ಕಾಜಿ ನಜ್ರುಲ್ ಇಸ್ಲಾಮ್ ರವರ 121ನೇ  ಜನ್ಮದಿನ

ಬಂಗಾಳ  ‘ಕ್ರಾಂತಿಕಾರಿ ಕವಿ’ ಎಂದೇ ಪ್ರಸಿದ್ಧರಾದ ಕಾಜಿ ನಜ್ರುಲ್ ಇಸ್ಲಾಮ್  ಮಹಾನ್ ಕವಿ ರವೀಂದ್ರನಾಥ ಟ್ಯಾಗೋರ್  ನಂತರ ಎರಡನೇ ಸ್ಥಾನವನ್ನು ಪಡೆದವರು. 1899ರ 25ರಂದು ಅವಿಭಜಿತ ಬಂಗಾಳದ ಬರ್ದ್ವಾನ ಜಿಲ್ಲೆಯ ಚುರುಲಿಯಾ  ಎಂಬ ಗ್ರಾಮದಲ್ಲಿ ಜನಿಸಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇರವಾಗಿ ಪಾಲ್ಗೊಂಡಿದ್ದ ಅಷ್ಟೇ ಅಲ್ಲದೆ ತಮ್ಮ ಕವಿತೆಗಳಿಂದ ಜನರನ್ನು ಬ್ರಿಟಿಷರ ವಿರುದ್ಧ ದೇಶದ ಜನರನ್ನು ಸಿಡಿದೆಬ್ಬಿಸಿದ್ದರು. ಕೋಮುಸೌಹಾರ್ದತೆಯ ಬಗ್ಗೆ ಇವರು ಕೇವಲ ಕೆಲವು ಕವನಗಳನ್ನು ಅಷ್ಟೇ  ಬರೆದಿಲ್ಲ. ಅದರಲ್ಲಿ  ತಮ್ಮ  ಹೃದಯ ಅಂತರಾಳದ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಅವರ ಒಂದು ಪದ್ಯದಲ್ಲಿ *”ನನ್ನ ಒಂದು ಗಿಡದಲ್ಲಿ ಎರಡು  ಹೂಗಳಿವೆ,  ಅವೇ  ಹಿಂದೂ-ಮುಸ್ಲಿಮ್”,*   ಎಂದು ಬರೆದಿದ್ದಾರೆ. ಇಂತಹ ಮಹಾನ್ ಚೇತನದ ಜನ್ಮದಿನ ಇಂದು
ಆ ಸಂದರ್ಭದಲ್ಲಿ ಬರೆದ ಅವರ ಒಂದು ಕವನ ಇಲ್ಲಿದೆ.

ನಾವಿಕ ಎಚ್ಚರ ! ಕಡಿದಾದ ಬೆಟ್ಟ,  ಬಾಯಿಬಿಟ್ಟ ಕಣಿವೆ ಮರುಭೂಮಿ ಸುಡುತ್ತ ಸುಡುತ್ತ ಹಿರಿದಾದ ಕಡಲು ಕತ್ತಲಿನ ರಾತ್ರಿ ಮುತ್ತಿಹವು ಸುತ್ತಮುತ್ತ ಪಯಣಿಗನೆ ಕೇಳ ಎಚ್ಚರದಿ ನೋಡ ಸಾಗಬೇಕು ದೂರ ದೂರ ಕುದಿಕುದಿವ ನೀರು ಮೊರೆ ಮೊರೆವ  ಅಲೆಯು ಕುಣಿದಿರುವುದು ನಿನ್ನ ನಾವೆ ಬಿರಬಿರನೇ ಗಾಳಿ ಬೀಸುತ್ತ ಬರಲು ದಿಕ್ಕೆಟ್ಟು ತೂರಿತೂರಿ ಇಂತಿರುವ ದೋಣಿ ಚುಕ್ಕಾಣಿ ಹಿಡಿವ ಎಂಟೆದೆಯ ಧೀರ  ಯಾರು? ಈಜರಿಯದಂತ ಅಸಹಾ ಯ ದೇಶ ಮುಳುಗಿ ಮುಳುಗಿ ಎದ್ದು ಮುಳಗೆ ತೂಫಾನಿನಲ್ಲೂ ಕಿರು ದೋಣಿಯನ್ನು ನೀ ನಡೆಸೆ  ಮುಂದೆ ಮುಂದೆ ಭವಿಷ್ಯವಿಂದು ಬಾ ಧೀರ  ಎಂದು ಕರೆದಿಹುದು ಕೈ ಬೀಸಿ ಬೀಸಿ.

