ಬಿಸಿ ಬಿಸಿ ಸುದ್ದಿ

ಸಂಭ್ರಮ ಸಡಗರಕ್ಕೆ ಸಾಕ್ಷಿಯಾದ ’ಮಾರ್ಕೆಟಿಂಗ್ ವಾರಫೇರ್-೨೦೨೦’

ಕಲಬುರಗಿ: ಅದೊಂದು ಜಾತ್ರೆಯೆ ಹೌದು. ಆ ಮಕ್ಕಳ ಮುಖದಲ್ಲಿ ಸಂತೋಷದ ಛಾಯೆ ಎದ್ದು ಕಾಣುತ್ತಿತ್ತು. ಬಾಲಕಿಯರ ಡೊಳ್ಳು ಬಡಿತದ ನಾದದಲ್ಲಿ, ನಾನೇನು ಕಮ್ಮಿಯಿಲ್ಲ. ಪುರುಷರಷ್ಟೆ ನಾನೂ ಸಮರ್ಥಳು ಎಂಬ ಭಾವ ಹೊರಸೂಸುತ್ತಿತ್ತು. ಹಳ್ಳಿಯ ಸೊಗಡು ಬದುಕಿನ ಶೈಲಿಯ ಒಂದಡೆಯಾದರೆ, ಆಧುನಿಕತೆಯ ಬದುಕಿನ ಶೈಲಿ ಇನ್ನೊಂದೆಡೆ. ಸಂಗೀತದ ಸ್ವರಮಾಧುರ್ಯದಲ್ಲಿ ಎಲ್ಲರ ಮನ ತೇಲುತ್ತಿತ್ತು. ಇದೆಲ್ಲ ಸಡಗರ ಸಂಭ್ರಮ ಕಂಡು ಬಂದಿದ್ದು, ಶರಣಬಸವ ವಿಶ್ವವಿದ್ಯಾಲಯದ ಆವರಣದಲ್ಲಿ.

ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದ ಆವರಣದಲ್ಲಿ ಎಂಬಿಎ ಮತ್ತು ಎಂಕಾಮ್ ವಿದ್ಯಾರ್ಥಿಗಳಿಂದ ಶನಿವಾರ ’ಮಾರ್ಕೆಟಿಂಗ್ ವಾರಫೇರ್-೨೦೨೦’ ಆಯೋಜಿಸಲಾಗಿತ್ತು. ಎಂಬಿಎ ವಿದ್ಯಾರ್ಥಿಗಳು ಒಟ್ಟು ೬ ಸ್ಟಾಲ್ (ಮಳಿಗೆ)ಗಳನ್ನು ಸ್ಥಾಪಿಸಿದರು. ಅಶ್ವಿನಿ ವಿ. ವಿಜಯಲಕ್ಷ್ಮಿ ತಂಡದಿಂದ ಚಾಟ್ ಆಂಡ ಚಾಯಿ ಸ್ಪೇಷಲ್ ಮತ್ತು ಉಪಹಾರ ಮಳಿಗೆ, ಮಲ್ಲಿಕಾ, ಅರ್ಜುನ ತಂಡದಿಂದ ವಿಲೇಜ್ ಪಾನ್ ಶಾಪ್ ಮಳಿಗೆ, ಮಹೇಶ ತಂಡದಿಂದ ಫ್ರೂಟೊಹೊಲಿಕ್ ಮಳಿಗೆ, ವೈಷ್ಣವಿ ಬಾವಗಿ ತಂಡದಿಂದ ಗೇಮ್ಸ್, ಅವಿನಾಶ ತಂಡದಿಂದ ಹಳ್ಳಿಮನೆ, ಕಿರಣ ತಂಡದಿಂದ ಕೆಎಂಎಫ್ ಮಳಿಗೆಗಳನ್ನು ಹಾಕಲಾಗಿತ್ತು. ಒಟ್ಟು ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.

