ಬಿಸಿ ಬಿಸಿ ಸುದ್ದಿ

ಶರಣರ ನಾಡಿನಲ್ಲಿ ಬೌದ್ಧ ಸಾಹಿತ್ಯ ಸಮ್ಮೇಳನ

ಮೊನ್ನೆ ತಾನೇ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಕ್ಷಿಯಾದ ಗುಲಬರ್ಗಾ ವಿಶ್ವವಿದ್ಯಾಲಯದ ಕಪ್ಪುಮಣ್ಣಿನ ಅಂಗಳದಲ್ಲಿ ರಾಷ್ಟ್ರಮಟ್ಟದ ಮೊಟ್ಟಮೊದಲ ಬೌದ್ಧ ಸಾಹಿತ್ಯ ಸಮ್ಮೇಳನ ಜರುಗುತ್ತಿರುವುದು ಸುವರ್ಣಾಕ್ಷರಗಳಿಂದ ಬರೆದಿಡುವ ದಿನ. ಗುಲಬರ್ಗಾ ಇದೇ ವಿಶ್ವವಿದ್ಯಾಲಯದ ದಶಮಾನೋತ್ಸವದ ಹೊಸ್ತಿಲಲ್ಲಿರುವ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ಹಾಗೂ ಸುವರ್ಣ ಸಂಭ್ರಮದ ಸಡಗರದಲ್ಲಿರುವ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಇದೇ ಮಾರ್ಚ್ ೧೧ ಮತ್ತು ೧೨ ರಂದು ಎರಡು ದಿನಗಳ ರಾಷ್ಟ್ರಮಟ್ಟದ ಬೌದ್ಧ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ವಿಶೇಷವಾಗಿದೆ.

ಪ್ರಾಚೀನ ಕಾಲದ ಬೌದ್ಧರ ಕಲಿಕಾ ಕೇಂದ್ರವಾದ ಸನ್ನತಿಯ ಸನಿಹದಲ್ಲಿರುವ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯು ೨೦೦೮ರಲ್ಲಿ ಸ್ಥಾಪಿತವಾಗಿದ್ದು, ಇದರ ನಿರ್ದೇಶಕರಾಗಿದ್ದವರು ಡಾ.ಎಚ್.ಟಿ.ಪೋತೆಯವರು. ಕ್ರಿಯಾಶೀಲ ಹಾಗೂ ’ಕಾಯಕವೇ ಕೈಲಾಸ’ದ ಕಲ್ಯಾಣ ಕರ್ನಾಟಕದ ಶರಣರ ಈ ನಾಡಿನಲ್ಲಿ ಶ್ರಮ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು, ವೈಚಾರಿಕ ಪ್ರಣತಿಯಾಗಿ ಬೆಳಗುತ್ತಿರುವ ಡಾ.ಪೋತೆಯವರು ಈ ಸಮ್ಮೇಳನದ ಜವಾಬ್ದಾರಿಯನ್ನು ಹೊತ್ತಿರುವುದು ಆನೆ ಬಲವನ್ನು ತಂದಿದೆ. ಈ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ಅಡಿಯಲ್ಲಿ ಪಿ.ಜಿ.ಡಿಪ್ಲೊಮಾ ಕೋರ್ಸ್‌ನ್ನು ಆರಂಭಿಸಿದ್ದು ಹಲವಾರು ಕಲಿಕಾರ್ಥಿಗಳು ಪದವಿಗಳನ್ನು ಪಡೆದಿದ್ದಾರೆ; ಪಡೆಯುತ್ತಿದ್ದಾರೆ. ಭಗವಾನ್ ಬುದ್ಧನ ನ್ಯಾಯ, ಅಹಿಂಸೆ, ಮಾನವೀಯತೆ, ಆದರ್ಶ ಬದುಕು, ತ್ಯಾಗ ಜೀವನ, ಜ್ಞಾನ, ಶೀಲ, ಶಾಂತಿಯೊಂದಿಗೆ ಭವ್ಯ ಭರತ ಖಂಡದ ಪ್ರಾಚೀನ ಚರಿತ್ರೆಯನ್ನು, ನೆಲ ಸಂಸ್ಕೃತಿಯನ್ನು ಹಾಗೂ ಬುದ್ಧನ ಸಂದೇಶಗಳನ್ನು ಸಾರುತ್ತ ಹನ್ನೆರಡು ವರ್ಷಗಳನ್ನು ಕಳೆದಿದೆ. ಈ ಕಳೆದ ಹನ್ನೆರಡು ವರ್ಷಗಳಲ್ಲಿ ಪ್ರಾಚೀನ ಪಾಲಿ ಭಾಷೆಯಲ್ಲಿ ಅಡಕವಾಗಿರುವ ಬುದ್ಧ ಮತ್ತು ಆತನ ಬೌದ್ಧ ಧರ್ಮದ ತಳಹದಿಯ ಮೇಲೆ ಪಾಲಿ ಸಾಹಿತ್ಯದ ಚರಿತ್ರೆ, ವ್ಯಾಕರಣ, ಬೌದ್ಧ ಧರ್ಮದ ಹೀನಯಾನ ಮಹಾಯಾನ ಮುಂತಾದ ವಿಷಯಗಳನ್ನು ಈ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಯನಕ್ಕಿಡಲಾಗಿದೆ.

