ಕಲಬುರಗಿ: ನಗರದ ಟಿಪ್ಪು ಸುಲ್ತಾನ್ ಚೌಕ್ ವೃತದಲ್ಲಿ ವಿವಿಧ ಮುಸ್ಲಿಂ ಸಂಘಟನೆಯ ನೇತೃತ್ವದಲ್ಲಿ ವಿವಾದಸ್ಪದ ಪೌರತ್ವ ಕಾಯ್ದೆ ಸಿಎಎಬಿ ಮತ್ತು ಎನ್.ಆರ್.ಸಿ ವಿರೋಧಿಸಿ ಕಾಯ್ದೆಯನ್ನು ಹಿಂದೆಕೆ ಪಡೆಯಬೇಕೆಂದು ಮತ್ತು ಜಾಮಿಯಾ ವಿವಿಯ ವಿದ್ಯಾರ್ಥಿಗಳ ಮೇಲೆ ಅಮಾನವೀಯ ದಾಳಿ ಖಂಡಿಸಿ ಕ್ಯಾಂಡಲ್ ಮಾರ್ಚ್ ದೊಂದಿಗೆ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ ಪಕ್ಷದ ಜಿಲ್ಲಾ ಮುಖಂಡರಾದ ಮೊಹಮ್ಮದ್ ಮೋಹಸಿನ್ ಮಾತನಾಡಿ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಂರು ತಮ್ಮ ಜೀವನವೇ ತ್ಯಾಗಮಾಡಿ ಬ್ರೀಟಿಷರಿಂದ ದೇಶದವನ್ನು ಸ್ವಾತಂತ್ರ್ಯಗೊಳ್ಳಿಸುವುದರಲ್ಲಿ ಬಹುದೊಡ ಪಾತ್ರವಾಗಿದೆ ಎಂಬುದು ಮರೆಯಬೇಡಿ ಎಂದರು.
ದೇಶದಲ್ಲೇಡೆ ಎನ್.ಆರ್.ಸಿ ಮತ್ತು ಸಿ.ಎ.ಎ. ವಿರೋಧಿಸಿ ಜಾತಿ ಮತ ಬಿಟ್ಟು ಹಿಂದೂ, ಕ್ರೀಚ್ಚನ್, ದಲಿತ, ಶಿಖ್ ಮುಸ್ಲಿಂ ಸೇರಿದಂತೆ ಭಾರತೀಯರು ಒಗಟ್ಟಾಗಿ ಹೋರಾಟ ನಡೆಸುತ್ತಿದ್ದಾರೆ. ಸರಕಾರ ಇಂಟೇರ್ ನೇಟ್ ಸೇವೆ ರದ್ದು ಪಡಿಸಿ ಪೊಲೀಸರ ಸಹಾಯದಿಂದ ದೇಶದ ಹೋರಾಟವನ್ನು ಹತ್ತಿಕುವ ಯತ್ನ ಮಾಡುವುದು ಖಂಡನಿಯ.
ಬೆಲೆ ಏರಿಕೆ, ಶಿಕ್ಷಣ, ಆರೋಗ್ಯಗಳ ಹಾಗೂ ಆರ್ಥಿ ಕುಸಿತದ ಕುರಿತು ಹೊಸ ಕಾನೂನು ಮಾಡಲು ಸಿದ್ಧವಿಲ್ಲ ಆದರೆ ದೇಶ ಒಡೆಯುವ ಕಾನೂನು ಜಾರಿ ಮಾಡಿ ಜನರಿಗೆ ತೊಂದರೆ ನೀಡುವ ಕಾನೂನು ಜಾರಿ ಮಾಡುವುದರ ಮೂಲಕ ತಮ್ಮ ಅಸಾಮಾರ್ಥ್ಯವನ್ನು ತೊರಿಸುವಂತಾಗಿದೆ ಎಂದರು.
ಇಂತಹ ವಿವಾದಸ್ಪದ ಕಾನೂನು ಮೂಲಕ ದೇಶದ ಏಕತೆಯನ್ನು ಒಡೆಯುವ ಪ್ರಯತ್ನ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಮಾನವ ಹಕ್ಕುಗಳ ಹೋರಾಟಗಾರ ಮಹಮ್ಮದ್ ರಿಯಾಜೋದಿನ್ ಕತೀಬ್, ಸಯದ್ ಸಾಹೇಬ್ ಪಾಶಾ ಖಾದ್ರಿ, ಶಾಹಿದ್ ಸಾಬ್ ಮೊಹಮದ್ ಶಫಾದ್, ಮೋಹದ್ದೀನ್, ಎಸ್.ಡಿ.ಪಿ.ಐ ಜಿಲ್ಲಾ ಘಟಕದ ಅಧ್ಯಕ್ಷ ಶೇಖ್ ಇಜಾಜ್ ಸಾಬ್ ಸೇರಿದಂತೆ ಹೋರಾಟಗಾರರು ಹಾಗೂ ಸಮಾಜಿಕ ಕಾರ್ಯಕರ್ತರು ಇದ್ದರು.
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…