ಬಿಸಿ ಬಿಸಿ ಸುದ್ದಿ

ಮನೆಯಲ್ಲಿ ಬಂಧಿಯಾಗಿರುವ: ಮನಸ್ಸೆಂಬ ಅದ್ಭುತ ಲೋಕದೊಳಗೆ ಅಲೆದಾಡೋಣ

ಮನೆಯಲ್ಲಿ ಬಂಧಿಯಾಗಿರುವ ಈ ಸಮಯದಲ್ಲಿ ನಮ್ಮ ಮನಸ್ಸಿನೊಳಗೆ ಒಮ್ಮೆ ಸುತ್ತಾಡೋಣ ಬನ್ನಿ…..
ಮನಸ್ಸೆಂಬ ಅದ್ಭುತ ಲೋಕದೊಳಗೆ ಅಲೆದಾಡೋಣ ಬನ್ನಿ……
ಅದನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಪ್ರಯತ್ನಿಸೋಣ ಬನ್ನಿ……

ಮನಸ್ಸೆಂಬುದು Re chargeable battery ಇದ್ದಂತೆ.
Full charge ಆದಾಗ ಲವಲವಿಕೆಯಿಂದ ಇರುತ್ತದೆ. ಬ್ಯಾಟರಿ Low ಆಗುತ್ತಿದ್ದಂತೆ ಉತ್ಸಾಹ ಕಡಿಮೆಯಾಗುತ್ತಾ ಸಾಗುತ್ತದೆ. ಸಂಪೂರ್ಣ ಕಡಿಮೆಯಾಗಿ Dead level ಗೆ ಬಂದಾಗ ಜೀವನವೇ ಬೇಸರವಾಗುತ್ತದೆ.

ಅದನ್ನು ಮತ್ತೆ ಮತ್ತೆ Charge ಮಾಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮದೇ.
ಎಷ್ಟೋ ಜನರಿಗೆ ಬದುಕಿನ ಅನಿವಾರ್ಯತೆಯಿಂದಾಗಿ ಅಥವಾ ಆಕಸ್ಮಿಕಗಳಿಂದಾಗಿ ಅಥವಾ ದುರಾದೃಷ್ಟದಿಂದಾಗಿ ಜೀವನ ಪ್ರಪಾತಕ್ಕೆ ಕುಸಿಯುತ್ತದೆ. ಕೆಲವೊಮ್ಮೆ ನಿಧಾನವಾಗಿ ಮತ್ತೆ ಕೆಲವೊಮ್ಮೆ ಅನಿರೀಕ್ಷಿತವಾಗಿ ಇದು ಸಂಭವಿಸುತ್ತದೆ.

ಒಮ್ಮೊಮ್ಮೆ ಅದರ ತೀವ್ರತೆ ಎಷ್ಟಿರುತ್ತದೆ ಎಂದರೆ ನಾಳೆ ನನಗೆ ಬದುಕಿನ ಕೊನೆ ದಿನವಾಗಿರುತ್ತದೆ ಎಂದೇ ಭಾಸವಾಗುತ್ತದೆ. ದೇವರೋ – ರಕ್ತ ಸಂಬಂಧಿಗಳೋ – ಆತ್ಮೀಯರೋ ಅಥವಾ ಇನ್ಯಾರೋ ಬಂದು ನಮ್ಮನ್ನು ಕಾಪಾಡಬಹುದು ಎಂಬ ನಿರೀಕ್ಷೆ ಹುಸಿಯಾದಾಗ ನಮ್ಮ ಮನಸ್ಸಿನ ಬ್ಯಾಟರಿ All most dead level ಗೆ ಬಂದಿರುತ್ತದೆ.

ಇಂತಹ ಕಠಿಣ ಸಂದರ್ಭದಲ್ಲಿಯೇ ನಾವು ಯಾರಿಗೂ ಕಾಯದೆ ಈ ಸಂಕಷ್ಟದಿಂದ ಹೊರಬರುವವರೆಗೂ ಪ್ರತಿ ರಾತ್ರಿ ಮಲಗುವಾಗ ಮತ್ತು ಪ್ರತಿದಿನ ಬೆಳಗ್ಗೆ ಏಳುವಾಗ ನಮ್ಮ ಒಳಗಿನ ಆತ್ಮಶಕ್ತಿಯಿಂದಲೇ ಮನಸ್ಸೆಂಬ ಬ್ಯಾಟರಿಯನ್ನು ಸ್ವತಃ Charge ಮಾಡಿಕೊಳ್ಳಬೇಕು.

