ಸುರಪುರ: ತಾಲೂಕಿನ ಲಕ್ಷ್ಮೀಪುರ ಗ್ರಾಮದ ಶ್ರೀ ಮರಡಿ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಎತ್ತುಗಳಿಂದ ಭಾರ ಎಳೆಯುವ ಸ್ಪರ್ಧೆಗೆ ಜಿಲ್ಲಾ ಪಂಚಾಯತಿ ಸದಸ್ಯ ಮರಿಲಿಂಗಪ್ಪ ಕರ್ನಾಳ ಚಾಳನೆ ನೀಡಿದರು.
ಎತ್ತುಗಳು ಭಾರ ಎಳೆಯುವ ಸಾಧನಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿ,ಇಂದು ಗ್ರಾಮೀಣ ಭಾಗದಲ್ಲಿ ಎತ್ತುಗಳ ಸಂಖ್ಯೆಯೆ ತೀರಾ ಕಡಿಮೆಯಾಗಿದೆ.ಮೊದಲು ಗ್ರಾಮೀಣ ಭಾಗವದಲ್ಲಿ ಜಾನುವಾರಗುಗಳಿಗಾಗಿ ಅನೇಕ ಸ್ಪರ್ಧೆಗಳನ್ನು ನಡೆಸಲಾಗುತ್ತಿತ್ತು,ಆದರೆ ಇಂದು ಎಲ್ಲಾ ಕ್ರೀಡೆಗಳು ಮಾಯವಾಗುತ್ತಿರುವ ದಿನಗಳಲ್ಲಿ ಶ್ರೀಮಠದ ಸ್ವಾಮೀಜಿಯವರು ರೈತರಲ್ಲಿ ಉತ್ಸಹ ಮೂಡಿಲು ಎತ್ತುಗಳಿಂದ ಭಾರ ಎಳೆಯುವ ಸ್ಪರ್ಧೆ ನಡೆಸುವ ಮೂಲಕ ಜಾನುವಾರಗಳ ಮೇಲಿನ ಪ್ರೇಮವನ್ನು ಮೆರೆದಿದ್ದಾರೆ ಎಂದರು.
ಶ್ರೀಗಿರಿ ಮಠದ ಬಸವಲಿಂಗ ದೇವರು ಮಾತನಾಡಿ,ಜಾನುವಾರುಗಳು ನಮ್ಮಂತೆ ಅವುಗಳಿಗು ನೋವು ನಲಿವು ಎಂಬುದು ಇರಲಿದೆ.ಅವುಗಳಲ್ಲು ನಲಿವನ್ನು ಕಾಣಲು ಇಂತಹ ಸ್ಪರ್ಧೆಗಳನ್ನು ನಡೆಸಬೇಕು.ಇಂದು ನಡೆಯುವ ಸ್ಪರ್ಧೆಯಲ್ಲಿ ಅತೀ ಹೆಚ್ಚಿನ ಪ್ರಮಾಣದ ಭಾರ ಎಳೆಯುವ ಮೂಲಕ ಪ್ರಥಮ ಸ್ಥಾನದಲ್ಲಿನ ಎತ್ತುಗಳ ಜೋಡಿಗೆ ಅರ್ಧ ತೊಲೆ ಬಂಗಾರವನ್ನು ತೊಡಿಸಲಾಗುವುದು.ದ್ವೀತಿಯ ಸ್ಥಾನದಲ್ಲಿನ ಎತ್ತುಗಳ ಜೋಡಿಗೆ ೯ ಸಾವಿರ ಹಾಗು ತೃತಿಯ ಸ್ಥಾನದ ಎತ್ತಿನ ಜೋಡಿಗೆ ೨ ಸಾವಿರ ೫ನೂರು ರೂಪಾಯಿಗಳ ಬಹುಮಾನ ನೀಡಲಾಗುವುದು.ಪ್ರಥಮ ಬಹುಮಾನವನ್ನು ಶ್ರೀಮಠದ ಭಕ್ತರಾದ ಸಿದ್ರಾಮರಡ್ಡಿಗೌಡ ಕರ್ನಾಳ ನೀಡುತ್ತಿದ್ದು ಇನ್ನುಳಿದ ಬಹುಮಾನ ಶ್ರೀಮಠದಿಂದ ನೀಡಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಂಜನೇಯ ರಾಮದುರ್ಗ,ಹಯ್ಯಾಳಪ್ಪ ಮಂಜಲಾಪುರ,ಸಿದ್ದಪ್ಪ ಯರಡೋಣಿ ಹಾಗು ಮಲ್ಲಪ್ಪ ಯರಡೋಣಿ ಸೇರಿದಂತೆ ಇತರೆ ರೈತರ ಎತ್ತುಗಳು ಸ್ಪರ್ಧೆಯಲ್ಲಿದ್ದವು.ಸೋಮೆಶ್ವರ ಶಿವಾಚಾರ್ಯ ಸ್ವಾಮೀಜಿ ಸಗರ,ರಾಜೇಂದ್ರ ಒಡೆಯರ್ ನವದಗಿ,ವಿಶ್ವರಾಧ್ಯ ದೇವರು ಚಟ್ನಳ್ಳಿ,ಗುಂಡಪ್ಪ ಮಟ್ಲ,ರಾಚಯ್ಯಸ್ವಾಮಿ,ಸೂಲಪ್ಪ ಕಮತಗಿ,ರಂಗನಾಥ ಜಾಲಹಳ್ಳಿ,ಚಂದ್ರಶೇಖರ ಡೊಣೂರ,ಮಲ್ಲು ಹೂಗಾರ ಸೇರಿದಂತೆ ಅನೇಕ ಜನ ರೈತರಿದ್ದರು.
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…