ಬಂಧನದಿ  ಬಂದ ತಾಯಮುಕ್ತಿಗಾಗಿ ನೀ ಬಾರ  ಧೈರ್ಯ ತೋರ ಮುಸ್ಲಿಮರು ಯಾರು,ಯಾರು  ಹಿಂದೂವೆಂದು   ಕೇಳಿಹರು  ಯಾರು ಯಾರು? ಮುಳುಗಿಹನು ಮನುಜ ಸೋದರನು ಎಂದು  ಅಂಬಿಗನ ಹೇಳು ಹೇಳು.

ಈ  ಬದುಕ ಕುರಿತು ಜಯಗೀತೆ ಹಾಡಿ ಗಲ್ಲುಗಂಬವೆರಿ ಮೆರೆದ ಆ  ವೀರರಿಂದು  ನಿನ್ನ ಕೇಳುತಿಹರು ‘ ಬಲಿದಾನ,  ಎಲ್ಲಿ ಎಲ್ಲಿ? ಕೈಬಿಟ್ಟು ದೇಶ,  ಕಾದುವೆಯೆ ಕುಲಕ್ಕೆ?  ಕಾಪಿಡುವೆ  ಯಾವುದನ್ನು?.

ತೆರೆ ತೆರೆಗಳುರುಳಿ ನೀರ್  ಕೆರಳಿ  ಕೆರಳಿ  ಹರಿಗೋಲು ತೇಲಿ  ಹಾರಿ  ಪರೀಕ್ಷೆಯಂತೆ ಇಂದಿಹುದು  ಹೌದು  ನಮ್ಮೆದುರು ಬಂದು ನಿಂತು ಎಚ್ಚರದಿ  ನಿಂತು  ಎಚ್ಚರದಿ ನೋಡು  ಎಚ್ಚರದಿ  ಹುಟ್ಟುಹಾಕು.

ದೇಶದ ಕುರಿತು ಜಾತಿ-ಧರ್ಮದ ಸೌಹಾರ್ದತೆ ಬಗ್ಗೆ  ಬಹಳ ವಿಶಾಲವಾದ ಅರ್ಥವನ್ನು ಕಟ್ಟಿಕೊಟ್ಟಿದ್ದಾರೆ. ನಮ್ಮೆಲ್ಲರಿಗೆ ಆದರ್ಶವಾಗಿದ್ದಾರೆ. ಅದೇ ರೀತಿ ನಾವುಗಳು ಪರಸ್ಪರ ಪ್ರೀತಿ ಭಾವೈಕ್ಯತೆಯಿಂದ  ಇದೇ ರೀತಿ  ನಾವು ನೀವು ಒಗ್ಗಟಾಗಿ ಇರೋಣ.  ಭವ್ಯ ಭಾರತವನ್ನು ಕಟ್ಟೋಣ.  ನೂರಾರು ವರ್ಷಗಳಿಂದ ಸೋದರ ಭಾವದಿಂದ ಬೆಳೆದು ಬಂದಂತೆ ಹಿಂದೂ-ಮುಸ್ಲಿಮರ ನಡುವಿನ ಸ್ನೇಹ ಪ್ರೀತಿ ಗೌರವಗಳಿಗೆ ಧಕ್ಕೆಯಾಗದಂತೆ   ರಾಜಕೀಯದ  ಕುತಂತ್ರದ  ಆಟಕ್ಕೆ ಬಲಿಯಾಗದೇ  ದೇಶದ  ಪ್ರಜಾಪ್ರಭುತ್ವ ಮೌಲ್ಯಗಳು ಮಾನವೀಯ ಗುಣಗಳು ಮತ್ತು  ಜಾತ್ಯತೀತ ರಾಷ್ಟ್ರವನ್ನು ಉಳಿಸೋಣ.

