ಕೊರೋನಾ ಎಫೆಕ್ಟ್ ಮದ್ಯೆ ಭಕ್ತರ ಶ್ರೀಶೈಲ ಪಾದಯಾತ್ರೆ

ಸುರಪುರ: ರಾಜ್ಯದಲ್ಲಿ ಕೊರೋನಾ ವೈರಸ್ ಭೀತಿ ಎಲ್ಲೆಡೆ ಹರಡಿದ್ದು,ಸರಕಾರ ಕೂಡ ಒಂದು ವಾರಗಳ ಕಾಲ ರಾಜ್ಯದಲ್ಲಿ ಕೊರೋನಾ ಎಮರ್ಜೆನ್ಸಿ ಘೋಷಣೆ ಮಾಡಿದ್ದರು ಕೂಡ ಇದ್ಯಾವುದನ್ನು ಲೆಕ್ಕಿಸದ ತಾಲೂಕಿ ಪೇಠ ಅಮ್ಮಾಪುರದ ಶ್ರೀ ಬಲಭೀಮೇಶ್ವರ ಭಜನಾ ಮಂಡಳಿಯ ಭಕ್ತರು ಗ್ರಾಮದಲ್ಲಿರುವ ಹನುಮಾನ ದೇವಸ್ಥಾನದಿಂದ ಮಲ್ಲಿಕಾರ್ಜುನ ದೇವರ ದರುಶನಕ್ಕಾಗಿ ಶ್ರೀಶೈಲಕ್ಕೆ ಪಾದಯತ್ರೆ ಆರಂಭಿಸಿದರು.

ಪ್ರತಿವರ್ಷವು ಕೂಡ ಈ ಗ್ರಾಮದ ಜನತೆ ಮೈಲಾಪುರಕ್ಕೆ,ನಾಲವಾರಕ್ಕೆ,ಶ್ರೀಶೈಲಕ್ಕೆ ಪಾದಯಾತ್ರೆ ಮಾಡುತ್ತಾರೆ.ಅದರಂತೆ ಈ ವರ್ಷದ ಶ್ರೀಶೈಲ ಪಾದಯಾತ್ರೆಯನ್ನು ಆರಂಭಿಸಿದರು.ಪಾದಾಯಾತ್ರೆಯ್ಲಲಿನ ಯಾತ್ರಾರ್ಥಿ ಮಲ್ಲಿಕಾರ್ಜುನ ರಡ್ಡಿ ಮಾತನಾಡಿ,ನಾವು ಪ್ರತಿವರ್ಷವು ವಿವಿಧ ದೇವಸ್ಥಾನಗಳಿಗೆ ಪಾದಯಾತ್ರೆ ಮಾಡುತ್ತೆವೆ.ಈ ವರ್ಷ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರುಶನಕ್ಕಾಗಿ ಹೋಗುತ್ತಿದ್ದು,ಕೊರೋನಾ ಬಗ್ಗೆ ಜಾಗೃತಿಗೊಂಡಿದ್ದೆವೆ.ಅಲ್ಲದೆ ನಮ್ಮ ರಾಜ್ಯಕ್ಕೂ ಕಾಲಿಟ್ಟಿರುವ ಕೊರೋನಾ ಮಾರಿ ಬೇಗ ದೂರವಾಗಿ ರಾಜ್ಯದ ಜನತೆ ಇದರ ಭಯದಿಂದ ಮುಕ್ತಗೊಳಿಸುವಂತೆ ಮಲ್ಲಿಕಾರ್ಜುನ ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ಗ್ರಾಮದಿಂದ ಸುಮಾರು ಇಪ್ಪತ್ತಕ್ಕು ಹೆಚ್ಚು ಜನ ಪಾದಯಾತ್ರೆ ಹೋಗುತ್ತಿದ್ದು,ಸುಮಾರು ಹತ್ತು ದಿನಗಳ ಕಾಲ ಪಾದಯಾತ್ರೆ ನಡೆಯುತ್ತದೆ.ನಮಗೆ ಕೊರೋನಾದ ಯಾವುದೆ ಭೀತಿಯಿಲ್ಲ,ಆದರು ಮುಂಜಾಗ್ರತೆಯನ್ನು ವಹಿಸುವುದಾಗಿ ತಿಳಿಸಿದರು.ಯಾತ್ರೆಯಲ್ಲಿ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿವಮೂರ್ತಿ ತನಿಕೆದಾರ,ಗುರಪ್ಪಗೌಡ,ಚಂದಪ್ಪ ರಾವೂರ,ಯಂಕಪ್ಪ ಬೇವಿನಾಳ,ದೇವಿಂದ್ರಪ್ಪ ಕೊದಂಡೆ,ಸಂಗನಬಸವ ಕಾಮನಟಿಗಿ,ಅಂಬ್ಲಪ್ಪ ಮಡಿವಾಳ,ಅಯ್ಯಪ್ಪ ವಠಾರ ಸೇರಿದಂತೆ ಅನೇಕರಿದ್ದರು.

