುರಪುರ: ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಅಂಗವಾಗಿ ನಗರದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ…

2 mins ago

ಕೃಷಿ ಇಲಾಖೆ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ

ಸುರಪುರ: ನಮ್ಮ ಸರಕಾರ ರೈತರಿಗಾಗಿ ಹಲವಾರು ಯೋಜನೆಗಳನ್ನು ಜೊರಿಗೊಳಿಸಿದ್ದು ರೈತರು ಸರಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳ ಬೇಕು ಎಂದು ಶಾಸಕ…

3 mins ago

ವಿದ್ಯಾರ್ಥಿನಿಯರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಸೈಕಲ್‍ ವಿತರಣೆ

ಕಲಬುರಗಿ: ನಗರದ ಎನ್.ವಿ ಸಂಸ್ಥೆಯ ಸತ್ಯಪ್ರಮೋದತೀರ್ಥ ಸಭಾಂಗಣದಲ್ಲಿ ಎನ್.ವಿ ಸಂಸ್ಥೆ ಮತ್ತು ರೋಟರಿ ಕ್ಲಬ್ ಆಫ್ ಗುಲಬರ್ಗ ನಾರ್ಥವತಿಯಿಂದ ವಿದ್ಯಾರ್ಥಿನಿಯರಿಗೆ…

10 mins ago

ಕಲಬುರಗಿಯಲ್ಲಿ ರೈತರ ಜಿಲ್ಲಾ ಸಮಾವೇಶ

ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಶಾಖೆ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿದ್ದ ಜಿಲ್ಲಾ ರೈತ ಸಮಾವೇಶವನ್ನು ಸಂಘದ…

12 mins ago

ಪ್ರಶಾಂತ ಡಿ ಜಾನಕರ ರಾಷ್ಟ್ರಮಟ್ಟಕ್ಕೆ ಆಯ್ಕೆ

ಕಲಬುರಗಿ: ದಾವಣಗೆರೆಯಲ್ಲಿ ನಡೆದ ಸಿ.ಬಿ.ಎಸ್.ಇ ಕ್ಲಸ್ಟರ 8ನೇ ಎಥ್ಲೇಟಿಕ್ ಮೀಟ್ 2024-25 ರಾಜ್ಯ ಮಟ್ಟದ 200 ಮಿಟರ್ ಓಟದ ಸ್ಪರ್ಧೆಯಲ್ಲಿ…

15 mins ago

ಶಿಕ್ಷಕಿ ನಿರ್ಮಲಾ ವೀರಭದ್ರಪ್ಪ ದೇಸಾಯಿಗೆ ಬಿಳ್ಕೊಡುಗೆ

ಕಲಬುರಗಿ: ಕಮಲಾಪೂರ ತಾಲೂಕಿನ ಯಕ್ಕಂಚಿ ಗ್ರಾಮದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ನಿರ್ಮಲಾ ವೀರಭದ್ರಪ್ಪ ದೇಸಾಯಿ ಇವರ…

20 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420