ಶಹಾಬಾದ: ಅರಿವಿನ ಬೆಳಕನ್ನು ನೀಡಿ ಉತ್ತಮ ಬದುಕನ್ನು ನಡೆಯಲು ಪ್ರೇರೇಪಿಸುವಂತೆ ಮಾರ್ಗದರ್ಶನ ಮಾಡಿದ ಗುರುವಿಗೆ ಧನ್ಯತೆ ಅರ್ಪಿಸುವುವ ದಿನವೇ ಗುರು ಪೂರ್ಣಿಮೆ ಎಂದು ನಿಜಾಮ ಬಜಾರನ ಮುಖಂಡ ವಿಠ್ಠಲ ಚವ್ಹಾಣ ಹೇಳಿದರು.
ಅವರು ನಗರದ ನಿಜಾಮ ಬಜಾರನ ಸದ್ಗುರು ಸದಾಶಿವ ಬೆಂಕಿತಾತನವರ ಮಠದಲ್ಲಿ ಗುರು ಪೂರ್ಣಿಮೆ ನಿಮಿತ್ತ ಭಕ್ತರು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕಿರಿಯ ಪೂಜ್ಯರಾದ ಸದ್ಗುರು ಮಂಗಲಸಿಂಗ್ ಬೆಂಕಿತಾತನವರನ್ನು ಸತ್ಕರಿಸಿ ಮಾತನಾಡಿದರು.
ಬದುಕಿನುದಕ್ಕೂ ಗುರು ನಮ್ಮ ಕಷ್ಟಗಳಲ್ಲಿ, ಜೀವನುದಕ್ಕೂ ನಮ್ಮ ಬದುಕಿನ ಶ್ರೇಯಸ್ಸಿಗೆ ಮಾರ್ಗದರ್ಶನ ಮಾಡಿ ಅರಿವಿ ಮಾರ್ಗ ತೋರುತ್ತಾರೆ. ಅವರಿಗೆ ನಾವುಬೆಲೆ ಕಟ್ಟಲು ಸಾಧ್ಯವಿಲ್ಲ.ಆದ್ದರಿಂದ ಸನಾತನ ಕಾಲದಿಂದಲೂ ಗುರುವಿಗೆ ಧನ್ಯತೆ ಅರ್ಪಿಸುವ ಕಾರ್ಯ ನಡೆಯುತ್ತಿದೆ.ಅದುವೇ ಗುರು ಪೂರ್ಣಿಮೆ ಎಂದು ಹೇಳಿದರು.
ಬೆಳಗ್ಗೆ ಬೆಂಕಿತಾತನವರ ಮೂರ್ತಿಗೆ ಮಹಾ ಅಭಿಷೇಕ, ಬಿಲ್ವಾರ್ಚನೆ ನಡೆಯಿತು. ಸಂಜೆ ಸದ್ಗುರು ಸದಾಶಿವ ಬೆಂಕಿತಾತನವರ ಪಾದುಕೆಗೆ ವಿಶೇಷ ಪೂಜೆ, ಅರ್ಚನೆ ನಡೆಸಲಾಯಿತು. ನಂತರ ನಡೆದ ಸಮಾರಂಭದಲ್ಲಿ ಕಿರಿಯ ಪೂಜ್ಯರಾದ ಮಂಗಲಸಿಂಗ್ ಠಾಕೂರ ಬೆಂಕಿತಾತನವರಿಗೆ ಭಕ್ತರು ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ಭಕ್ತರಾದ ಗುಂಡೇರಾವ ಮಾಣಿಕ, ಶಂಭುಲಿಂಗ ನಾಯ್ಕಲ್, ದೇವೆಂದ್ರ ಬಾಗೋಡಿ, ಭೀಮರಾವ ಮದ್ರಿ, ಡಾ.ವೆಂಕಟೇಶ ನಾಯ್ಕೊಡಿ, ಸುನೀಲ ಭಗತ್, ಸಿದ್ದಲಿಂಗ ಶಿರಗೂಂಡ, ವಿಶ್ವನಾಥ ರಾಠೋಡ, ಕೀಶನ್ ಪವಾರ, ಬಾಬುಮಿಯ್ಯಾ ಚನ್ನವೀರ ಇತರರು ಇದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…