ಸುರಪುರ: ಕೊರೊನಾ ವೈರಸ್ ನಿರ್ಮೂಲನೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದ್ದ ೩೬ ಗಂಟೆಗಳ ಜನತಾ ಕರ್ಫ್ಯೂಗೆ ಸುರಪುರ ನಗರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ಶನಿವಾರ ಸಂಜೆ ೭ ಗಂಟೆಯಿಂದ ಸೋಮವಾರ ಬೆಳಿಗ್ಗೆ ೭ ಗಂಟೆಯವರೆಗೆ ೩೬ ಗಂಟೆಗಳ ಲಾಕ್ಡೌನ್ ಅಂಗವಾಗಿ ಜನತಾ ಕರ್ಫ್ಯೂ ಘೋಷಿಸಲಾಗಿತ್ತು.ನಗರಸಭೆಯ ವತಿಯಿಂದ ಶನಿವಾರ ನಗರದಲ್ಲಿ ಪ್ರಚಾರ ನಡೆಸಿ ಜನತಾ ಕರ್ಫ್ಯೂಗೆ ಬೆಂಬಲಿಸಲು ಮನವಿ ಮಾಡಲಾಗಿತ್ತು.ಅದರಂತೆ ಇಡೀ ನಗರದ ಜನರು ಲಾಕ್ಡೌನ್ಗೆ ಬೆಂಬಲಿಸಿ ಇಡೀ ದಿನ ಮನೆಯಿಂದ ಹೊರ ಬರದೆ ಬೆಂಬಲಿಸಿದರು.
ಭಾನುವಾರ ಬೆಳಿಗ್ಗೆ ಕೆಲ ಸಮಯ ಅಗತ್ಯ ವಸ್ತುಗಳ ಖರೀದಿಗಾಗಿ ಹಿರಗೆ ಬಂದರು ನಂತರ ೯ ಗಂಟೆಯ ವೇಳೆಗೆ ಎಲ್ಲರು ಮನೆಯಲ್ಲಿದ್ದು,ಇಡೀ ನಗರವೇ ಸ್ಮಶಾನ ಮೌನ ಆವರಿಸಿತ್ತು.ನಗರದ ಪ್ರಮುಖ ಜನ ಸಂದಣಿಯ ಸ್ಥಳಗಳಾದ ಮಹಾತ್ಮಾ ಗಾಂಧರ ವೃತ್ತ,ದರಬಾರ ರಸ್ತೆ,ಬಸ್ ನಿಲ್ದಾಣ,ಸರದಾರ್ ವಲ್ಲಭಬಾಯಿ ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಯಾರೊಬ್ಬರು ಇಲ್ಲದೆ ಬಿಕೋ ಎನ್ನುತ್ತಿದ್ದವು.
ನಗರದಲ್ಲಿನ ಎಲ್ಲಾ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲಸಿದರು ಅಲ್ಲದೆ ಹಾಲು ತರಕಾರಿ ಹೊರತು ಪಡಿಸಿ ಪೆಟ್ರೋಲ್ ಬಂಕ್ಗಳು ಕೂಡ ಮುಚ್ಚಲಾಗಿತ್ತು. ನಗರದೆಲ್ಲೆಡೆ ಪೊಲೀಸ್ ಕಾವಲು ಹಾಕಲಾಗಿತ್ತು.ಕೆಲವೊಬ್ಬರು ಮನೆಯಿಂದ ಹೊರ ಬಂದವರಿಗೆ ಲಾಕ್ಡೌನ್ ಇರುವುದನ್ನು ತಿಳಿಸಿ ಕಳುಹಿಸಲಾಯಿತು.ಸೋಮವಾರ ಮುಸ್ಲಿಮ್ ಸಮುದಾಯದವರ ರಂಜಾನ್ ಹಬ್ಬವಿದ್ದರು,ರವಿವಾರ ಬೆಳಿಗ್ಗೆಯೆ ತರಕಾರಿ ಮತ್ತಿತರೆ ಅಗತ್ಯ ವಸ್ತುಗಳನ್ನು ಖರೀದಿಸಿ ಎಲ್ಲರು ಜನತಾ ಕರ್ಫ್ಯೂಗೆ ಬೆಂಬಲಿಸಿದರು.
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…