ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ: ನ್ಯಾ. ನಾಗಮೋಹನ್ ದಾಸ್‌ಗೆ ಮನವಿ

ಕಲಬುರಗಿ: ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ ಜಾ ಜನಗಳಿಗೆ ಶೇ. ೩೪ ಮತ್ತು ಪ.ಪಂಗಡದ ಜನಗಳಿಗೆ ಶೇ. ೧೦ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಗರದ ರಂಗಮಂದಿರದಲ್ಲಿ ನಡೆದ ಪ ಜಾ/ಪ ಪಂ ಗಳ ಜನರಿಗೆ ಮೀಸಲಾತಿ ಹೆಚ್ಚಳ ವಿಭಾಗ ಮಟ್ಟದ ಸಮಾಲೋಚನಾ ಸಭೆಗೆ ಆಗಮಿಸಿದ್ದ ನ್ಯಾಯ ಮೂರ್ತಿ ಎಚ್.ಎಸ್. ನಾಗಮೋಹನದಾಸ ಅವರಿಗೆ ಜಿಲ್ಲಾ ದಲಿತ ಯುವ ಸಮನ್ವಯ ಸಮಿತಿ ಕಲಬುರಗಿ ವತಿಯಿಂದ ಮನವಿ ಸಲ್ಲಿಸಲಾಯಿತು.

ರಾಜ್ಜದಲ್ಲಿ ಪ. ಜಾ/ಪ. ಪಂ ದ ಜನರು ೨೦೧೧ ರ ಜನಗಣತಿ ಪ್ರಕಾರ ೧ ಕೋಟಿ ೪ ಲಕ್ಷದ ೭೪ ಸಾವಿರದ ೯೯೨ (೧,೦೪,೭೪,೯೯೨ಪ ಜಾ) (೪೨೪೮೯೮೭ಪ ಪಂ) ಜನ ಸಂಖ್ಯೆ ಇದ್ದು ೨೦೨೧ ರಲ್ಲಿ ಸದರಿ ಜಾತಿಗಳ ಸಂಖ್ಯೆ ೧.೫೦ಕೋಟಿ ಪ ಜಾ ಮತ್ತು ೫೫ ಲಕ್ಷ ಪ ಪಂ ಜನರ ಸಂಖ್ಯೆ ಆಗುತ್ತದೆ ಆದ್ದರಿಂದ ಪ ಜಾ/ಪ ಪಂ ಜನರ ಒಟ್ಟಾರೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿ ಇದುವರೆಗೂ ಅದೋಗತಿಯಲ್ಲಿದೆ. ಕರ್ನಾಟಕ ರಾಜ್ಯದಲ್ಲಿ ಪ ಜಾ/ಪ ಪಂ ಜನರ ಅಭಿವೃದ್ಧಿಗೋಸ್ಕರ ಮಹಾನಗರ ಪಾಲಿಕೆ/ನಗರಸಭೆ/ಪುರಸಭೆ/ಜಿ ಪಂ/ತಾ ಪಂ/ಪಟ್ಟಣ ಪಂಚಾಯತ/ಗ್ರಾ ಪಂ ಗಳಲ್ಲಿ ಶೇ ೨೪.೧೦ ಪ ಜಾ ಮತ್ತು ಶೇ ೭.೫ ಪ ಪಂ ದ ಜನರಿಗೆ ಮೀಸಲಿಟ್ಟು ಅಭಿವೃದ್ಧಿಗೊಳಿಲಾಗುತ್ತಿದೆ. ಆದರೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ ಜಾ/ಪ ಪಂ ಜನಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಾ ಇದ್ದರೂ ಶೇ ೧೫ ಮತ್ತು ಶೇ ೩ ಮೀಸಲಾತಿ ನೀಡುತಿದ್ದು ಇದೂವರೆಗೂ ಹೆಚ್ಚಳವಾಗಿಲ್ಲ ಆದರೆ ತಮಿಳುನಾಡಿಲ್ಲಿ ಶೇ ೬೯, ಮಹಾರಾಷ್ಟ್ರದಲ್ಲಿ ಶೇ ೬೫, ಮಿಜೋರಾಮನಲ್ಲಿ ಶೇ ೭೨. ಮತ್ತು ಕಳೆದ ವರ್ಷ ಕೇಂದ್ರ ಸರ್ಕಾರ ಮೇಲ್ಜಾತಿಯ ಬಡವರಿಗೆ ಶೇ ೧೦ ಮೀಸಲಾತಿಯನ್ನು ನೀಡಲಾಗುತ್ತಿದೆ. ಆದ್ದರಿಂದ ಪ ಜ/ಪ ಪಂ ಜನರಿಗೆ ಈಗಿನ ಜನಸಂಖ್ಯೆಗನುಗುಣವಾಗಿ ಶೇ. ೩೪ ಪ. ಜಾ ಮತ್ತು ಶೇ ೧೦ ಪ. ಪಂ ಜನರಿಗೆ ಮೀಸಲಾತಿ ನೀಡಬೇಕೆಂದು ಸಂತೋಷ ಮೇಲ್ಮನಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಿದ್ಧಾರ್ಥ ಸಾಳುಂಕೆ, ಪ್ರಕಾಶ ಭಾಲೆ, ರವಿ ಡೋಣಿ, ದಿನೇಶ ದೊಡಮನಿ ಉಪಸ್ಥಿತರಿದ್ದರು.

emedialine

Recent Posts

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

28 mins ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

38 mins ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

40 mins ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

46 mins ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

47 mins ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

52 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420