ಇದರೊಂದಿಗೆ ಹಲವಾರು ಉಪನ್ಯಾಸ, ಕಾರ್ಯಾಗಾರಗಳನ್ನು ಏರ್ಪಡಿಸಿ ಬುದ್ಧ ಹಾಗೂ ಆತನ ಧರ್ಮದ ಕುರಿತು ಹಲವು ವಿದ್ವಾಂಸರಿಂದ ಜ್ಞಾನವನ್ನು ಪಸರಿಸಲಾಗಿದೆ. ಸಂಶೋಧನೆ, ಮಾನವಿಕಶಾಸ್ತ್ರ, ವಿಮರ್ಶೆ, ಕಥೆ, ಕಾವ್ಯ, ನಾಟಕ ಸಾಹಿತ್ಯ ಪ್ರಕಾರಗಳಿಗೆ ಸಂಬಂಧಿಸಿದಂತೆ ಬೌದ್ಧ ಸಾಹಿತ್ಯ ಅಧ್ಯಯನ ವಿಶೇಷ ಮಾಲಿಕೆಯ ಆರು ಬೃಹತ್ ಕೃತಿಗಳನ್ನು ವಿದ್ವತ್‌ಮಣಿಗಳಿಂದ ಸಂಪಾದಿಸಲಾಗಿದ್ದು ಇವೆಲ್ಲವುಗಳು ಈ ಸಾಹಿತ್ಯ ಸಮ್ಮೇಳನದಲ್ಲಿ ಅನಾವರಣಗೊಳ್ಳುತ್ತಿರುವುದು ಬಹು ವಿಶೇಷ.

ಸಾಮ್ರಾಟ ಅಶೋಕ ವೇದಿಕೆಯ ಮುಖೇನ ನಾಡಿನ ಖ್ಯಾತ ಸಂಶೋಧಕರಾದ ಪ್ರೊ.ತಾಳ್ತಜೆ ವಸಂತಕುಮಾರ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದು, ಈ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯದಲ್ಲಿ ಬೌದ್ಧ ಸಾಹಿತ್ಯದ ಅನುವಾದಗಳು, ಕನ್ನಡ ಬೌದ್ಧ ಸಾಹಿತ್ಯ ಮತ್ತು ಸಂಶೋಧಕರು, ಬೌದ್ಧ ಸಾಹಿತ್ಯ ಮತ್ತು ಸಂತ ಪರಂಪರೆ, ಸೃಜನಶೀಲ ಬೌದ್ಧ ಸಾಹಿತ್ಯ, ಬಹುಭಾಷಾ ಗೋಷ್ಠಿ, ಕರ್ನಾಟಕದ ಬೌದ್ಧ ಕೇಂದ್ರಗಳು, ಬೌದ್ಧ ಕವಿಗೋಷ್ಠಿಗಳು ನಡೆಯುತ್ತವೆ. ಈ ಸಮ್ಮೇಳನಕ್ಕೆ ನಾಡಿನ, ರಾಷ್ಟ್ರಮಟ್ಟದ ಪ್ರತಿಭಾನ್ವಿತ ವಿದ್ವಾಂಸರು ಉಪನ್ಯಾಸ ನೀಡಲಿದ್ದು, ಇದರೊಂದಿಗೆ ಕವಿ ರವೀಂದ್ರನಾಥ ಟ್ಯಾಗೋರ ಅವರು ಬರೆದ ’ಚಾಂಡಾಲಿಕ’ ಪ್ರದರ್ಶನವನ್ನು ಕಲಬುರ್ಗಿಯ ರಂಗಾಯಣದವರು ಪ್ರಸ್ತುತಪಡಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಅಧ್ಯಯನಾಸಕ್ತರಿಂದ ಸಂಶೋಧನಾ ಪ್ರಬಂಧಗಳು ಮಂಡನೆಯಾಗುತ್ತ ಹಲವು ಬಗೆಯ ಚರ್ಚೆಗಳು ಇಲ್ಲಿ ನಡೆಯುತ್ತವೆ.

