ಕಲಬುರಗಿ: ಸಿತಿಮಾ ಕಾವ್ಯ ನಾಮದಿಂದ ಪ್ರಸಿದ್ಧರಾದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಸಿದ್ದಪ್ಪ ತಿಮ್ಮಪ್ಪ ಮಾದರ ಅವರ ಕನ್ನಡ ಪ್ರೇಮ ಮಾದರಿಯಾಗಿದೆ.
ಈ ಬಾರಿ ಕಲಬುರಗಿಯಲ್ಲಿ ನಡೆಯಲಿರುವ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗಳದಲ್ಲಿ ಕಾಲಿಟ್ಟ ಈತ ತನ್ನ ಕಾರ್ ನ ಮುಂಭಾಗ, ಎಡ- ಬಲದಲ್ಲಿ ಕನ್ನಡದ ಒಕ್ಕಣಿಕೆ, ಕವಿಗಳ ಫೋಟೊ ಅಂಟಿಸುವ ಮೂಲಕ ಕನ್ನಡ ಪ್ರಜ್ಞೆ ಬಿತ್ತುತ್ತಿದ್ದಾನೆ.
ಈ ಹಿಂದೆ ಮಂಗಳೂರು, ಶ್ರವಣ ಬೆಳಗೋಳ, ಮೈಸೂರು, ರಾಯಚೂರು, ಧಾರವಾಡ ಸೇರಿದಂತೆ ಈವರೆಗೆ ತನ್ನ ಸ್ವಂತ ಖರ್ಚಿನಲ್ಲೇ ತನ್ನ ಸಂಗಡಿಗರ ಜೊತೆ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ತಾವು ಬರುವ ಮಾರ್ಗ ಮಧ್ಯೆ ಕನ್ನಡದ ಕಂಪು ಬೀರುತ್ತ ಬಂದಿರುವ ಇವರ ವಾಹನದ ಮೇಲಿನ ಒಕ್ಕಣಿಕೆ ಓದಲು ಸುಮಾರು ಒಂದು ಗಂಟೆ ಬೇಕಾಗುತ್ತದೆ.
ಕನ್ನಡದ ಮೊಟ್ಟ ಮೊದಲ ಹಲ್ಮಿಡಿ ಶಾಸನದ ಚಿತ್ರದಿಂದ ಹಿಡಿದು ಬದಾಮಿ, ಮಸ್ಕಿ, ಕೊಪ್ಪಳ ಶಾಸನಗಳಿವೆ. ಹಳೆಗನ್ನಡ, ನಡುಗನ್ನಡ ಹೊಸ ಗನ್ನಡ, ಪ್ರಗತಿಶೀಲ, ದಲಿತ- ಬಂಡಾಯ ಘಟ್ಟದ ಪ್ರಮುಖ ಕವಿಗಳ ಭಾವಚಿತ್ರವೂ ಇವೆ.
ಪಂಪ, ರನ್ನ, ಜನ್ನ, ಬಸವಣ್ಣ, ಕುವೆಂಪು ತೇಜಸ್ವಿ, ಅರವಿಂದ ಮಾಲಗತ್ತಿ, ಸಬರದ, ದೇವನೂರ ಮಹಾದೇವ, ಬಸವರಾಜ ಕಟ್ಟಿಮನಿ ಮುಂತಾದವರ ಭಾವಚಿತ್ರಗಳಿವೆ.
ಕನ್ನಡ ಅಂಕಿ ಸಂಖ್ಯೆ, ಕನ್ನಡ ವರ್ಣ ಮಾಲೆ ಮೂಲಕ ಕನ್ನಡ ಪ್ರೇಮ, ಕನ್ನಡ ಜಾಗೃತಿ ಮೂಡಿಸುವ ಅನೇಕ ನಾಮ ಫಲಕಗಳಿವೆ. ಒಟ್ಟಾರೆ ಯಾಗಿ ಹೇಳಬೇಕಾದರೆ ಇವರ ಈ ವಾಹನ ಮಾಹಿತಿಯ ಕಣಜವಾಗಿದೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…