ಮೈಸೂರು: ಸ್ವಾತಂತ್ರ್ಯ ನಂತರ ಕಾಲದಿಂದ, ಭಾರತವು ದಕ್ಷಿಣ ಏಷ್ಯಾದ ದೇಶಗಳಲ್ಲಿ ದ್ವೇಷಕ್ಕೆ ಗುರಿಯಾಗಿರುವ ಹಲವರಿಗೆ ಆರ್ಶಯವರು ಕೊನರುವದು ಎಲರಿಗೂ ತಿಳಿದಿದೆ. 1959ರಲ್ಲಿ ಟಿಬೇಟಿನ ಮೇಲೆ ಹಲವು ಬಾರಿ ಚೀನಾ ಆಕ್ರಮಣ ಮಾಡಿದಾಗ ದಲಾಯಿಲಾಮಾ ಮತ್ತು ಟೆಬೇಟಿನರಿಂದ ಏಷಾ ಮತ್ತು ಆಫ್ರಿಕಾಗಳ ಯುದ್ಧಪೀಡಿತ ದೇಶಗಳವರೆಗೆ ನಾವು ಆಶ್ರಯ ನೀಡಿದ್ದೇವೆ.
ಪೌರತ್ವ ಕಾಯ್ದೆ ವಿರೋಧಿಸಿ ಮಾತನಾಡಿ, ನಮ್ಮ ನೈತಿಕ ಹಿರಿಮೆಯನ್ನು ಕಳೆದುಕೊಂಡಿದ್ದೇವೆ, ಮೋದಿ-ಶಾ ನಾಯಕತ್ವದ ಬಿಜೆಪಿ ಸರಕಾರವು ಸಾಧ್ಯವಿರುವ ಎಲ್ಲ ರಾಜಕೀಯ ಅಸ್ತ್ರಗಳ ಅವಕಾಶಗಳನ್ನು ಘೋಷಿತ ಕಾರ್ಯಸೂಚಿಯಾದ, ಭಾರತವನ್ನು ಬಲಾತ್ಕಾರದಿಂದ ಮಿಥ್ಯಾವಾಸ್ತವದ ‘ಹಿಂದೂರಾರ್ಷ್ಟವಾಗಿಸುವುದು, ಕಾನೂನಿನ ಪ್ರಕಾರ ಘೋಷಿಸುವುದು ತಡವಾಗಬಹುದಾದರೂ, ಸ್ಪಷ್ಟವಾಗಿ ಕಾಣಿಸುವ ಭವಿಷ್ಯವಾಗಿದೆ ಎಂದರು.
ನಂತರ ಆಮ್ ಆದ್ಮಿ ಪಕ್ಷ ಪಾರ್ಟಿ ಸದಸ್ಯ ಮಾನವೀಕ ಮಾತನಾಡಿ ಕೆಲವು ವರ್ಷಗಳಿಂದ, ಬಹುಮತದ ಹಿಂದೂ ಭಾವನೆಗಳನ್ನು ಕ್ರೋಡೀಕರಿಸಲು ನಿರಂತರವಾಗಿ ತಾರತಮ್ಯ ಭೇದದ ಕೋಮುದ್ವೇಷ, ಅಸಹನೆಗಳ ಕಿಚ್ಚನ್ನು ಹಚ್ಚುತ್ತಿರುವುದು, ದೇಶದಲ್ಲಿ ಗುಂಪುಹತ್ರಗಳು, ಸಾಮೂಹಿಕ ಕೊಲೆಗಳು, ಸಾಮೂಹಿಕ ಹಿಂಸೆಗಳು ಆದಾಗ ತಂತ್ರದ ಭಾಗವಾಗಿ ಮೌನವಾಗಿರುವುದು ಅದರ ಕಾರ್ಯತಂತ್ರದ ಭಾಗವಾಗ ಎಂದರು.
ನಾಗರಿಕತ್ವ ತಿದ್ದುಪಡಿ ಕಾಯ್ದೆಗೆ ಪೂರಕವಾಗಿ ನಾಗರಿಕರ ರಾಷ್ಟ್ರೀಯ ನೋಂದಣಿ(ಎನ್ ಆರ್ ಸಿ)ಯನ್ನು ಘೋಷಿಸುವಂತೆ ಇಡೀ ದೇಶವನ್ನು ಒತ್ತಾಯಿಸುವುದು, ಮುಸ್ಲಿಮರನ್ನು ಅಧೀನತೆಗೆ ಒಳಪಡಿಸುವ, ಅವರನ್ನು ವಾಸ್ತವದಲ್ಲಿ, ತಮ್ಮ ದೇಶದಲ್ಲಿಯೇ ಎರಡನೆಯ ದರ್ಜೆಯ ಪ್ರಜೆಗಳಾಗಿಸುವ ಮೃತ್ಯುದಂಡವಾಗಿದೆ. ನಾಗರಿಕತ್ವ ತಿದ್ದುಪಡಿ ಕಾಯ್ದೆ ಮತ್ತು ದೇಶವ್ಯಾಪಿ ನಾಗರಿಕ ರಾಷ್ಟ್ರೀಯ ನೋಂದಣಿಗಳು ಮತ್ತೂ ಹೆಚ್ಚಿನ ಕೇಡಿನ ದುಶ್ಶುನಗಳಾಗಿವೆ ಎಂದು ತಿಳಿಸಿದರು.
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…
ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…
ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…