ಎಂಕಾಮ್ ವಿದ್ಯಾರ್ಥಿಗಳು ಒಟ್ಟು ೫ ಸ್ಟಾಲ್ (ಮಳಿಗೆ)ಗಳನ್ನು ಸ್ಥಾಪಿಸಿದರು. ಭಾಗ್ಯಶ್ರೀ ಎಂ ತಂಡದಿಂದ ಚಾಟ್ ಛೊಟ್ರೆ ಮಳಿಗೆ, ಪಲ್ಲವಿ ತಂಡದಿಂದ ಕ್ರಿಸ್ಪೀ ಸ್ನ್ಯಾಕ್ಸ್ ಮಳಿಗೆ, ಓಮಿಕಾ ಹಂಗ್ರಿ ಬಡ್ರ್ಸ್, ನೀಶಾ ತಂಡದಿಂದ ಮಿಸಲ್ಕಾ ಮೆಹೆಫಿಲ್, ಸಾಯಿನಾಥ ತಂಡದಿಂದ ಅಂತಮಾಸ ಐಸ್ಕ್ರೀಮ್, ಸೌಮ್ಯ ತಂಡದಿಂದ ಹಾರರ್ ಹೌಸ್, ಅಶ್ವಿನಿ ಮಂಜುಶ್ರೀ ತಂಡದಿಂದ ಹೆಲ್ತ್ ಹೌಸ್ ಹಾಕಲಾಗಿತ್ತು.

ಸಂಸ್ಕೃತಿ ಮರೆಮಾಚುತ್ತಿರುವ ಸಂದರ್ಭದಲ್ಲಿ ಹಳ್ಳಿಯ ಸೊಗಡನ್ನು ಮತ್ತೆ ಪರಿಚಯಿಸುವ ಪ್ರಯತ್ನ ಮಾಡಿದರು ಎಂಬಿಎ ವಿದ್ಯಾರ್ಥಿಗಳು. ಸೇರು, ಅಚ್ಚೇರು, ರೊಟ್ಟೆ ಬುಟ್ಟಿ, ತಾಸಬುಟ್ಟಿ, ಹಾರಿ, ಓಣಕ್ಕೆ, ಬೀಸುವ ಕಲ್ಲು, ಖಲಿಗಲ್ಲು, ಕುಳ್ಳು, ಕಂಬಳಿ, ಈಳಿಗೆ ಮುಂತಾದವುಗಳನ್ನು ಪ್ರದರ್ಶಿಸಿ, ಹಳ್ಳಿ ಮನೆ ಸೊಗಡು ಮರುಕಳಿಸಿದರು.

ಈ ಸಂದರ್ಭದಲ್ಲಿ ವಿವಿ ಸಮ ಕುಲಪತಿ ಡಾ. ವಿ.ಡಿ. ಮೈತ್ರಿ ಕಾರ್ಯಕ್ರಮ ಉದ್ಘಾಟಿಸಿದರು ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ ಶಾಸ್ತ್ರಿ, ಡೀನ್ ಡಾ.ಲಕ್ಷ್ಮಿ ಮಾಕಾ ಮತ್ತು ಡಾ. ಬಸವರಾಜ ಮಠಪತಿ, ಡಾ. ಶಿವದತ್ತ ಹೊನ್ನಳ್ಳಿ, ಡಾ. ಬಸವರಾಜ ಹೂಗಾರ, ಡಾ. ವಾಣೀಶ್ರೀ, ಡಾ. ಗೀತಾ ಹರವಾಳ, ಡಾ. ಎನ್.ಎಸ್.ಪಾಟೀಲ, ಡಾ.ಡಿ.ಟಿ.ಅಂಗಡಿ, ಟಿ.ವಿ.ಶಿವಾನಂದನ್, ಡಾ.ಸುರೇಶ ನಂದಗಾಂವ ಇತರರು ಇದ್ದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

8 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

9 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

10 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

10 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

11 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

11 hours ago