ಕಲಬುರಗಿ: ನಗರದ ಸೂಪರ್ ರಸ್ತೆಯಲ್ಲಿ ಇರುವ ಅಂಚೆ ಕಚೇರಿಗಳ ವರಿಷ್ಠ ಅಧೀಕ್ಷರ ಕಾರ್ಯಾಲಯ ಕಚೇರಿ ಮುಂದೆ ಕೊರಮ , ಕೊರವ, ಕೊರಚ ಸಮುದಾಯದವರನ್ನು ಎಸ್.ಸಿ ಪಟ್ಟಿಯಲ್ಲಿ ಯಥಾವತ್ತಾಗಿ ಮುಂದುವರಿಸುಂತೆ ಕರ್ನಾಟಕ ಸರ್ಕಾರವು ರಾಷ್ಟ್ರೀಯ ಎಸ್.ಸಿ ಅಯೋಗಕ್ಕೆ ಶಿಪಾರಸು ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ರಾಜ್ಯಾದ್ಯಂತ ಪತ್ರ ಚಳುವಳಿ ಕರೆ ನೀಡಿದರೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಕೊರಮ, ಕೊರವ ಕೊರಚ ಸಮುದಾಯದವರು ಜಿಲ್ಲೆಯಾದ್ಯಂತ ಪತ್ರ ಬರೆದು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇಡೀ ದೇಶದಲ್ಲಿ ಕೊರಮ,ಕೊರವ ಕೊರಚ, ಸಮುದಾಯಗಳು ಕರ್ನಾಟಕ ರಾಜ್ಯ ಸೇರಿದಂತೆ ೧೬ ರಾಜ್ಯಗಳಲ್ಲಿ ಎಸ್.ಸಿ ಪಟ್ಟಿಯಲ್ಲಿ ಹಾಗೂ ೧೪ ರಾಜ್ಯಗಳಲ್ಲಿ ಎಸ್.ಟಿ ಪಟ್ಟಿಯಲ್ಲಿದ್ದು ಆದರೆ ಕೆಲವರು ಅನಾವಶ್ಯಕವಾಗಿ ನಮ್ಮ ಸಂವಿಧಾನಿಕ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನ ಮಾಡುತ್ತೆವೆ ಇದನ್ನು ಸರ್ಕಾರ ಮನಗಂಡು ರಾಷ್ಟ್ರೀಯ ಎಸ್.ಸಿ ಆಯೋಗಕ್ಕೆ ಯಥಾವತ್ತಾಗಿ ಮೀಸಲಾತಿ ವರದಿ ಶಿಪಾರಸು ಮಾಡಬೇಕಾಗಿ ಪತ್ರ ಚಳುವಳಿ ಮೂಲಕ ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ್ ಎಸ್. ಭಜಂತ್ರಿ, ಸಾಯಿಬಣ್ಣ ಭಜಂತ್ರಿ, ಮಲ್ಲಿಕಾರ್ಜುನ ಭಜಂತ್ರಿ, ಸುಭಾಷ್ ಚಂದ್ರ ಭಜಂತ್ರಿ, ಕಲ್ಯಾಣಿ ಭಜಂತ್ರಿ, ಜಗದೇಶ ಜಾಧವ, ಜಗನ್ನಾಥ ಭಜಂತ್ರಿ, ಮಲ್ಲೇಶಿ ಭಜಂತ್ರಿ ಇತರರು ಭಾಗವಹಿಸಿದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…