ಇಲ್ಲದಿದ್ದರೆ ನಮ್ಮ ಅವಸಾನ ಬಹುತೇಕ ನಿಶ್ಚಿತವಾಗುತ್ತದೆ. ಅದರಲ್ಲೂ ಭಾರತೀಯ ಮಧ್ಯಮ ವರ್ಗದವರ ಜೀವನದಲ್ಲಿ ಇದು ಒಂದಲ್ಲ ಒಂದು ಸಮಯದಲ್ಲಿ ಎದುರಾಗತ್ತಲೇ ಇರುತ್ತದೆ. ಅವರ ಮನಸ್ಸಿನ ಬ್ಯಾಟರಿಯ ಏರಿಳಿತ ತುಂಬಾ ಇರುತ್ತದೆ. ಬೇಗ Charging ಮುಗಿಯುತ್ತದೆ.

ಮನಸ್ಸು ಕೂಡ ಸದಾ ದ್ವಂದ್ವ ಮತ್ತು ಚಂಚಲತೆಯಿಂದಲೇ ಕೂಡಿರುತ್ತದೆ.  ವಿದ್ಯಾಭ್ಯಾಸದ ಸಮಯದಲ್ಲಿ ಒಂದು ಮನಸ್ಸು ಓದಲು, ಇನ್ನೊಂದು ಮನಸ್ಸು ಆಟವಾಡಲು ಪ್ರೇರೇಪಿಸುತ್ತದೆ. ಯೌವನದಲ್ಲಿ ಒಂದು ಪ್ರೀತಿಸುವ ಇನ್ನೊಂದು ದ್ವೇಷಿಸುವ ಒತ್ತಡ ಹೇರುತ್ತದೆ. ಕೆಲವೊಮ್ಮೆ ನಮಗೆ ಅನ್ಯಾಯ ಅಥವಾ ವಂಚನೆ ಅಥವಾ ನೋವಾದಾಗ ಉದ್ವೇಗಕ್ಕೆ ಒಳಗಾಗುವ ನಾವು ಅದಕ್ಕೆ ಕಾರಣರಾದವರನ್ನು ಕೊಲ್ಲಲು ಒಂದು ಮನಸ್ಸು ಸೂಚಿಸುತ್ತದೆ. ಅದೇ ಸಂದರ್ಭದಲ್ಲಿ ನಮ್ಮೊಳಗೇ ಅಡಗಿರುವ ಇನ್ನೊಂದು ಮನಸ್ಸು, ಛೆ , ಬೇಡ ಕೊಲೆ ಮಾಡಿದರೆ ಜೈಲಿಗೆ ಹೋಗಬೇಕಾಗುತ್ತದೆ. ಅದಕ್ಕೆ ಬದಲಾಗಿ ಇರಬಹುದಾದ ಇತರ ಪರ್ಯಾಯಗಳನ್ನು ಸೂಚಿಸುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ನಾವು ಕೈಗೊಳ್ಳುವ ನಿರ್ಧಾರ ಅಥವಾ ಮನಸ್ಸಿನ ಯಾವ ಮಾತನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂಬುದು ಬಹುತೇಕ ನಮ್ಮ ಭವಿಷ್ಯವನ್ನು ಮತ್ತು ಜೀವನದ ವಿಧಾನವನ್ನು ನಿರ್ಧರಿಸುತ್ತದೆ.

ನಮ್ಮ ಮನಸ್ಸೇ ನಮಗೆ ಗುರು,
ನಮ್ಮ ಮನಸ್ದೇ ನಮಗೆ ಮಿತ್ರ,
ನಮ್ಮ ಮನಸ್ಸೇ ನಮಗೆ ಶತ್ರು,
ನಮ್ಮ ಮನಸ್ಸೇ ನಮಗೆ ಮಾರ್ಗದರ್ಶಕ,
ಅದರ ಆಯ್ಕೆಯ ಅವಕಾಶವೂ ನಮಗಿರುತ್ತದೆ. ಯಾವುದನ್ನು ನಾವು ಒಪ್ಪಿಕೊಳ್ಳುತ್ತೇವೆ ಮತ್ತು ಅಪ್ಪಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಜೀವನಶೈಲಿ ನಿರ್ಧಾರವಾಗುತ್ತದೆ.

