ಉಜ್ವಲ್ ಯೋಜನೆಯ ಎಲ್ಲ ಗ್ರಾಹಕರಿಗೆ ಉಚಿತವಾಗಿ ಸಿಲಿಂಡರ್ ವಿತರಣೆ

ಕಲಬುರಗಿ: ಭಾರತ ಸರ್ಕಾರವು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿಎಂಜಿಕೆವೈ) ಯಡಿ ಎಲ್ಲ ಉಜ್ವಲ ಯೋಜನೆಯ ಗ್ರಾಹಕರಿಗೆ 2020ರ ಏಪ್ರಿಲ್‍ದಿಂದ ಜೂನ್ ಮಾಹೆಯವರೆಗೆ (ಮೂರು ತಿಂಗಳು ಕಾಲ) 14.2 ಕೆ.ಜಿ.ಯ 3 ಸಿಲಿಂಡರ್ ಅಥವಾ 5 ಕೆ.ಜಿ.ಯ ಎಂಟು ಸಿಲಿಂಡರ್‍ಗಳನ್ನು ಉಚಿತವಾಗಿ ನೀಡುತ್ತಿದೆ. ಉಜ್ವಲ ಯೋಜನೆಯ ಅರ್ಹ ಗ್ರಾಹಕರು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ತಿಳಿಸಿದ್ದಾರೆ.

ಉಜ್ವಲ ಯೋಜನೆಯ ಗ್ರಾಹಕರು ಏಪ್ರಿಲ್ ಮಾಹೆಯಲ್ಲಿ ಐವಿಆರ್‍ಎಸ್/ ಎಸ್‍ಎಂಎಸ್ ಮೂಲಕ ಸಿಲಿಂಡರ್‍ಗಳನ್ನು ಬುಕ್ ಮಾಡಬೇಕು. ಏಪ್ರಿಲ್ ಮಾಹೆಯಲ್ಲಿ ಸಿಲಿಂಡರ್ ಬುಕ್ ಮಾಡದೇ ಇರುವ ಗ್ರಾಹಕರು ಮೇ ಮತ್ತು ಜೂನ್ ಮಾಹೆಗಳಿಗೆ (ಪಿ.ಎಂ.ಕೆ.ವೈ.) ಅಡಿ ಸಿಲಿಂಡರ್ ಪಡೆಯಲು ಅರ್ಹರಿರುವುದಿಲ್ಲ. ಸಿಲಿಂಡರ್ ಸ್ವೀಕರಿಸಿದ ನಂತರ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರದಿಂದ ಜಮಾ ಆಗಿರುವ ಆರ್.ಎಸ್.ಪಿ. ಮೊತ್ತವನ್ನು ಪಾವತಿಸಬೇಕು. ಮರುಭರ್ತಿ ಸಿಲಿಂಡರ್‍ಗಳನ್ನು ಗ್ರಾಹಕರ ಮನೆಗೆ ಮಾತ್ರ ವಿತರಿಸಲಾಗುತ್ತದೆ. ಯಾರೂ ವಿತರಕರ ಬಳಿ ಹೋಗುವ ಅವಶ್ಯತೆ ಇರುವುದಿಲ್ಲ. ಪ್ರಸಕ್ತ ಕೋವಿಡ್-19 ದಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇದರ ಪ್ರಕ್ರಿಯೆಗಳನ್ನು ಸರಳ ಮತ್ತು ಸುಲಭಗೊಳಿಸಲಾಗಿದೆ.

ಸಿಲಿಂಡರ್‍ನ ನಗದು ಮೆಮೋದಲ್ಲಿಯೇ ಮರು ಭರ್ತಿ ಸಿಲಿಂಡರ್ ಸ್ವೀಕೃತಿಯನ್ನು ಸೇರಿಸಲಾಗಿದೆ. ಯಾವುದೇ ದೂರವಾಣಿ ಸಂಖ್ಯೆಯಿಂದ ಐವಿಆರ್‍ಎಸ್ ಮೂಲಕ ಮತ್ತು ವಾಟ್ಸಾಪ್/ಆನ್‍ಲೈನ್ ಮತ್ತಿತರ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದಾಗಿದೆ. ಉಜ್ವಲ ಉಚಿತ ಮರುಭರ್ತಿ ಸಿಲಿಂಡರ್ ಯೋಜನೆಯಡಿ ಪ್ರಯೋಜನ ಪಡೆಯಲು ಗ್ರಾಹಕರಿಗೆ ಯಾವುದೇ ಹೆಚ್ಚುವರಿ ದಾಖಲೆ ಅಥವಾ ಪ್ರತಿಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ.
ಬ್ಯಾಂಕ್ ಖಾತೆ ಬದಲಾವಣೆ, ಮತ್ತಿತರ ಇದ್ದಲ್ಲಿ ಗ್ರಾಹಕರು ಸಂಬಂಧಪಟ್ಟ ಅಡುಗೆ ಅನಿಲ ವಿತರಕರನ್ನು ಸಂಪರ್ಕಿಸಬೇಕು. ನಕಲು ಪ್ರತಿ ಯಂತ್ರಗಳ ಸಮಸ್ಯೆ ಇದ್ದಲ್ಲಿ ವಿತರಕರು ಡಿಜಿಟಲ್ ಅಥವಾ ತಮ್ಮ ಸ್ವಂತ ಕಾಫಿಯರ್, ಎಂ.ಸಿ ಕಾಫಿಯರ್ ಮೂಲಕ ನೆರವಾಗುತ್ತಾರೆ. ಯಾವುದೇ ಸ್ಪಷ್ಟೀಕರಣ/ನೆರವಿಗೆ ತಮ್ಮ ಸಮೀಪದ ವಿತರಕರನ್ನು ಸಂಪರ್ಕಿಸಬೇಕು.

ಕೋವಿಡ್-19 ಹಿನ್ನೆಲೆಯಲ್ಲಿ ಗ್ರಾಹಕರು ವಿತರಕರ ಬಳಿಗೆ ಖುದ್ದು ಹೋಗುವುದನ್ನು ತಪ್ಪಿಸಿ ಫೋನ್ ಮೂಲಕ ಸಂಪರ್ಕಿಸಬೇಕು. ಯಾವುದೇ ವಿಶೇಷ ಸಂದರ್ಭಗಳಲ್ಲಿ ವಿತರಕರ ಶೋ ರೂಂಗೆ ಭೇಟಿ ನೀಡಬೇಕಾದ್ದಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅವರು ತಿಳಿಸಿದ್ದಾರೆ.

emedialine

Recent Posts

ಇಂದಿನಿಂದ ಸೂಗೂರ (ಕೆ ) ನವರಾತ್ರಿ ಬ್ರಹ್ಮೋತ್ಸವ

ಕಾಳಗಿ : ಕಲ್ಯಾಣ ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಸುವರ್ಣ ಗಿರಿ ಕಾಳಗಿ ತಾಲೂಕಿನ ಸೂಗೂರ (ಕೆ )…

3 hours ago

ಕಾಳಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಕಲಬುರಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಕಾಳಗಿ ತಾಲೂಕು ಪ್ರವಾಸಿ ಮಂದಿರದಲ್ಲಿ ಹವ್ಯಾಸೀಕಲಾ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದಿವ್ಯ…

4 hours ago

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

17 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

20 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

1 day ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420