ಸುರಪುರ: ನಗರದ ಕಂಟೋನ್ಮೆಂಟ್ ಝೋನ್ಗಳಲ್ಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಗಮಟಲು ದ್ರವ ಸಂಗ್ರಹಿಸಿ ಕೊರೊನಾ ಸೊಂಕಿನ ಕುರಿತು ಪತ್ತೆಗೆ ಕಳುಹಿಸಲಾಯಿತು.ಈ ಸಂದರ್ಭದಲ್ಲಿ ಹಾಜರಿದ್ದ ಅನೇಕ ಜನ ಮಕ್ಕಳ ಪಾಲಕರು ವರದಿ ಏನು ಬರುವುದೊ ಎಂದು ಆತಂಕಪಟ್ಟರು.
ಇದೇ ಸಂದರ್ಭದಲ್ಲಿ ಕೆಲ ಸಮಯ ಗಂಟಲು ದ್ರವ ಸಂಗ್ರಹಕ್ಕೆ ವಿರೋಧ ವ್ಯಕ್ತವಾಯಿತು.ಕಂಟೋನ್ಮೆಂಟ್ ಝೋನ್ ಮಕ್ಕಳ ಗಂಟಲು ದ್ರವ ಸಂಗ್ರಹದಿಂದ ಮಕ್ಕಳು ಆತಂಕಗೊಳ್ಳುತ್ತಾರೆ.ಇದರಿಂದ ಮಕ್ಕಳು ಪರೀಕ್ಷೆ ಬರೆಯಲು ತೊಂದರೆಯಾಗಲಿದೆ,ಅಲ್ಲದೆ ಈ ಹಿಂದೆ ಎಲ್ಲರ ಗಂಟಲು ದ್ರವ ಸಂಗ್ರಹಿಸಿದ ನಂತರ ವರದಿ ಬರಲು ವಾರಗಟ್ಟಲೆ ಸಮಯ ತಗುಲಿದೆ.
ಈಗ ಪರೀಕ್ಷೆ ಎರಡು ದಿನಗಳಿರುವಾಗ ಗಂಟಲು ದ್ರವ ಸಂಗ್ರಹಿಸಿದರೆ ವರದಿ ಬರುವುದು ಯಾವಾಗ,ಪರೀಕ್ಷೆ ದಿನದ ಒಳಗೆ ವರದಿ ಬರದಿದ್ದಲ್ಲಿ ಯಾರಿಗಾದರು ಪಾಸಿಟಿವ್ ಇದ್ದರೆ ಉಳಿದ ಮಕ್ಕಳ ಗತಿ ಏನು? ಆದ್ದರಿಂದ ಎರಡು ದಿನದಲ್ಲಿ ವರದಿ ಬಂದರೆ ಮಕ್ಕಳನ್ನು ಪರೀಕ್ಷೆಗೆ ಕಳುಹಿಸುತ್ತೇವೆ.ಇಲ್ಲವಾದಲ್ಲಿ ಕಳುಹಿಸುವುದಿಲ್ಲ ಎಂದು ಲೋಕ ಜನಶಕ್ತಿ ಪಕ್ಷದ ಜಿಲ್ಲಾಧ್ಯಕ್ಷ ಅಪ್ಪಾರಾವ್ ನಾಯಕ ತಿಳಿಸಿದರು.
ಈ ಸಂದರ್ಭದಲ್ಲಿ ಗಮಟಲು ದ್ರವ ಸಂಗ್ರಹ ಶಿಬಿರದ ನೇತೃತ್ವ ವಹಿಸಿದ್ದ ವೈದ್ಯ ಓಂ ಪ್ರಕಾಶ ಅಂಬುರೆ ಮಾತನಾಡಿ,ಪೋಷಕರು ಆತಂಕ ಪಡುವುದು ಬೇಡ ಎಲ್ಲಾ ಮಕ್ಕಳ ವರದಿ ಪರೀಕ್ಷೆ ದಿನದ ಒಳಗೆ ಬರಲಿವೆ ಎಂದು ಭರವಸೆ ನೀಡಿದ ನಂತರ ನಿಟ್ಟುಸಿರು ಬಿಟ್ಟ ಪಾಲಕರು ಗಂಟಲು ದ್ರವ ಪರೀಕ್ಷೆಗೆ ಅನುಮತಿಸಿದರು.
ನಂತರ ಕಂಟೋನ್ಮೆಂಟ್ ಝೋನ್ಗಳಾದ ದೀವಳಗುಡ್ಡದ ೩೦ ಮಕ್ಕಳು,ಆಸರ ಮೊಹಲ್ಲಾದ ೭ ಮಕ್ಕಳು,ಸಿದ್ದಾಪುರದ ೫ ಮಕ್ಕಳು ಹಾಗು ಗೋನಾಲ ಎಸ್.ಡಿ ಗ್ರಾಮದ ೩ ಮಕ್ಕಳ ಗಂಟಲು ದ್ರವ ಸಂಗ್ರಹ ನಡೆಸಲಾಯಿತು.ಈ ಸಂದರ್ಭದಲ್ಲಿ ಡಾ: ಇಮ್ತಿಯಾಜ್,ಲ್ಯಾಬ್ ಟೆಕ್ನೀಶಿಯನ್ ಶಂಕರ ಜಾಜುರೆ,ಪೋಷಕರಾದ ಹ್ಯಯಾಳಪ್ಪ ಸೇರಿದಂತೆ ಅನೇಕ ಜನ ಮಕ್ಕಳು ಮತ್ತು ಪೋಷಕರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…