ಸುರಪುರ: ಬೇಸಿಗೆ ಆರಂಭವಾಗಿದ್ದು ಜನರಲ್ಲಿ ವಿವಿಧ ಕಾಯಿಲೆಗಳು ಹರಡಲು ಆರಂಭಿಸುತ್ತವೆ.ನಗರದಲ್ಲಿ ಸ್ವಚ್ಛತೆಯಿಲ್ಲದೆ ಚರಂಡಿಗಳು ತುಂಬಿ ದುರ್ನಾತ ಬೀರುತ್ತಿವೆ.ಕಸವು ಕೂಡ ಅನೇಕ ಕಡೆಗಳಲ್ಲಿ ಹಾಗೆಯೇ ಇರುತ್ತದೆ.ಸ್ವಚ್ಛತೆಗೆ ಕ್ರಮವಹಿಸುವಂತೆ ಹಜರತ್ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಜಿಲ್ಲಾಧ್ಯಕ್ಷ ಮಹ್ಮದ್ ಮೌಲಾ ಸೌದಾಗರ್ ಆಗ್ರಹಿಸಿದರು.
ನಗರಸಭೆ ಮುಂದೆ ಹಮ್ಮಿಕೊಂಡಿದ್ದ ಸಾಂಕೇತಿಕ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ನಗರದಲ್ಲಿನ ಜನರಿಗೆ ಸರಿಯಾದ ಕುಡಿಯುವ ನೀರಿಲ್ಲ,ಫೀಲ್ಟ್ರ್ ಮಾಡದೆ ಹೊಲಸಾದ ನೀರನ್ನೆ ಬಿಡಲಾಗುತ್ತಿದೆ.ಇದರಿಂದ ಜನರಲ್ಲಿ ರೋಗ ಹರಡುವ ಸಾಧ್ಯತೆಯಿದೆ.ಆದ್ದರಿಂದ ಸ್ವಚ್ಛ ನೀರು ಬಿಡಲು ಕ್ರಮ ಕೈಗೊಳ್ಳಬೇಕು.ಮತ್ತು ಹೋಟೆಲ್,ಚಹಾ ಬಂಡಿಗಳಲ್ಲಿಯೂ ಸ್ವಚ್ಛತೆಯಿಲ್ಲ ಹಾಗು ಬಾವಿ ನೀರನ್ನೆ ಕುಡಿಯಲು ಕೊಡುವುದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.ಹೋಟೆಲುಗಳಲ್ಲಿ ನಿನ್ನೆ ಮಾಡಿದ ಪದಾರ್ಥವನ್ನೆ ಫ್ರೀಜಿನಲ್ಲಿಟ್ಟು ಅದನ್ನೆ ಕೊಡುತ್ತಾರೆ.
ಹೋಟೆಲುಗಳಲ್ಲಿ ಸರಿಯಾಗಿ ತೊಳೆದಿರದ ಪ್ಲೇಟುಗಳು ಹಾಗೆಯೇ ಇರುತ್ತೆವೆ.ಇಂತಹ ಹೋಟೆಲುಗಳ ಮೇಲೆ ದಾಳಿ ಮಾಡಿ ಕೇಸು ದಾಖಲಿಸಬೇಕು. ಮಾಂಸದ ಅಂಗಡಿಗಳ ಬಳಿ ಸ್ವಚ್ಛತೆ ಇಲ್ಲದೆ ಗಲೀಜಾಗಿರುತ್ತದೆ.ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು.ಈಗಾಗಲೆ ಕೊರೊನಾ ಮಹಾಮಾರಿ ಎಲ್ಲೆಡೆ ಆತಂಕ ಸೃಷ್ಟಿಸಿದೆ,ಬೇಸಿಗೆಯಾದ್ದರಿಂದ ನೀರಿನಿಂದ ಅನೇಕ ರೋಗಗಳು ಬರುತ್ತವೆ.ಆದ್ದರಿಂದ ನಗರದಲ್ಲಿ ಸ್ವಚ್ಛತೆಗೆ ದಿಟ್ಟ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ನಗರಸಭೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಆಗ್ರಹಿಸಿ ನಗರಸಭೆ ಪೌರಾಯುಕ್ತ ಜೀವನ್ ಕುಮಾರ ಕಟ್ಟಿಮನಿಯವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ರತ್ನರಾಜ ಸಾಲಿಮನಿ,ಜಿಲ್ಲಾ ಕಾರ್ಯದರ್ಶಿ ಶೇಖ್ ಅಮ್ಜಾದ್ ಹುಸೇನ್,ಅಬ್ದುಲ್ ರೌಫ್,ಆನಂದ ಕಟ್ಟಿಮನಿ,ಅಬೀದ್ ಹುಸೇನ್ ಪಗಡಿ,ಇಮಾಮ್ ವಾಗಣಗೇರಾ,ಇಮ್ತಾಜ್ ಪಟೇಲ್,ಸಾಜಿದ್ ಅಹ್ಮದ ದಖನಿ,ಅಬ್ದುಲ್ ಮನಾನ್ ನಾಶಿ,ಚಾಂದಪಾಶಾ ಸಂತ್ರಸವಾಡಿ,ಮುನ್ನಾ ದಖನಿ,ರಜಾಕ್ ಸಂತ್ರಸವಾಡಿ,ಅಜ್ಜು ಕಬಾಡಗೇರಾ ಇತರರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…