ಬಿಸಿ ಬಿಸಿ ಸುದ್ದಿ

ಸಮಾನತೆಗಾಗಿ ಮೊದಲು ಧ್ವನಿ ಎತ್ತಿದವರು ಬಸವಣ್ಣ: ಅಂಕಲಗಿ

ಸುರಪುರ: ಮಾನವರೆಲ್ಲ ಒಂದೆ ಮನುಷ್ಯರಲ್ಲಿ ಮೇಲು ಕೀಳೆಂಬುದಿಲ್ಲ,ಎಲ್ಲರು ಒಂದೆ ಎಂದು ಬದುಕಿದೆ ಸಮಾಜದಲ್ಲಿ ಸಾಮರಸ್ಯ ಸಾಧ್ಯ ಎಂದು ಸಮಾನತೆಗಾಗಿ ಮೊದಲು ಧ್ವನಿ ಎತ್ತಿದ ಮಾಹಾ ಮಾನವತಾಅವಾದಿ ಜಗಜ್ಯೋತಿ ಬಸವಣ್ಣನವರು ಎಂದು ತಹಸೀಲ್ದಾರ ಸುರೇಶ ಅಂಕಲಗಿ ಮಾತನಾಡಿದರು.

ನಗರದ ತಹಸೀಲ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಪ್ರತಿಯೊಬ್ಬ ಮನುಷ್ಯನಿಗೆ ಕಾಯಕ ಮುಖ್ಯವಾದುದು,ಸತ್ಯ ಶುಧ್ಧ ಕಾಯಕ ಮಾಡುವ ಮನುಷ್ಯನಿಗೆ ನೆಮ್ಮದಿಯ ಜೀವನವಿದೆ,ಅಲ್ಲದೆ ಸತ್ಯವ ನುಡಿವುದೆ ದೇವ ಲೋಕ,ಮಿಥ್ಯವ ನುಡಿವುದೆ ಮರ್ತ್ಯ ಲೋಕ ಆಚಾರವೆ ಸ್ವರ್ಗ ಅನಾಚಾರವೆ ನರಕ ಎಂದು ಸ್ವರ್ಗ ನರಕಗಳ ಬಗ್ಗೆ ಸುಂದರವಾಗಿ ತಿಳಿಸಿಕೊಟ್ಟ ಮಹಾನ್ ಪುರುಷ ಎಂದರು.

ಕಾರ್ಯಕ್ರಮದಲ್ಲಿ ಬಸವಣ್ಣನವರ ಕುರಿತು ನ್ಯಾಯವಾದಿ ಅಪ್ಪಾಸಾಹೇಬ ಪಾಟೀಲ ಉಪನ್ಯಾಸ ನೀಡಿ,ಬಸವಣ್ಣನವರು ಜಾತಿ ಮತ ಭೇದಗಲ ಅಳಿದು ಬಾಳಿದವರು,ಕಲ್ಯಾಣದಲ್ಲಿ ನಡೆಸಿದ ಅಂತರ್ಜಾತಿ ವಿವಾಹದಿಂದ ಕ್ರಾಂತಿಯನ್ನು ನಡೆಸಿ ಜನರಲ್ಲಿದ್ದ ಮೇಲು ಕೀಳು ಎಂಬ ಭಾವನೆಯನ್ನು ತೊಲಗಿಸಿ ಜಗಜ್ಯೋತಿ ಯಾದರು.ಇಂದಿನ ಸಂವಿಧಾನದಲ್ಲಿನ ಎಲ್ಲಾ ವಿಚಾರಗಳು ಹನ್ನೆರಡನೆ ಶತಮಾನದಲ್ಲಿಯೆ ತಮ್ಮ ವಚನಗಳ ಮೂಲಕ ಸಾರಿದ ಶರಣರಲ್ಲಿ ಬಸವಣ್ಣ ಅಗ್ರಗಣ್ಯರಾಗಿದ್ದರು ಎಂದರು.ಇದೇ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಮುಖಂಡ ಸುರೇಶ ಸಜ್ಜನ ಮಾತನಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ಬಸವರಾಜ ಜಮದ್ರಖಾನಿ, ಬಸವರಾಜಪ್ಪ ನಿಷ್ಠಿ ದೇಶಮುಖ, ಮಾನಪ್ಪ ಕಟ್ಟಿಮನಿ ವೇದಿಕೆ ಮೇಲಿದ್ದರು. ಮಂಜುನಾಥ ಜಾಲಹಳ್ಳಿ, ವೀರೇಶ ದೇಶಮುಖ, ಶಾಂತರಾಜ ಬಾರಿ, ಮಹೇಶ ಪಾಟೀಲ, ಚಂದ್ರಶೇಖರ ಡೊಣುರ, ಧರ್ಮರಾಜ ಬಡಿಗೇರ, ಜಗದೀಶ ಪಾಟೀಲ, ಶಿವರಾಜ ಕಲಕೇರಿ ಸೇರಿದಂತೆಸ ತಾಲ್ಲುಕಿನ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಹಾಗು ಹಲವಾರು ಜನ ಬಸವಾಭಿಮಾನಿಗಳು ಕಾರ್ಯಕ್ರಮದಲ್ಲಿದ್ದರು.

emedialine

Recent Posts

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

48 mins ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

57 mins ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

59 mins ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

1 hour ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

1 hour ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

1 hour ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420