ಸುರಪುರದಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಪಾಸಿಟಿವ್,ಜನರಲ್ಲಿ ಹೆಚ್ಚಿದ ಆತಂಕ

ಸುರಪುರ: ಕೊರಾನಾ ವೈರಸ್ ಅಟ್ಟಹಾಸ ಹಸಿರು ವಲಯ ಯಾದಗಿರಿ ಜಿಲ್ಲೆಯ ಸುರಪುರ ಆಸರ್ ಮೊಹಲ್ಲಾಕ್ಕೆ ಇದೇ ಮೇ 11 ರಂದು ಲಗ್ಗೆ ಇಟ್ಟಿತ್ತು. ಇಂದು ನಗರದ ವಸತಿ ನಿಲಯದ ಕ್ವಾರಂಟೈನಲ್ಲಿರುವ ತಾಯಿ-ಮಗುವಿಗೂ ಹಾಗೂ ಲಾಡ್ಜ್ ನ್ ಕ್ವಾರಂಟೈನ್ ಲ್ಲಿರುವ ತಾಯಿ-ಮಗಳಿಗೂ ಸೇರಿ ಒಟ್ಟು ನಾಲ್ವರಿಗೆ ಕೊರಾನಾ ವೈರಸ್ ಪಾಸಿಟಿವ್ ದೃಢ ಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ:ರಾಜಾ ವೆಂಕಪ್ಪನಾಯಕ ಅವರು ತಿಳಿಸಿದ್ದಾರೆ.

ಸುರಪುರ ನಗರ ವ್ಯಾಪ್ತಿಯ ದೀವಳಗುಡ್ಡದ ಕುಟುಂಬವೊಂದು ಮಹಾರಾಷ್ಟ್ರ ದಿಂದ ಇದೇ 14 ರಂದು ಹಿಂದಿರುಗಿ ಬಂದಿರುವ ಪತಿ-ಪತ್ನಿ ಮಗು ಮೂವರಲ್ಲಿ ಇಂಜನಿಯರ್ ಆಗಿರುವ 27 ವರ್ಷದ ಗರ್ಭಿಣಿ ಹಾಗೂ ಆಕೆಯ 4 ವರ್ಷದ ಹೆಣ್ಣು ಮಗುವಿಗೂ ಪಾಸಿಟಿವ್ ಬಂದಿದೆ.ಆದರೆ ಆಕೆಯ ಪತಿಗೆ ನೆಗಟಿವ್ ಬಂದಿದೆ ಇವರು ಲಾಡ್ಜ್ ವೊಂದರ್ ಕ್ವಾರಂಟೈನ್ ಲ್ಲಿದ್ದರು.

ಶಹಾಪೂರ ತಾಲೂಕಿನ ಗೋಗಿ ಗ್ರಾಮದ ಬಾಣಂತಿ ಹಾಗೂ 8 ತಿಂಗಳ ಗಂಡು ಕೂಸಿಗೂ ಪಾಸಿಟಿವ್ ಬಂದಿದೆ ಇವರೂ ಕೂಡಾ ಮಹಾರಾಷ್ಟ್ರದಿಂದ ಇದೇ 12 ರಂದು ಹಿಂದಿರುಗಿದ್ದರು, ಈಕೆಯನ್ನೂ ನಗರದ ವಸತಿ ನಿಲಯ ಕೇಂದ್ರದ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿತ್ತು. ಈಗ ಇವರೆಲ್ಲರನ್ನೂ ಯಾದಗಿರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈಗಾಗಲೆ ವಸತಿನಿಲಯದಲ್ಲಿರುವವರಲ್ಲಿ ಪಾಸಿಟಿವ್ ಕಾಣಿಸಿದ್ದರಿಂದ ಇವರಿದ್ದ ವಸತಿ ನಿಲಯದಲ್ಲಿನ 108 ಜನರಿಗೂ ಕ್ವಾರಂಟೈನ್ ಮುಂದುವರೆಯಲಿದೆ ಎಂದು ಟಿಹೆಚ್‌ಒ ತಿಳಿಸಿದ್ದಾರೆ.

ಈಗಾಗಲೆ ಅಹಮದಾಬಾದ್‌ನಿಂದ ಬಂದ ಕುಟುಂಬವೊಂದರ ಇಬ್ಬರಿಗೆ ಪಾಸಿಟಿವ್ ಬಂದ ನಂತರ ಬೆಚ್ಚಿ ಬಿದ್ದಿದ್ದ ನಗರದ ಜನತೆ ಈಗ ಮತ್ತೆ ನಾಲ್ವರಲ್ಲಿ ಕಾಣಿಸಿಕೊಂಡಿದ್ದರಿಂದ ಜನರು ಮತ್ತಷ್ಟು ಭಯಭೀತರಾಗಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಶನಿವಾರ ಮುಂಬೈ ಕೋರಾನಾ ಸ್ಪೋಟ್ ಗೊಂಡು ಒಂದೇ ದಿನ 72 ಪಾಸಿಟಿವ್ ಬಂದು ತಲ್ಲಣಗೊಳಿಸಿತ್ತು. ಇಂದು ಬೆಳಗ್ಗೆ 6 ಸಂಜೆ 18 ಸೇರಿ ಒಟ್ಟು 24 ಪಾಸಿಟಿವ್ ಪ್ರಕರಣದಿಂದ ಜಿಲ್ಲೆಯಲ್ಲಿ ಒಟ್ಟು 111 ಜನರಿಗೆ ಸೋಂಕು ದೃಢವಾದ ಬಗ್ಗೆ ವರದಿಯಾಗಿದೆ.

emedialine

Recent Posts

ಇಂದಿನಿಂದ ಸೂಗೂರ (ಕೆ ) ನವರಾತ್ರಿ ಬ್ರಹ್ಮೋತ್ಸವ

ಕಾಳಗಿ : ಕಲ್ಯಾಣ ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಸುವರ್ಣ ಗಿರಿ ಕಾಳಗಿ ತಾಲೂಕಿನ ಸೂಗೂರ (ಕೆ )…

56 mins ago

ಕಾಳಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಕಲಬುರಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಕಾಳಗಿ ತಾಲೂಕು ಪ್ರವಾಸಿ ಮಂದಿರದಲ್ಲಿ ಹವ್ಯಾಸೀಕಲಾ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದಿವ್ಯ…

2 hours ago

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

15 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

18 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

22 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

23 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420