ಸುರಪುರ: ಕೊರೊನಾ ವೈರಸ್ ದಾಳಿಯಿಂದ ತಡೆಯಲು ಲಾಕ್ಡೌನ್ ನಿಯಮ ಜಾರಿಯಾಗಿದ್ದರಿಂದ ಕೆಎಮ್ಎಫ್ ಡೈರಿಯಲ್ಲಿ ನಿತ್ಯವು ಲಕ್ಷಾಂತರ ಲೀಟರ್ ಹಾಲು ಉಳಿಯುತ್ತಿರುವುದರಿಂದ ರಾಜ್ಯದಲ್ಲಿನ ಎಲ್ಲಾ ಸ್ಲಂ ಕೊಳಗೇರಿಗಳಲ್ಲಿನ ಬಡ ಕುಟುಂಬಗಳಿಗೆ ಉಚಿತವಾಗಿ ಹಾಲು ವಿತರಣೆಯ ಯೋಜನೆ ಜಾರಿಯಾಗಿದ್ದರಿಂದ ನಿತ್ಯವು ನಗರದಲ್ಲಿನ ಎಲ್ಲಾ ಸ್ಲಂಗಳಲ್ಲಿನ ಬಡ ಕುಟುಂಬಗಳಿಗೆ ಉಚಿತವಾಗಿ ಅರ್ಧ ಲೀಟರ್ ಹಾಲು ವಿತರಿಸಲಾಗುತ್ತಿದೆ.
ನಗರಸಭೆಯ ಸಿಬ್ಬಂದಿಗಳು ನಿತ್ಯವು ನಗರದಲ್ಲಿನ ಸ್ಲಂ ಕುಟುಂಬಗಳಿಗೆ ಒಟ್ಟು ೧೮೧೦ ಲೀಟರ್ ಹಾಲು ವಿತರಣೆ ಮಾಡುತ್ತಿದ್ದು,ನಗರಸಭೆಯ ಸಿಬ್ಬಂದಿ ಬೆಳಿಗ್ಗೆ ಆರು ಗಂಟೆಯಿಂದ ಹಾಲು ಪ್ರತಿ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ.ನಗರಸಭೆಯ ಸಿಬ್ಬಂದಿಯ ಈ ಶ್ರಮಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ರಂಗಂಪೇಟೆಯಲ್ಲಿನ ಎಲ್ಲಾ ಸ್ಲಂಗಳಲ್ಲಿನ ಬಡ ಕುಟುಂಬಗಳಿಗೆ ನಗರಸಭೆ ಎಸ್ಐ ಶಿವಪುತ್ರಪ್ಪ ಹಾಗು ದಫೇದಾರ ಶರಣಪ್ಪ ನೇತೃತ್ವದಲ್ಲಿ ನಿತ್ಯವು ಹಾಲು ವಿತರಿಸುವ ಮೂಲಕ ಸ್ಲಂ ನಿವಾಸಿಗಳ ಜನರಲ್ಲಿ ಸಂತೋಷವನ್ನುಂಟು ಮಾಡಿದ್ದಾರೆ.ಲಾಕ್ಡೌನ್ ಕಾರಣದಿಂದ ಹಾಲು ತರಕಾರಿಗೆ ಕಷ್ಟಪಡಬೇಕಿದ್ದ ಜನರ ಮನೆ ಬಾಗಿಲಿಗೆ ಹಾಲು ತಲುಪಿಸುವುದು ಇಡೀ ಸ್ಲಂ ಜನರಿಗೆ ನಗರಸಭೆಯ ಸಿಬ್ಬಂದಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.ಇಂದು ನಡೆದ ಹಾಲು ವಿತರಣೆಯಲ್ಲಿ ಎಸ್ಐ ಶಿವಪುತ್ರ,ದಫೇದಾರ್ ಶರಣಪ್ಪ,ಸಿಬ್ಬಂದಿಗಳಾದ ಚಂದ್ರಪ್ಪ,ದೇವಿಂದ್ರಪ್ಪ ಹಾಗು ವೆಂಕಟೇಶ ಮತ್ತಿತರರಿದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…