ಬಡವರಿಗೆ ಅಗತ್ಯ ವಸ್ತು ವಿತರಿಸಿ ಜನುಮ ದಿನ ಆಚರಿಸಿಕೊಂಡ ಪಿಎಸ್‌ಐ ಚೇತನ್

ಸುರಪುರ: ಇಂದು ಅನೇಕರು ತಮ್ಮ ಜನುಮ ದಿನವನ್ನು ಮುಗಿಲೆತ್ತರದ ಕಟೌಟ್‌ಗಳನ್ನು ಹಾಕಿಕೊಂಡು,ಹಾರ ತುರಾಯಿಗಳ ಧರಿಸಿಕೊಂಡು,ಪ್ರಚರಕ್ಕಾಗಿ ತಮ್ಮ ಜನುಮ ದಿನವನ್ನು ಆಚರಿಸಿಕೊಳ್ಳುವವರ ಮದ್ಯೆ ಅಪರೂಪವಾಗಿ ವಿಶೇಷ ಜನುಮ ದಿನವನ್ನು ಆಚರಿಸಿಕೊಂಡು ನಗರ ಠಾಣೆಯ ಪಿಎಸ್‌ಐ ಚೇತನ್ ಇತರರಿಗೆ ಮಾದರಿಯಾಗಿದ್ದಾರೆ.

ಈಗಾಗಲೆ ಸಂಚಾರಿ ನಿಯಮಗಳ ಪಾಲಿಸದವರಿಗೆ ಸರಿಯಾದ ಬಿಸಿ ಮುಟ್ಟಿಸುವ ಮೂಲಕ ಎಲ್ಲರಿಗು ಪರಿಚಿತರಾದ ಚೇತನ್ ಅವರು,ಈಗ ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾದಾಗಿನಿಂದ ನಗರದಲ್ಲಿ ಅನಾವಶ್ಯಕವಾಗಿ ಬೈಕ್ ಹತ್ತಿ ಹೊರಗಡೆ ತಿರುಗಾಡುವವರಿಗೆ ಲಾಠಿಯಿಂದ ಬಿಸಿ ಮುಟ್ಟಿಸಿ ಬುದ್ಧಿ ಹೇಳುತ್ತಿದ್ದ ಅಧಿಕಾರಿ ಇಂದು ತನ್ನ ಜನುಮ ದಿನವನ್ನು ಬಡ ಜನರ ಬದುಕಿಗೆ ಆಸರೆಯಾಗುವ ಮೂಲಕ ಮಾದರಿ ಎನಿಸಿದ್ದಾರೆ.

ತಾಲೂಕಿನ ತಳವಾರಗೇರಾ ಗ್ರಾಮದಲ್ಲಿನ ಅನೇಕ ಬಡ ಕುಟುಂಬಗಳು ಕೊರೊನಾ ನಿರ್ಮೂಲನೆಗೆ ಭಾರತ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ದುಡಿಮೆಯಿಲ್ಲದೆ ಸಂಕಷ್ಟದಲ್ಲಿವೆ.ಕೆಲಸವು ಇಲ್ಲ ಇತ್ತ ಮನೆಯಲ್ಲಿ ಅಗತ್ಯ ವಸ್ತುಗಳಿಗು ತೊಂದರೆ,ಇಂತಹ ಕುಟುಂಬಗಳ ಕಷ್ಟವನ್ನು ತಿಳಿದು ಆ ಕುಟುಂಬಗಳಿಗೆ ಕನಿಷ್ಟ ಹತ್ತು ದಿನಗಳಿಗೆ ಆಗುವಷ್ಟು ಅಗತ್ಯ ವಸ್ತುಗಳಾದ ಅಕ್ಕಿ ಬೇಳೆ ಸಕ್ಕರೆ ಸಾಬೂನು ಹೀಗೆ ವಿವಿಧ ದಿನಸಿಗಳ ಕಿಟ್ ವಿತರಿಸುವ ಮೂಲಕ ತಮ್ಮ ಜನುಮ ದಿನವನ್ನು ಆಚರಿಸಕೊಂಡಿದ್ದಾರೆ.

ಈ ಕುರಿತು ಚೇತನ್ ಅವರು ಮಾತನಾಡಿ,ಬಡ ಜನರಿಗೆ ನೆರವಗುವುದಕ್ಕಿಂತ ದೊಡ್ಡ ಸೇವೆ ಬೇರೆನಿಲ್ಲ.ನಮ್ಮ ಕರ್ತವ್ಯದ ಜೊತೆಗೆ ಕಷ್ಟದಲ್ಲಿರುವವರಿಗೆ ನೆರವಾಗುವುದು ಎಲ್ಲರ ಕರ್ತವ್ಯವಾಗಬೇಕು.ಅಂದಾಗ ಜನರಲ್ಲಿ ಪ್ರೀತಿ ವಿಶ್ವಾಸ ಮೂಡಲು ಸಾಧ್ಯ.ಆದ್ದರಿಂದ ಇಂದು ಅನೇಕರು ಜನುಮ ದಿನ ಆಚರಿಸುವ ಕುರಿತು ಕೇಳಿದರು,ಆದರೆ ಅವರೆಲ್ಲರಿಗು ನಾನು ದೇಶವೆ ಕೊರೊನಾದ ಸಂಕಷ್ಟ ಹೆದರಿಸುವಾಗ ನನ್ನ ಜನುಮ ದಿನ ಆಚರಿಸುವುದು ಬೇಡವೆಂದು ನಿರಾಕರಿಸಿದೆ.ಆದರೆ ಕಷ್ಟದಲ್ಲಿರುವವರ ನೆರವಿಗೆ ನಿಲ್ಲುವ ಕಾರಣದಿಂದ ಅವರಿಗೆ ಒಂದಿಷ್ಟು ಸಹಾಯವಾಗುವ ಸೇವೆಗೆ ಮುಂದಾಗಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗಂಗಾಧರ ನಾಯಕ, ಪರಶುರಾಮ ನಾಟೆಕಾರ್,ತಿಗಳಪ್ಪ ಕವಡಿಮಟ್ಟಿ,ರಮೇಶ ಯಾದವ್,ಲಕ್ಷ್ಮಣ ಕವಡಿಮಟ್ಟಿ,ಬಸವರಾಜ ಹುಬ್ಬಳ್ಳಿ,ಪವನ್,ಚೇತನ್,ಆಕಾಶ ಸೇರಿದಂತೆ ಅನೇಕರಿದ್ದರು.

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

3 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

9 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

19 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

21 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

21 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

21 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420