ಎಲ್ಲ ಜಾತಿ ಧರ್ಮಗಳಲ್ಲಿ  ಕೋಮುವಾದವನ್ನು ಅಳಿಸೋಣ! ರಾಷ್ಟ್ರಕವಿ ಕುವೆಂಪು ರವರು  ಸಾರಿದ ಈ ಸಂದೇಶ *”ಗುಡಿ- ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ! ಬಡತನವ ಬುಡಮಟ್ಟ ಕೀಳಬನ್ನಿ* ಸಾಕಿನ್ನು ಸೇರಿರೈ ಮನುಜ ಮತಕೆ ವಿಶ್ವ ಪಥಕೆ* ಇಂಥ  ಧರ್ಮನಿರಪೇಕ್ಷ ವಿಚಾರ ಅಳವಡಿ ಸಿಕೊಳ್ಳುವುದು ಬಹಳ ಮಹತ್ವದಾಗಿದೆ.  ಅದೇ ರೀತಿಯಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿಭಜಕ ನೀತಿಗಳ ವಿರುದ್ಧ ರಾಜಿ ರಹಿತವಾಗಿ ಹೋರಾಡಿದಂತ
ಅಶ್ಫಾ ಕುಲ್ಲಾ  ಅಲ್ಲಾಖಾನ್- ರಾಮಪ್ರಸಾದ ಬಿಸ್ಮಿಲ್ಲಾ ಅಂತ ಸೌಹಾರ್ಧಯುತ  ಸ್ನೇಹವನ್ನು ನಾವೆಲ್ಲರೂ ಬೆಳಸಿಕೊಳ್ಳೋಣ.
ನಮ್ಮನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಾದ ನಿರುದ್ಯೋಗ,  ಬಡತನ ಬೆಲೆ ಏರಿಕೆ,   ಹಸಿವು ಜಾತಿವಾದ ಕೋಮುವಾದದ ವಿರುದ್ಧ ನಾವೆಲ್ಲರೂ ಒಟ್ಟಾಗಿ ಧ್ವನಿ ಎತ್ತು ಮೂಲಕ ನಿಜವಾದ ಭಾರತೀಯರಾಗೋಣ.

ಮುಸ್ಲಿಂ ಬಾಂಧವರಿಗೆ ಭಾವೈಕ್ಯತೆ ಸಾರುವ  ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು. ಶಾಂತಿ ಸೌಹಾರ್ದತೆಯ  ಸಂಕೇತವಾಗಿರುವ ರಂಜಾನ್ ಹಬ್ಬ ತಮ್ಮೆಲ್ಲರ ಬದುಕಿನಲ್ಲಿ  ಸಂತಸ ಸಂಭ್ರಮ, ನೆಮ್ಮದಿ ತರಲಿ ಎಂದು ಹಾರೈಸುತ್ತೇನೆ.

ಕೊರೊನಾದಿಂದ ಇಡೀ ಜಗತ್ತೇ ಸಂಕಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಸಾಮಾಜಿಕ ಅಂತರದೊಂದಿಗೆ ಸುರಕ್ಷಿತವಾಗಿ ಮನೆಯಲ್ಲೇ ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಬೇಕೆಂದು ಸಮಸ್ತ ಮುಸ್ಲಿಂ ಸಹೋದರರಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ.

✍️ –ಭೀಮಾಶಂಕರ್ ಪಾಣೇಗಾಂವ್, ಹವ್ಯಾಸಿ ಬರಹಗಾರರು, ಕಲಬುರಗಿ- 9341064822
emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

9 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

12 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

17 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

17 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

19 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420