ವಾಡಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಪೊಲೀಸ್ ಠಾಣೆಯಲ್ಲೂ ಕಳೆದ ಐದಾರು ದಿನಗಳಿಂದ ಗರಂ ಗರಂ ಆಯುವೇದಿಕ ಕಷಾಯ ಕುದಿಯುತ್ತಿದೆ. ಪ್ರತಿನಿತ್ಯ ಬೆಳಗ್ಗೆ ನಿಯೋಜಿಸಲಾದ ಸ್ಥಳಗಳಲ್ಲಿ ಕರ್ತವ್ಯಕ್ಕೆ ಅಣಿಯಾಗಲು ಹೊರಡುವ ಖಾಕಿಪಡೆಗಳು ಕಡ್ಡಾಯವಾಗಿ ಈ ಕಷಾಯವನ್ನು ಗಂಟಲಿಗೆ ಇಳಿಸಿಯೇ ಮುಂದೆ ಹೆಜ್ಜೆಯಿಡುತ್ತಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪಿಎಸ್ಐ ವಿಜಯಕುಮಾರ ಭಾವಗಿ, ಮಹಾಮಾರಿ ವೈರಸ್ನಿಂದ ಬಚಾವ್ ಆಗಲು ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ಅಧ್ಯತೆ ನೀಡಬೇಕಿದೆ. ಬೆಳಗಿನ ವ್ಯಾಯಾಮದ ಜತೆಗೆ ಇಂಥಹ ಔಷಧಿ ಗುಣವುಳ್ಳ ಕಷಾಯ ಕುಡಿಯುವುದರಿಂದ ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಮತ್ತು ಉತ್ಸಾಹದಿಂದ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಆಯುರ್ವೇದ ಕಷಾಯ ವಿತರಣೆ ಪದ್ಧತಿ ಬಹುತೇಕ ಠಾಣೆಗಳಲ್ಲಿ ಜಾರಿಗೆ ತರಲಾಗಿದ್ದು, ನಮ್ಮ ಠಾಣೆಯಲ್ಲೂ ಇದಕ್ಕೆ ಚಾಲನೆ ನೀಡಿದ್ದೇವೆ. ಸಾರ್ವಜನಿಕರೂ ಕೂಡ ಈ ಕಷಾಯವನ್ನು ಮನೆಯಲ್ಲಿ ತಯಾರಿಸಿ ಕುಡಿಯುವುದು ಒಳ್ಳೆಯದು ಎಂದು ಪ್ರತಿಕ್ರೀಯಿಸಿದ್ದಾರೆ.
ತುಳಸಿ ಎಲೆ, ಯಾಲಕ್ಕಿ, ಲವಂಗ, ಶುಂಠಿ, ಚೆಕ್ಕೆ, ಕರಿ ಮೆಣಸು, ಜೀರಗಿ, ನಿಂಬೆ ರಸ, ಬೆಳ್ಳುಳ್ಳಿ, ಅರಸಿಣ, ಬೆಲ್ಲ, ಧನಿಯಾ ಸೇರಿದಂತೆ ಇತರ ಪದಾರ್ಥಗಳನ್ನು ನೀರಿನಲ್ಲಿ ಮಿಶ್ರಣ ಮಾಡಿ ಚೆನ್ನಾಗಿ ಬೇಯಿಸಿದ ನಂತರ ಈ ಆಯುರ್ವೇದ ಕಷಾಯ ಸಿದ್ಧಗೊಳ್ಳುತ್ತದೆ. ಇದನ್ನು ಬೆಳಗ್ಗೆ ಮತ್ತು ಸಾಯಂಕಾಲ ಎರಡು ಟೈಂ ಬಿಸಿಬಿಸಿಯಾಗಿಯೇ ಸೇವಿಸುವುದರಿಂದ ಗಂಟಲಿಗೆ ಹಿತ ನೀಡುತ್ತದೆ. ಉಸಿರಾಟದ ಕ್ರಿಯೆ ಉತ್ತಮಗೊಳ್ಳಲು ಇದು ಸಹಕಾರ ನೀಡುತ್ತದೆ.
ಎಲ್ಲೆಡೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ನಾವು ಪೊಲೀಸರು ನಿರ್ಭಯವಾಗಿ ಜನರ ಮಧ್ಯೆ ಕರ್ತವ್ಯಕ್ಕೆ ನಿಲ್ಲುತ್ತೇವೆ. ಈ ಮಧ್ಯೆ ನಮಗೂ ಸೋಂಕಿನ ಆತಂಕ ಇದ್ದೇಯಿದೆ. ಸ್ಯಾನಿಟೈಸರ್ ಮತ್ತು ಮಾಸ್ಕ್ ಬಳಕೆ ಮಾಡುವ ಜತೆಗೆ ಈ ಕಷಾಯವೂ ಕುಡಿದರೆ ಮಾನಸಿಕ ಆತ್ಮಸ್ಥೈರ್ಯ ಮತ್ತಷ್ಟು ಹೆಚ್ಚುತ್ತದೆ ಎನ್ನುತ್ತಾರೆ ಪೊಲೀಸ್ ಪೇದೆಗಳಾದ ಮಾಲನಂಬಿ, ದೊಡ್ಡಪ್ಪ ಪೂಜಾರಿ, ಬಸಲಿಂಗಪ್ಪ ಮುನಗಲ್ ಹಾಗೂ ದತ್ತಾತ್ರೇಯ ಜಾನೆ. ಠಾಣೆಯಲ್ಲಿ ಬೇಯಿಯುವ ಔಷಧ ರೂಪದ ಕಷಾಯ ಜನಗಳ ಮನೆ ಮನೆಯಲ್ಲೂ ಬೇಯಬೇಕು ಎಂದು ಪೊಲೀಸ್ ಅಧಿಕಾರಿಗಳು ಆಶಯ ವ್ಯಕ್ತಪಡಿಸಿದ್ದಾರೆ.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…