emedialine

Recent Posts

ವಿದ್ಯಾರ್ಥಿನಿಯರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಸೈಕಲ್‍ ವಿತರಣೆ

ಕಲಬುರಗಿ: ನಗರದ ಎನ್.ವಿ ಸಂಸ್ಥೆಯ ಸತ್ಯಪ್ರಮೋದತೀರ್ಥ ಸಭಾಂಗಣದಲ್ಲಿ ಎನ್.ವಿ ಸಂಸ್ಥೆ ಮತ್ತು ರೋಟರಿ ಕ್ಲಬ್ ಆಫ್ ಗುಲಬರ್ಗ ನಾರ್ಥವತಿಯಿಂದ ವಿದ್ಯಾರ್ಥಿನಿಯರಿಗೆ…

3 mins ago

ಕಲಬುರಗಿಯಲ್ಲಿ ರೈತರ ಜಿಲ್ಲಾ ಸಮಾವೇಶ

ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಶಾಖೆ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿದ್ದ ಜಿಲ್ಲಾ ರೈತ ಸಮಾವೇಶವನ್ನು ಸಂಘದ…

5 mins ago

ಪ್ರಶಾಂತ ಡಿ ಜಾನಕರ ರಾಷ್ಟ್ರಮಟ್ಟಕ್ಕೆ ಆಯ್ಕೆ

ಕಲಬುರಗಿ: ದಾವಣಗೆರೆಯಲ್ಲಿ ನಡೆದ ಸಿ.ಬಿ.ಎಸ್.ಇ ಕ್ಲಸ್ಟರ 8ನೇ ಎಥ್ಲೇಟಿಕ್ ಮೀಟ್ 2024-25 ರಾಜ್ಯ ಮಟ್ಟದ 200 ಮಿಟರ್ ಓಟದ ಸ್ಪರ್ಧೆಯಲ್ಲಿ…

8 mins ago

ಶಿಕ್ಷಕಿ ನಿರ್ಮಲಾ ವೀರಭದ್ರಪ್ಪ ದೇಸಾಯಿಗೆ ಬಿಳ್ಕೊಡುಗೆ

ಕಲಬುರಗಿ: ಕಮಲಾಪೂರ ತಾಲೂಕಿನ ಯಕ್ಕಂಚಿ ಗ್ರಾಮದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ನಿರ್ಮಲಾ ವೀರಭದ್ರಪ್ಪ ದೇಸಾಯಿ ಇವರ…

13 mins ago

ಕ.ಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಪ್ರತ್ಯೇಕ ಸಚಿವಾಲಯ ಶೀಘ್ರ ಅಸ್ತಿತ್ವಕ್ಕೆ; ಸಿದ್ದರಾಮಯ್ಯ

ರಾಯಚೂರು; ಕಲ್ಯಾಣ ಕರ್ನಾಟಕಕ್ಕೆ 371ನೇ ಜೇ ಕಲಂ ಜಾರಿಗೆಗೆ ದಶಕಗಳಿಂದ ಹೋರಾಟ ನಡೆಸಿದ ಎಳು ಜಿಲ್ಲೆಗಳ ಸಹಸ್ರಾರು ಹೋರಾಟಗಾರರ ಪರವಾಗಿ…

20 mins ago

ಎಲೇಕ್ಷನ್’ನಲ್ಲಿ ಗಿಮಿಕ್ ಮಾಡಿ ಮತಪಡೆದುಕೊಳ್ಳುವುದು ಮಾತ್ರ ಗೊತ್ತು; ಮಣಿಕಂಠ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420