ಚಿತ್ತಾಪುರ: ಕೊರೊನ್ ವೈರಸ್ ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ಹಿನ್ನೆಲೆ ಲಾಕ್ ಡೌನ್ ಜಾರಿಯಾಗಿದ್ದ ಕಾರಣ ಆಹಾರಕ್ಕಾಗಿ ಪರದಾಡುತ್ತಿರುವ ನಿರ್ಗತಿಕರಿಗೆ ಕಡು-ಬಡವರಿಗೆ ನಿಡುವಂತೆ ಓರಿಯಂಟ್ ಸಿಮೆಂಟ್ ಕಂಪನಿಯಿಂದ 500 ಆಹಾರ ಕಿಟ್ ಅನ್ನು ಓರಿಯಂಟ್ ಕಂಪನಿಯ ಮುಖ್ಯಸ್ಥ ಸತ್ಯ ಭ್ರಾತಾಪ್ ಶರ್ಮಾ ತಾಲೂಕು ಆಡಳಿತಕ್ಕೆ ನೀಡಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅರ್ಹ ಕುಟುಂಬಕ್ಕೆ 16 ಕೆ.ಜಿ,ತೂಕದ ಆಹಾರ ಕಿಟ್ ನಲ್ಲಿ ಅಕ್ಕಿ (ಸೋನಾಮಸೂರಿ) 5 ಕೆ.ಜಿ, ಗೋಧಿ ಹಿಟ್ಟು 5 ಕೆ.ಜಿ, ತೊಗರಿ ಬೇಳೆ 2 ಕೆ.ಜಿ, ಸಕ್ಕರೆ 2 ಕೆ.ಜಿ, ಅಡುಗೆ ಎಣ್ಣೆ 1 ಕೆ.ಜಿ, ಸಾಸುವೆ 50 ಗ್ರಾಂ, ಜೀರಿಗೆ 50 ಗ್ರಾಂ, ಅರಶಿಣ 100 ಗ್ರಾಂ, ಪುಡಿಕಾರ 100 ಗ್ರಾಂ, 1 ಡೆಟಾಲ್ ಸಾಬೂನ್, 1 ಸ್ಯಾನಿಟೈಜರ್, ಆಹಾರ ಕಿಟ್ ನಲ್ಲಿ ಇವೆ ಎಂದರು.
ತಾಲೂಕಿನಲ್ಲಿ ಬೇರೆ ರಾಜ್ಯಗಳಿಂದ, ಬೇರೆ ಜಿಲ್ಲೆಗಳಿಂದ, ಬಂದಂತ ವಲಸೆ ಕಾರ್ಮಿಕರು, ಕಟ್ಟಡ ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಹಾಗೂ ಪಡಿತರ ಚಿಟ್ಟಿ ಇಲ್ಲದವರಿಗೆ ಓರಿಯಂಟ್ ಸಿಮೆಂಟ್ ಕಂಪನಿ ನೀಡಿದ 500 ಆಹಾರ ಕಿಟ್ ಸರಬರಾಜು ಮಾಡಲಾಗುತ್ತದೆ ಎಂದು ತಹಸಿಲ್ದಾರ್ ಉಮಾಕಾಂತ್ ಹಳ್ಳೆ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧಿಕಾರಿ ಮನೋಜ್ ಕುಮಾರ್ ಗುರಿಕಾರ್, ಓರಿಯಂಟ್ ಕಂಪನಿಯ ಎಂಜಿಎಂ ಶಿವಾನಂದ್ ಪಾಟೀಲ್, ವೆಂಕನಗೌಡ, ಶ್ರೀಮಂತ್ ಪಟ್ಟೆದಾರ, ಸೇರಿದಂತೆ ಇತರರಿದ್ದರು.
ಹಟ್ಟಿ: ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸೀತಾರಾಂ ಯೆಚೂರಿ ಅವರ ನಿಧನಕ್ಕೆ ಸಿಪಿಐ(ಎಂ) ಪಕ್ಷದ…
ಕಲಬುರಗಿ: ಇತ್ತೀಚಿನ ವರ್ಷಗಳಲ್ಲಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರವು ಅಭೂತಪೂರ್ವ ಬೆಳವಣಿಗೆಗೆ ಸಾಕ್ಷಿಯಾಗಿದೆ, ವಿವಿಧ ಕೈಗಾರಿಕೆಗಳನ್ನು ಪರಿವರ್ತಿಸುತ್ತದೆ ಮತ್ತು ನಮ್ಮ ದೈನಂದಿನ…
ಕಲಬುರಗಿ : ವೈಚಾರಿಕತೆಯ ನೆಲೆಯಲ್ಲಿ ಸಾಹಿತ್ಯಕ್ಕೆ ತನ್ನದೇ ಆದ ಮೌಲ್ಯ ಮತ್ತು ಮಹತ್ವವಿದೆ. ವಿದ್ಯಾರ್ಥಿಗಳು ಕನ್ನಡ ಭಾಷಾಭಿರುಚಿ ಬೆಳೆಸಿಕೊಂಡರೆ ಸಾಹಿತ್ಯ…
ಕಲಬುರಗಿ: ಕೇಂದ್ರ ಸರಕಾರ ಜಾರಿಗೊಳ್ಳಿಸುತ್ತಿರುವ ವಕ್ಫ್ ಬಚಾವ್ ಆಂದೋಲನದ ನಿಮಿತ್ತ ಇಂದು ಹಫ್ತ್ ಗುಂಬಜ್ ದರ್ಗಾ ರಸ್ತೆಯ ನ್ಯಾಷನಲ್ ಕಾಲೇಜು…
ಕಲಬುರಗಿ: ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯುವಕನೊಬ್ಬನಿಗೆ ಸುಮಾರು 45 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡುವುದರ ಜೊತೆಗೆ ಅಗತ್ಯವಿದ್ದ ಕ್ಲಿಷ್ಟಕರ…
ಕಲಬುರಗಿ; ಕ್ರೀಡ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಮಕ್ಕಳ ಸರ್ವೋತೊಅಭಿವೃದ್ದಿಗೆ ಮುಂದಾಗಿರುವುದು ಸಂತೋಷದಾಯಕ ಜೊತೆಗೆ ಮಕ್ಕಳಿಗೆ ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಹ…