ಇಡೀ ಜಗತ್ತಿಗೆ ಅಪ್ಪಳಿಸಿದ ಈ ಸಾಂಕ್ರಾಮಿಕ ಪಿಡುಗಿನಿಂದ ಇಡೀ ಮನುಕುಲವೆ ನಲುಗುವಂತಾಗಿದೆ.ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರಿಗೂ ಗೃಹಬಂಧನಕ್ಕೊಳಪಡಿದ ಸರ್ಕಾರದ ನಡೆಯನ್ನು ಅನುಸರಿಸಲೆಬೇಕು.ಈ ಪಿಡುಗಿಗೆ ಬಲಿಯಾಗುವದನ್ನು ತಪ್ಪಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕು.
ಈಗ ಈ ಕರೋನ ಪಿಡುಗಿನಿಂದ ಪ್ರತಿಯೊಬ್ಬರೂ ಮನೆಯಲ್ಲೆ ಇರಬೇಕಾದ ಸಂದರ್ಭದಿಂದ ಮನೆ ಈಗ ಎಲ್ಲರ ಪ್ರೀತಿಪಾತ್ರವಾದ ತಾಣವಾಗಿದೆ .ಮನೆಯೆ ಮಂತ್ರಾಲಯ ಎನ್ನುವುದ ಅಕ್ಷರಶಃ ನಿಜವಾಗಿದೆ. ಮನೆಯಲ್ಲೆ ಉಳಿದು ಈಗ ಎಲ್ಲರೂ ಸಹನಶೀಲರಾಗಿದ್ದಾರೆ ,ಒಬ್ಬರಿಗೊಬ್ಬರು ಹೊಂದಿಕೊಂಡು ಬಾಳುವದು ಕಲಿತಿದ್ದಾರೆ (ಸಿಟ್ಟು ಮಾಡಿಕೊಂಡು ಎಲ್ಲೂ ಹೋಗುವಂತಿಲ್ಲ ) ವ್ಯಸನಿಗಳು ಕುಡಿಯದೆ ಮನೆ ರಣರಂಗವಾಗುವದು ತಪ್ಪಿದೆ.ಎಷ್ಟೊ ಕೌಟುಂಬಿಕ ಕಲಹಗಳು ತಗ್ಗಿವೆ.ಅಪರಾಧಗಳ ಪ್ರಮಾಣವೂ ಕುಂಠಿತಗೊಂಡಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಕರೋನಾ ನಮಗೆ ಮಿತವ್ಯಯ ದ ಪಾಠ ಕಲಿಸಿದೆ.ಅಹಾರ ಪದಾರ್ಥಗಳು ಮತ್ತಾವದೆ ಅವಶ್ಯಕ ವಸ್ತು ಗಳನ್ನು ಬೇಕಾದಷ್ಟೆ ಬಳಸುವ ಪರಿಪಾಠ ಬೆಳೆಸಿಕೊಂಡಿದ್ದೆವೆ.ಧೀರ್ಘ ಕಾಲದ ಲಾಕ್ ಡೌನ್ ಪರಿಣಾಮದಿಂದ ಊರುಗಳಲ್ಲಿ ಆಹಾರ ದಿನಸಿಗಳ ಕೊರತೆ ತಲೆದೂರುತ್ತಿದೆ.ನಮ್ಮ ದೇಶದಲ್ಲಿ ಅಪಾರ ಆಹಾರ ಸಂಪತ್ತು ಇರಬಹುದು ,ಆದರೆ ಸಾರಿಗೆ ವ್ಯವಸ್ಥೆ ಕೊರತೆಯಿಂದ ಅವಶ್ಯ ವಸ್ತುಗಳ ವ್ಯತ್ಯಯ ಉಂಟಾಗುವದು ಸಹಜವೆ.
ಇಂತಹ ಸಂದರ್ಬದಲ್ಲಿ ದೊರೆಯುವ ಅಹಾರ ಪದಾರ್ಥಗಳು. ಅವಶ್ಯಕ ವಸ್ತುಗಳನ್ನು ಮಿತವಾಗಿ ಬಳಸಿ ಅವುಗಳ ಅಭಾವ ತಲೆದೂರದಂತೆ ಪ್ರತಿಯೊಬ್ಬ ನಾಗರಿಕರು ಅರಿತು ಬಳಸಬೇಕು.
ಮೊದಲು ಮನೆಗೆ ಬೇಕಾಗಲಿ ಬೇಡವಾಗಲಿ ತಂದು ತುಂಬಿಡುವ ಪದ್ದತಿ ಬೆಳೆಸಿಕೊಂಡಿದ್ದೆವು.ಈಗ ಅಂಗಡಿ ಮಾಲ್ ಗಳೆಲ್ಲ ಮುಚ್ಚಿರುವದರಿಂದ ಶಾಪಿಂಗ್ ಮಾಡುವದು ಬಂದ್ ಆಗಿದೆ.ಇರುವದರಲ್ಲೆ ಮಿತವಾಗಿ ಬಳಸಿ ಬದುಕಬಹುದೆಂದು ಅರಿವಾಗಿದೆ.
ಈಗ ಎಲ್ಲರೂ ಮನೆಯಲ್ಲಿ ಇರುವುದರಿಂದ ನೀರೂ ಹೆಚ್ಚು ಪ್ರಮಾಣದಲ್ಲಿ ಬಳಸಲ್ಪಡುತ್ತದೆ .ಮುಂದಿನ ದಿನಗಳಲ್ಲಿ ನಿರಿನ ಅಬಾವ ತಲೆದೂರದಂತೆ ನೀರನ್ನು ಮಿತವಾಗಿ ಬಳಸಲು ಪ್ರಯತ್ನಿಸೋಣ. ಈ ಒಂದು ಸಂದರ್ಭದಲ್ಲಿ ನಾವೆಲ್ಲರೂ ಮಿತವ್ಯಯದ ಪಾಠ ಕಲಿಯುವದು ಅತಿ ಅವಶ್ಯಕ.
ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ಇಂದು ಬೆಳಗ್ಗೆ ವಾಕಿಂಗ್ ಹೋದಾಗ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಲಬುರಗಿ ನಗರದ ಜೇವರ್ಗಿ…
ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…
ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…
ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…
ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…
ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಗೌಡ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ…
View Comments
Super madan