ಕಲಬುರಗಿ: ಶಹಾಪುರದಿಂದ ಕಲಬುರಗಿ ಕಡೆಗೆ ಬರುತಿದ್ದ ಕೆ.ಎಸ್.ಆರ್.ಟಿ ಸಿ.ಬಸ್ ಮತ್ತು ಲಾರಿ ಮಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 13 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ
ಶಹಾಪುರ ತಾಲ್ಲೂಕಿನ ಹುಲಕಲ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಶಹಾಪುರ ಬಸ್ ಘಟಕದ ಚಾಲಕ ಪ್ರಭು ತಂ ಬಸವಲಿಂಗಪ್ಪ್ಪ (40) ಹುಣಸಗಿ ಅವರಿಗೆ ಗಂಭೀರ ಗಾಯಗಳಾಗಿವೆ. ಅಲ್ಲದೆ ಪ್ರಯಾಣಿಕರಾದ ಮಹಮ್ಮದ್ ಸಬ್ಬಿರ ಇಮಾಮಸಾಬ್ ಸಾ.ಸಗರ (37)ˌ ಸಿದ್ದಕಿ ಮಹಿಬೂಬ್ ಸೊರಾಪುರ (12)ˌ ಸುನಿತಾ ದೇವಿಂದ್ರಪ್ಪ ಸಾ.ಗುಂಡಗುರ್ತಿ (30)ˌ ವೈಷ್ಣವಿ ಗಂ ಮಲ್ಲಿಕಾರ್ಜುನ ಗೊಬುರವಾಡಿ ತಾ.ಜೇವರ್ಗಿˌ ಸುನಿತಾ ಮಲ್ಲಿಕಾರ್ಜುನ ಸಾ ಗೊಬರವಾಡಗಿ ಜೇವರ್ಗಿ (26)ˌ ಮಾನಪ್ಪ ಮಲ್ಲಿನಾಥ ಸಾ.ಗೋಗಿ ಕೆ (27)ˌ ಬಲಭೀಮ ತಂ ಅಮಲಪ್ಪ ಸಾ ಗೋಗಿ ಕೆ (31)ˌ ಅಯ್ಯಪ್ಪ ಸುರಪುರ (20)ˌ ಮಲ್ಲಿಕಾರ್ಜುನ ಗೊಬರವಾಡಿ ಜೇವರ್ಗಿ(30)ˌ ಲಕ್ಷ್ಮಿ ಜೆಟ್ಟೆಪ್ಪ ಸಾ ಶಹಪುರ (38)ˌ ಸತೀಶ 30) ಎನ್ನುವರೆ ಗಂಭೀರ ಗಾಯಗೊಂಡವರಾಗಿದ್ದಾರೆ. ತ್ರೀವ್ರ ಗಾಯಗೊಂಡ ಓರ್ವ ಮಗು ಸೇರಿದಂತೆ ನಾಲ್ವರು ಕಲಬುರ್ಗಿ ಆಸ್ಪತ್ರೆಗೆ ಕಳಿಸಲಾಗಿದ್ದುˌ ಬಿ.ಗುಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…
ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…