ಅರಿವೆಂಬ ಜ್ಞಾನದ ಮತ್ತು ಅಂತರಾತ್ಮದ ವಿದ್ಯುತ್ತಿನಿಂದ ( ವಿದ್ವತ್ತಿನಿಂದ ) ನಮ್ಮ ಮನಸ್ಸೆಂಬ Re chargeable battery ಯನ್ನು ಸದಾ ಚಾರ್ಜ್ ಮಾಡಿಕೊಳ್ಳುತ್ತಾ ನೂರು ವರ್ಷಗಳ ವಾರಂಟಿ ಮತ್ತು ಗ್ಯಾರಂಟಿ ಮುಗಿಯುವವರೆಗೂ ಉತ್ತಮ ರೀತಿಯಲ್ಲಿ ಕಾಪಾಡೋಣ.

ಮನಸ್ಸೆಂಬುದು ಅಕ್ಷಯ ಪಾತ್ರೆ
ನನ್ನೊಳಗು ನಿಮ್ಮೊಳಗು ಎಲ್ಲರೊಳಗೂ,
ಏನಿದೆಯೆಂದು ಕೇಳದಿರಿ,
ಏನಿಲ್ಲ,……ಅದರ,
ಆಳ ಅಗಲ ಎತ್ತರಗಳನ್ನು ಬಲ್ಲವರಿಲ್ಲ,
ನಮ್ಮೊಳಗಿನ ಆಗಾಧ ಸಾಮರ್ಥ್ಯವೇ ಮನಸ್ಸು,
ಪ್ರೀತಿ ಪ್ರೇಮ ವಾತ್ಸಲ್ಯಗಳು ತುಂಬಿರುವಂತೆ,
ಕೋಪ ದ್ವೇಷ ಅಸೂಯೆಗಳು ತುಂಬಿವೆ,
ಅದ್ಭುತ ಆಶ್ಚರ್ಯವೆಂದರೆ,
ಅದರ ಆಯ್ಕೆಗಳೂ ನಿಮ್ಮವೇ,
ಯಾರಿಗುಂಟು ಯಾರಿಗಿಲ್ಲ,
ಸಾವನ್ನು ಸಂಭ್ರಮಿಸುವ ಸ್ವಾತಂತ್ರ್ಯವೂ ನಿಮ್ಮದೇ,
ಬದುಕನ್ನು ದ್ವೇಷಿಸುವ ಸ್ವಾತಂತ್ರ್ಯವೂ ನಿಮ್ಮದೇ,

ಕೊರಗೇಕೆ ಓ ಮನುಜ ನೀ ಅಲ್ಪನಲ್ಲ,
ಈ ಸೃಷ್ಟಿಯೂ ನಿನ್ನ ಮನಸ್ಸಿಗಿಂತ ದೊಡ್ಡದಲ್ಲ,
ಸೃಷ್ಠಿಯಾಚೆಗೂ ವಿಸ್ತರಿಸಬಲ್ಲದು ನಿನ್ನೀ ಮನಸು,
ನೀನೇನು ಸಾಮಾನ್ಯನಲ್ಲ, ಅಸಾಮಾನ್ಯ,

ಹೃದಯ ಚಿಕ್ಕದೇ ಇರಬಹುದು,
ಮನಸ್ಸಿನ ಅಗಾಧತೆ ನಿನಗೇ ಅರಿವಿಲ್ಲ,
ಹಾಡಬಲ್ಲೆ, ಬರೆಯಬಲ್ಲೆ, ಓದಬಲ್ಲೆ, ಚಿತ್ರಿಸಬಲ್ಲೆ, ಓಡಬಲ್ಲೆ,
ನೆಗೆಯಬಲ್ಲೆ, ಈಜಬಲ್ಲೆ , ಹಾರಾಡಬಲ್ಲೆ,
ಇನ್ನೇಕೆ ತಡ, ಕಿತ್ತೊಗೆ ನಿನ್ನ ನಿರಾಸೆ,
ಈ ಕ್ಷಣದಿಂದ ಈ ಮನಸ್ಸು ನಿನ್ನದೇ,
ಅದಕ್ಕೆ ನೀನೇ ಅಧಿಪತಿ,
ಎದ್ದು ಕುಳಿತುಕೋ ನಿನ್ನ ಮನದ ಸಿಂಹಾಸನದ ಮೇಲೆ,
ಆಳು ನಿನ್ನ ಮನಸ್ಸಿನ ಸಾಮ್ರಾಜ್ಯವನ್ನು,
ನಿನಗಿಷ್ಟಬಂದಂತೆ, ಈಗ ನೀನು ರಕ್ತ ಮೂಳೆ ಮಾಂಸಗಳ ಮುದ್ದೆಯಲ್ಲ, ನೀನು ನಿನ್ನ ವಿಶಾಲ ಮನಸ್ಸಿನ ಚಕ್ರವರ್ತಿ,

ಎಲ್ಲವೂ ಶರಣಾಗಿದೆ ನಿನ್ನ ಕಾಲ ಬಳಿ, ಆತ್ಮವಿಶ್ವಾಸದ ಮುಂದೆ ಸೃಷ್ಟಿಯೂ ನಿನ್ನ ಮುಷ್ಟಿಯಲ್ಲಿ.

ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.


ವಿವೇಕಾನಂದ. ಹೆಚ್.ಕೆ. ಬೆಂಗಳೂರು
emedialine

View Comments

  • ಮನಸ್ಸನ್ನು ಧೃಡಗೊಳಿಸುವುದೊಂದೇ ಮಾರ್ಗ ಸಂಕಷ್ಟಗಳನ್ನೆದುರಿಸಲು

Recent Posts

ಕಲಬುರಗಿ: ಪೆಟ್ರೋಲ್ ಟ್ಯಾಂಕರ್ ಸಾರಿಗೆ ಬಸ್ ನಡುವೆ ಅಪಘಾತ

ಕಲಬುರಗಿ: ಪೆಟ್ರೋಲ್ ತುಂಬಿದ ಟ್ಯಾಂಕರ್ ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭಿಸಿರುವ ಘಟನೆ ಅಫಜಲಪುರ ತಾಲೂಕಿನ ಗೊಬ್ಬೂರ ವಾಡಿ…

10 hours ago

ಸರ್ವಾಧ್ಯಕ್ಷರಾದ ಪೂಜ್ಯ ಮಾತೋಶ್ರೀ ಡಾ ದಾಕ್ಷಾಯಣಿ ಎಸ್ ಅಪ್ಪಾ ಅವರಿಗೆ ಅಧಿಕೃತ ಆಹ್ವಾನ

ಶರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಕಲಬುರಗಿ: ಶ್ರೀ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ವತಿಯಿಂದ ಇದೇ…

10 hours ago

ಕಲಬುರಗಿ: ನಾಲ್ವಡಿ ಶ್ರೀ ಕೃಷ್ಣರಾಜ ಒಡೇಯರ್ ಅವರ ಜಯಂತಿ 4 ರಂದು

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲೊಬ್ಬರಾದ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ 140 ನೇ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ಜಿಲ್ಲಾ…

11 hours ago

ಸಿಡಿಲು ಅಪಘಾತಕ್ಕೆ ಬಲಿಯಾದ ಕುಟುಂಬಕ್ಕೆ ಸಂಸದ ಡಾ. ಜಾಧವ್ ಸಾಂತ್ವನ

ಕಲಬುರಗಿ: ವಾಡಿಯಲ್ಲಿ ಇತ್ತೀಚೆಗೆ ನಡೆದ ಸಿಡಿಲಘಾತ ಘಟನೆಯಲ್ಲಿ ಮೃತಪಟ್ಟ ಸತೀಶ್ ಮಾನೆ ಅವರ ಕುಟುಂಬಕ್ಕೆ ಸಂಸದ ಡಾ.ಉಮೇಶ್ ಜಾಧವ್ ಭೇಟಿ…

11 hours ago

ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ವಿಶೇಷ ಪೂಜೆ

ಕಲಬುರಗಿ: ಲೋಕಸಭಾ ಚುನಾವಣೆಯಲ್ಲಿ ಕಳೆದ ಮೂರು ತಿಂಗಳಿಂದ ಸತತವಾಗಿ ಪರಿಶ್ರಮವಹಿಸಿ ಚುನಾವಣಾ ವಿಶ್ರಾಂತಿಯ ನಂತರ ಮತಗಣನೆಗೆ ಒಂದು ದಿನ ಬಾಕಿ…

11 hours ago

ವಿಧಾನ ಪರಿಷತ್‌ ಚುನಾವಣೆಗೆ ಜಗದೇವ್ ಗುತ್ತೇದಾರ್ ಸೇರಿ 8 ಅಭ್ಯರ್ಥಿಗಳ ಹೆಸರು ಘೋಷಣೆ

ಕಲಬುರಗಿ: ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ದೈವಾರ್ಷಿಕ ಚುನಾವಣೆಗೆ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ನಿರ್ದೇಶನದಂತೆ ಕಲಬುರಗಿ ಕಾಂಗ್ರೆಸ್…

12 hours ago