ಈ ದೇಶ ಕಂಡ ಬಹುದೊಡ್ಡ ವಿದ್ವಾಂಸರಾದ ಡಾ.ಎನ್.ಎಸ್.ತಾರಾನಾಥ ಅವರು ಸಮಾರೋಪ ನುಡಿಗಳನ್ನಾಡಿ ಸಮ್ಮೇಳದ ಮೆರಗನ್ನು ಹೆಚ್ಚಿಸುವರು. ಕಲಬುರ್ಗಿಯ ಬಿಸಿಲು ನಾಡಿನಲ್ಲಿ ಜರುಗುತ್ತಿರುವ ಬುದ್ಧನ ಸಾಹಿತ್ಯ ಸಮ್ಮೇಳನವನ್ನು ಮುನ್ನಡೆಸುತ್ತಿರುವವರು ಅಧ್ಯಯನಶೀಲ ಪ್ರಾಧ್ಯಾಪಕ, ಸಂಶೋಧಕ, ಅನುವಾದಕ, ಕವಿ, ಕಥೆಗಾರ, ವಿಮರ್ಶಕ, ವೈಚಾರಿಕ ಚಿಂತಕ, ಕ್ರಿಯಾಶೀಲ ಸಂಘಟಕ ಇತ್ಯಾದಿ ಬಹುರೂಪಿ ವಲಯಗಳಲ್ಲಿ ದಲಿತ-ಬಂಡಾಯ, ಬೌದ್ಧ ಬಾಹುಳ್ಯವನ್ನು ಚಾಚಿರುವ ಡಾ.ಎಚ್.ಟಿ.ಪೋತೆಯವರು. ಇವರ ನೇತೃತ್ವದಲ್ಲಿ ಜರುಗಿದ ಸಮ್ಮೇಳನ, ಕಾರ್ಯಾಗಾರ, ಉಪನ್ಯಾಸ, ಕವಿಗೋಷ್ಠಿಗಳಿಗೆ ಲೆಕ್ಕವೇ ಇಲ್ಲ. ಇಂಥವರು ಇಂದು ಗುಲಬರ್ಗಾ ವಿಶ್ವವಿದ್ಯಾಲಯದ ಕಲಾ ನಿಖಾಯದ ಡೀನರಾಗಿ, ಕನ್ನಡ ಅಧ್ಯಯನ ಸಂಸ್ಥೆ, ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿಯೂ ಬೋಧನೆ ಹಾಗೂ ಆಡಳಿತಾತ್ಮಕ ಹುದ್ದೆಗಳಲ್ಲಿ ಹಿಗ್ಗಿನಿಂದ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರ.

 

ಡಾ.ಶಿವರಾಜ ಯತಗಲ್
ಕನ್ನಡ ಅಧ್ಯಯನ ವಿಭಾಗ
ಗುಲಬರ್ಗಾ ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರ, ’ಜ್ಞಾನತುಂಗ’
ಯರಗೇರಾ-ರಾಯಚೂರು-584133
ಮೊ: 9019867886/8660827705
emedialine

Recent Posts

ಜಪಾನ್ ವಿ. ವಿಯಲ್ಲಿ ಪ್ರಬಂಧ ಮಂಡನೆ ಮಾಡಿದ ಡಾ. ಪಾಸೋಡಿ

ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…

11 mins ago

ಕಲಬುರಗಿ: ಡೆಂಗ್ಯೂ, ಮಲೇರಿಯಾ ರೋಗಗಳನ್ನು ನಿಯಂತ್ರಿಸಲು ಬಾಲರಾಜ್ ಗುತ್ತೇದಾರ ಆಗ್ರಹ

ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…

19 mins ago

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

2 hours ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

2 hours ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

2 hours ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

3 hours ago