ಸುರಪುರ: ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಎಂಬ ನೂತನ ಯೋಜನೆ ಜಾರಿಯಾಗಿದ್ದು ಇದರಿಂದ ಯಾವುದೆ ಬ್ಯಾಂಕ್ಲ್ಲಿ ಖಾತೆ ಹೊಂದಿದ್ದ ಗ್ರಾಹಕರು ಪೋಸ್ಟ್ ಆಫೀಸಿನಲ್ಲಿಯೆ ಹಣ ಪಡೆಯಬಹುದಾಗಿದೆ.ಈ ಯೊಜನೆಯ ಸದುಪಯೋಗ ಪಡೆಯಲು ಆಯಾ ಅಂಚೆ ಪತ್ರಗಳ ವಿತರಕರ ಬಳಿ ತಮ್ಮ ಖಾತೆಯ ಹಣ ಪಡೆಯುವ ಅವಕಾಶವನ್ನು ಸರಕಾರ ಆರಂಭಿಸಿದ್ದು,ಇದರ ಮೊದಲ ದಿನದ ಕಾರ್ಯಾರಂಭದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ತಾಲೂಕಿನ ಆಲ್ದಾಳ ಅಂಚೆಕಚೇರಿಯ ಪತ್ರಗಳ ವಿತರಕ ಪ್ರಸನ್ನ ಪೀರಾಪುರ ದೇಶದಲ್ಲಿಯೆ ನಾಲ್ಕನೆ ಸ್ಥಾನದ ಸಾಧನೆ ಮಾಡಿದ್ದಾರೆ.
ಮಂಗಳವಾರ ಆರಂಭಗೊಂಡ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆ ಆರಂಭಗೊಂಡ ಮೊದಲ ದಿನವೆ 96 ಜನ ಗ್ರಾಹಕರ ಬಳಿಗೆ ಹೋಗಿ ಹಣ ನೀಡುವ ಮೂಲಕ ಉತ್ತಮ ಸಾಧನೆ ಮಾಡಿ ರಾಷ್ಟ್ರೀಯ ಅಂಚೆ ಇಲಾಖೆಯ ಪ್ರಶಂಸೆ ಪಡೆದಿದ್ದಾರೆ.ಯಾದಗಿರಿ ಜಿಲ್ಲೆಯಲ್ಲಿಯೆ ಮೊದಲ ದಿನವೇ 96 ಜನ ಗ್ರಾಹಕರಿಗೆ ಯೋಜನೆಯ ಅರಿವು ಮೂಡಿಸುವ ಜೊತೆಗೆ ಅವರ ಮನೆ ಬಾಗಿಲಿಗೆ ಹೋಗಿ ಗ್ರಾಹಕರ ಬ್ಯಾಂಕ್ ಖಾತೆಯ ಹಣವನ್ನು ಪೋಸ್ಟ್ ಬ್ಯಾಂಕ್ ಮೂಲಕ ನೀಡಿ ಸಾಧನೆ ಮಾಡಿದ್ದಾರೆ.
ಸಾಧನೆಯ ಕುರಿತು ಅಂಚೆ ವಿತರಕ ಪ್ರಸನ್ನ ಮಾತನಾಡಿ, ನಮಗೆ ಸರಕಾರ ಸಂಬಳ ನೀಡುವುದು ಉತ್ತಮ ಸೇವೆ ಮಾಡಲು,ಅದನ್ನು ಮನಗಂಡು ನಮ್ಮ ಸೇವೆಯಲ್ಲಿಯೆ ಸಂತೋಷ ಮತ್ತು ಹೆಮ್ಮೆ ಪಡುವ ಮೂಲಕ ನಿತ್ಯವು ನೂರಾರು ಜನರನ್ನು ಭೇಟಿ ಮಾಡಿ ಅವರ ಸೇವೆ ಮಾಡುವ ಉತ್ತಮ ಅವಕಾಶ ಲಭಿಸಿದೆ.ಇದರಿಂದ ಜನರ ಸೇವೆ ಮಾಡಿದ ತೃಪ್ತಿಯು ಇದೆ.
ಈಗ ನೂತನವಾಗಿ ಆರಂಭಗೊಂಡಿರುವ ಇಂಡಿಯನ್ ಪೋಸ್ಟ್ ಬ್ಯಾಂಕ್ ಯೊಜನೆ ಜನ ಸೇವೆಗೆ ಸಿಕ್ಕಿರುವ ಮತ್ತೊಂದು ಅವಕಾಶವಾಗಿದ್ದು,ಅದನ್ನ ಪ್ರಾಮಾಣಿಕವಾಗಿ ಮಾಡಿದ್ದರಿಂದ ಈ ಸಾಧನೆ ಮಾಡಲು ಅನುಕೂಲವಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…