ಸುರಪುರ: ಇಂದು ದೇಶದ ೭೧ ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ಸಂದರ್ಬದಲ್ಲಿಯೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಹಿತ್ತಲ ಶಿರೂರ ಗ್ರಾಮದ ಸಂವಿದಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ,ಆರ್ ಅಂಬೇಡ್ಕರ್ ರವರ ನಾಮ ಫಲಕಕ್ಕೆ ಸಗಣಿ ಎರಚಿ ಚಪ್ಪಲಿ ನೇತಾಕಿ ವಿಕೃತ ಮನೊಭಾವನೆಯನ್ನು ಹೊಂದಿರುವ ದೇಶದ್ರೋಹಿಗಳನ್ನು ಕಿಡಿಗೆಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಅವರನ್ನು ಅತ್ಯಂತ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಅನೇಕ ಪ್ರತಿಪರ ಮತ್ತು ದಲಿತ ಹೋರಾಟಗಾರರು ಆಗ್ರಹಿಸಿದರು.
ನಗರದ ತಹಸೀಲ್ ಕಚೇರಿ ಮುಂದೆ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಮಾತನಾಡಿ,ಈ ಘಟನೆ ಕೇವಲ ಒಬ್ಬರಿಂದ ನಡೆದಿರಲು ಸಾಧ್ಯವಿಲ್ಲ. ಇದಕ್ಕೆ ಕುಮ್ಮಕ್ಕು ನೀಡಿದ ಕಾಣದ ಕೈಗಳನ್ನು ಶಿಘ್ರದಲ್ಲಿಯೇ ಪತ್ತೆ ಹಚ್ಚಲು ಸರಕಾರಕ್ಕೆ ಒತ್ತಾಯಿಸುತ್ತೆವೆ.
ಒಂದು ವೇಳೆ ಕೂಡಲೆ ಬಾಬಾ ಸಾಹೇಬರ ನಾಮಫಲಕಕ್ಕೆ ಅಪಮಾನಿಸಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ತಿಳಿಸಿ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸೀಲ್ದಾರ ನಿಂಗಣ್ಣ ಬಿರೆದಾರ ಮೂಲಕ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಬಹುಜನ ಕ್ರಾಂತಿ ಮೋರ್ಚಾ ಇದೇ ತಿಂಗಳು ೨೯ನೇ ತಾರೀಖಿನಂದು ಕೆರನೀಡಿರುವ ಭಾರತ ಬಂದ ಕಾರ್ಯಾಕ್ರಮಕ್ಕೆ ಬೆಂಬಲಿಸಿ ಸುರಪುರ ಬಂದ್ ಆಚರಿಸಲಾಗುವುದು ಹಾಗೂ ದಿನಾಂಕ ೩೦-೧-೨೦೨೦ ರಂದು ಗಾಂಧಿಜಿಯವರ ಹುತಾತ್ಮ ದಿನದ ಅಂಗವಾಗಿ ಸೌಹಾರ್ದ ಕರ್ನಾಟಕ ರಾಜ್ಯಾದಂತಹ ಹಮ್ಮಿಕೊಂಡಿರುವ ದೇಶದ ಅಗ್ರ ಗ್ರಂಥವಾದ ಸಂವಿದಾನ ರಕ್ಷಣೆ ಮತ್ತು ಜನವಿರೋಧಿ ನೀತಿಗಳನ್ನು ಖಂಡಿಸಿ ಮಾನವ ಸರಪಳಿ ಕಾರ್ಯಾಕ್ರಮವನ್ನು ಹಮ್ಮಿಕೊಂಡು ದಿನಾಂಕ ೩೦ ರಂದು ಸಂವಿದಾನದ ಪೀಠಿಕೆಯನ್ನು ಗೌರವಿಸಿ ಪ್ರತಿಜ್ಷಾ ವಿಧಿಯನ್ನು ಬೋಧಿಸುವ ಕಾರ್ಯಕ್ರಮ ಆಚರಿಸಲಾಗುವುದು ಎಂದು ತಿಳಿಸಿದರು.
ರಾಹುಲ್ ಹುಲಿಮನಿ, ಯಲ್ಲಪ್ಪ ಚಿನ್ನಾಕರ್, ಸಿದ್ದಯ್ಯ ಸ್ಥಾವರಮಠ , ಮೂರ್ತಿ ಬೋಮ್ಮನಹಳ್ಳಿ ,ಖಾಜಾ ಖಲಿಲ್ ಅಹಮದ್ ಅರಿಕೇರಿ, ಶರಣಪ್ಪ ವಾಗನಗೇರಿ, ಮಾಳಪ್ಪ ಕಿರದಳ್ಳಿ, ನಿಂಗಣ್ಣ ಗೋನಾಲ್, ಲಿಯಾಖತ್ ಹುಸ್ತಾದ್ ನಿಜ್ಜು ,ಪ್ರಕಾಶ ಆಲ್ಹಾಳ, ರಾಜು ಬಡಿಗೇರ್, ಹಣಮಂತ ರತ್ತಾಳ, ಶರಣು ಹುಲಿಮನಿ, ಎಮ್,ಡಿ, ಇಶಿಯಾತ್,ಮಾನಪ್ಪ ಝಂಡದಕೇರಿ, ಮಾನಪ್ಪ ಹುಣಿಸಿಹೊಳೆ, ಮರೆಪ್ಪ ಮುದನೂರು,ಶ್ರೀಶೈಲ್, ಶಿವಪ್ಪ ನಾಗರಾಳ,ಮುಂತಾದವರು ಬಾಗವಹಿಸಿದ್ದರು.
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…
ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…
ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…
ಕಲಬುರಗಿ: ಕಲಬುರಗಿ-ಯಾದಗಿರಿ-ಬೀದರ್ ಸಹಕಾರಿ ಹಾಲು ಒಕ್ಕೂಟದಲ್ಲಿ ಗುಣಮಟ್ಟದ ಹಾಲು ಉತ್ಪಾದನೆಯಾಗುತ್ತಿದ್ದು, ಇದಕ್ಕೆ ಭಾರಿ ಜನಮನ್ನಣೆ ದೊರೆತಿದ್ದು ಜಿಲ್ಲಾ ಉಸ್ತುವಾರಿ ಹಾಗೂ…