ಆಳಂದ; ತಾಲೂಕಿನ ಕಡಗಂಚಿ ಗ್ರಾಮದ ಭೀಮ ನಗರದಲ್ಲಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಕಲಿಕಾ ಮೇಳವನ್ನು ಗ್ರಾಮ ಪಂಚಾಯತ ಅಧ್ಯಕ್ಷೆ ರುಕ್ಮಿಣಿ ವಿಠ್ಠಲ್ ಉದ್ಘಾಸಿದರು.
ಈ ಸಂದರ್ಭದಲ್ಲಿ ಕಲಿಕಾಮೇಳದ ಉದ್ದೇಶದ ಕುರಿತು ಶಿಕ್ಷಕಿ ವಸುಧಾ ಮಾತನಾಡಿ, ಮಕ್ಕಳ ಆತ್ಮಸ್ಥೈರ್ಯ , ಕೌಶಲ್ಯ ಮತ್ತು ಸೃಜನಾತ್ಮಕತೆಗಳನ್ನು ಗಳಿಸುವಲ್ಲಿ ಕಲಿಕಾಮೇಳವು ಉತ್ತೇಜನ ನೀಡುತ್ತದೆ ಮತ್ತು ಈ ಮೇಳದಿಂದ ವಿದ್ಯಾರ್ಥಿಗಳ ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆ ಗ್ರಾಮ ಪಂಚಾಯತ ಉಪಾಧ್ಯಕ್ಷ ವಿಜಯಕುಮಾರ್ ಮತ್ತು ಮಕ್ಕಳು ತಯಾರಿಸಿದ ವಿಶೇಷ ದಿನದರ್ಶಿಕೆಯನ್ನು ಎಸ್ ಡಿ ಎಂ ಸಿ ದತ್ತರಾಜ್ ಬೊಮ್ಮನಳ್ಳಿ ಬಿಡುಗಡೆಗೊಳಿಸಿದರು.
ಕಲಿಕಾ ಮೇಳವು ಮಕ್ಕಳ ಕಲಿಕಾಂಶದಲ್ಲಿ ಪ್ರಭುತ್ವತೆ ಸಾಧಿಸಲು, ಶಿಕ್ಷಕರಿಗೆ ಉತ್ತಮ ವೇದಿಕೆ, ಪಾಲಕರಿಗೆ ಶಿಕ್ಷಣದ ಕುರಿತು ಒಲವು ಮೂಡಿಸುವುದು, ಮಕ್ಕಳ ಅಭಿವ್ಯಕ್ತಿ ಕೌಶಲ್ಯ ವೃದ್ಧಿಸುವುದು ಈ ಮೇಳದ ಉದ್ದೇಶವಾಗಿದೆ. ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಸಹಕಾರ ನೀಡಿದರು.
ಇದೇ ಸಂದರ್ಭದಲ್ಲಿ ಮೇಳದ ನಿರ್ದೇಶಕಿ ನೀಲಮ್ಮ, ಸಹ ಶಿಕ್ಷಕ ಪ್ರಕಾಶ, ಶಿಕ್ಷಕಿ ಸರಸ್ವತಿ, ದಾನಮ್ಮ ಉಪಸ್ಥಿತರಿದ್ದರು
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…