ಕಡಗಂಚಿಯಲ್ಲಿ ಕಲಿಕಾ ಮೇಳ ಉದ್ಘಾಟನೆ

0
171

ಆಳಂದ; ತಾಲೂಕಿನ ಕಡಗಂಚಿ ಗ್ರಾಮದ ಭೀಮ ನಗರದಲ್ಲಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಕಲಿಕಾ ಮೇಳವನ್ನು ಗ್ರಾಮ ಪಂಚಾಯತ ಅಧ್ಯಕ್ಷೆ ರುಕ್ಮಿಣಿ ವಿಠ್ಠಲ್ ಉದ್ಘಾಸಿದರು.

ಈ ಸಂದರ್ಭದಲ್ಲಿ ಕಲಿಕಾಮೇಳದ ಉದ್ದೇಶದ ಕುರಿತು ಶಿಕ್ಷಕಿ ವಸುಧಾ ಮಾತನಾಡಿ, ಮಕ್ಕಳ ಆತ್ಮಸ್ಥೈರ್ಯ , ಕೌಶಲ್ಯ ಮತ್ತು ಸೃಜನಾತ್ಮಕತೆಗಳನ್ನು ಗಳಿಸುವಲ್ಲಿ ಕಲಿಕಾಮೇಳವು ಉತ್ತೇಜನ ನೀಡುತ್ತದೆ ಮತ್ತು ಈ ಮೇಳದಿಂದ ವಿದ್ಯಾರ್ಥಿಗಳ ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆ ಗ್ರಾಮ ಪಂಚಾಯತ ಉಪಾಧ್ಯಕ್ಷ ವಿಜಯಕುಮಾರ್ ಮತ್ತು ಮಕ್ಕಳು ತಯಾರಿಸಿದ ವಿಶೇಷ ದಿನದರ್ಶಿಕೆಯನ್ನು ಎಸ್ ಡಿ ಎಂ ಸಿ ದತ್ತರಾಜ್ ಬೊಮ್ಮನಳ್ಳಿ ಬಿಡುಗಡೆಗೊಳಿಸಿದರು.

Contact Your\'s Advertisement; 9902492681

ಕಲಿಕಾ ಮೇಳವು ಮಕ್ಕಳ ಕಲಿಕಾಂಶದಲ್ಲಿ ಪ್ರಭುತ್ವತೆ ಸಾಧಿಸಲು, ಶಿಕ್ಷಕರಿಗೆ ಉತ್ತಮ ವೇದಿಕೆ, ಪಾಲಕರಿಗೆ ಶಿಕ್ಷಣದ ಕುರಿತು ಒಲವು ಮೂಡಿಸುವುದು, ಮಕ್ಕಳ ಅಭಿವ್ಯಕ್ತಿ ಕೌಶಲ್ಯ ವೃದ್ಧಿಸುವುದು ಈ ಮೇಳದ ಉದ್ದೇಶವಾಗಿದೆ. ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಸಹಕಾರ ನೀಡಿದರು.

ಇದೇ ಸಂದರ್ಭದಲ್ಲಿ ಮೇಳದ ನಿರ್ದೇಶಕಿ ನೀಲಮ್ಮ, ಸಹ ಶಿಕ್ಷಕ ಪ್ರಕಾಶ, ಶಿಕ್ಷಕಿ ಸರಸ್ವತಿ, ದಾನಮ್ಮ ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here