ಬಿಸಿ ಬಿಸಿ ಸುದ್ದಿ

ಸುರಪುರದ ಕಾವ್ಯ ವಿವೇಕ ಗಮನಾರ್ಹ

ಕಲಬುರಗಿ: ಹಿರಿಯ ಲೇಖಕರು, ಎ. ಕ್ರಷ್ಣ ಸುರಪುರ ಅವರು ರಚಿಸಿದ ” ಹರಕು ಚಾಪೆಯ ಮನೆಗೆ ಸಿರಿದೈವ ಬಂತು ” ಕವನ ಸಂಕಲನ ಕುರಿತು ಕಲಬುರಗಿಯ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ಚರ್ಚಾ ಗೋಷ್ಠಿ ನಡೆಯಿತು.

ವಿಮರ್ಶಕರು ಸರಕಾರಿ ಪದವಿ ಮಹಾವಿದ್ಯಾಲಯ ದ ಸ್ನಾತಕೋತ್ತರ ಕನ್ನಡ ವಿಭಾಗದ ಪ್ರಾಧ್ಯಾಪಕರು ಡಾ ಸುರೇಂದ್ರಕುಮಾರ ಕೆರಮಗಿ ಅವರು ವಿಮರ್ಶೆ ಮಾಡಿದರು. ಕನ್ನಡ ಕಾವ್ಯ ಪರಂಪರೆಯಲ್ಲಿ ಹೈದರಾಬಾದ್ ಕರ್ನಾಟಕದ ಕೊಡುಗೆ ಮೆಲುಕು ಹಾಕುತ್ತಾ ಹಿರಿಯ ತಲೆಮಾರಿನ ಕವಿಗಳ ಪ್ರಕ್ರತಿ ಪ್ರೇಮ, ನಾಡ ನುಡಿ ಅಭಿಮಾನ ಭಾವ ಭಾಷೆಯ, ಎರಕ ಕಾವ್ಯ ತಂತ್ರ ಸಂವೇದನೆ ಅಭಿವ್ಯಕ್ತಿ ಕ್ರಮ ವನ್ನು ಎ ಕ್ರಷ್ಣ ಸುರಪುರ ಅವರ ಕಾವ್ಯ ವನ್ನು ವಿಶ್ಲೇಷಿದರು.ಸುರಪುರವರ ಕಾವ್ಯ ವಿವೇಕ ಗಮನಾರ್ಹ ಎಂದರು.

ಹಿರಿಯ ಕವಿ ಕಾದಂಬರಿಕಾರ ವಿಶ್ರಾಂತ ಪ್ರಾಚಾರ್ಯರು ಡಾ ಸ್ವಾಮಿರಾವ ಕುಲಕರ್ಣಿ ಅವರು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ನಾಡು ಲೇಖಕರು ಮತ್ತು ಓದುಗರ ಸಹಕಾರ ಸಂಘದ ಅಧ್ಯಕ್ಷರು ಶ್ರೀ ಅಪ್ಪಾರಾವ್ ಅಕ್ಕೋಣಿ ಅವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ, ಸಂಘದ ಉದ್ದೇಶ ಕ್ರತಿ ,ಲೇಖಕರು ಓದುಗರ ನಡುವೆ ಸಾಹಿತ್ಯ ಆಸಕ್ತಿ ಮೂಡಿಸಿ ಮೂಡಿಸುವುದರ ಜೊತೆಗೆ ವಿಮರ್ಶೆ ಗೆ ವೇದಿಕೆ ನಿರ್ಮಿಸುವುದು ಆಗಿದೆ ಎಂದರು ಕಾರ್ಯದರ್ಶಿ ಡಾ ಶರಣಬಸಪ್ಪ ವಡ್ಡನಕೇರಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ಕಾವ್ಯ ಚರ್ಚೆಯಲ್ಲಿ ಸಾಹಿತಿ ಸುಬ್ರಾವ ಕುಲಕರ್ಣಿ ಡಾ ಸೂರ್ಯಕಾಂತ ಸುಜ್ಯಾತ್, ಪ್ರೊ ಎಸ್ ಎಲ್ ಪಾಟೀಲ, ಪರಿಸರವಾದಿ ಶ್ರೀ ಪಿ. ಮನು ಸಗರಶ್ರೀ ವೆಂಕಟೇಶ್ ಜನಾದ್ರಿ, ಶ್ರೀ ಶಿವಾನಂದ ಭೂಪತಿ, ಶ್ರೀ ಶಿವಾನಂದ ಕಟ್ಟಿ, ಶ್ರೀ ನಾಗರಾಜ್ ಜಮದ್ರಖಾನಿ, ಶ್ರೀ ನರಸಿಂಗರಾವ ಹೇಮನೂರ, ಡಾ ಶ್ರೀಶೈಲ ನಾಗರಾಳ ಕಲಬುರಗಿ ಮುಂತಾದವರು ಪಾಲ್ಗೊಂಡಿದ್ದರು.

emedialine

Recent Posts

ಮುಸ್ಲಿಮರಿಗೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸ್ಥಾನ ನೀಡಿ: ಅಬ್ದುಲ್ ರಹೀಮಾನ್ ಪಟೇಲ್

ಕಲಬುರಗಿ: ‘ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೆ ನೀಡಬೇಕು. ಮುಂಬರುವ ದಿನಗಳಲ್ಲಿ ಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ…

21 mins ago

ಡಾ. ಫ.ಗು. ಹಳಕಟ್ಟಿ ಯವರ ಜಯಂತಿ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ

ಕಲಬುರಗಿ: ವಚನ ಪಿತಾಮಹ ಎಂದು ಕರೆಸಿಕೊಳ್ಳುವ ಡಾ. ಫ.ಗು. ಹಳಕಟ್ಟಿ ಯವರು ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡುವ…

2 hours ago

ಮೊಬೈಲ್ ರೀಚಾರ್ಜ್‍ಗಳ ಬೆಲೆ ಹೆಚ್ಚಳ ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಪ್ರತಿಭಟನೆ

ಶಹಾಬಾದ: ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್ ರೀಚಾರ್ಜ್‍ಗಳ ಬೆಲೆಗಳನ್ನು ಅನಿಯಂತ್ರಿತವಾಗಿ ಹೆಚ್ಚಳ ಮಾಡಿರುವುದನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಎಐಡಿವಾಯ್‍ಓ ವತಿಯಿಂದ…

2 hours ago

ಸಾರ್ವಜನಿಕರು ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಿ

ಶಹಾಬಾದ :ಎಲ್ಲರಿಗೂ ಸರಕಾರಿ ನೌಕರಿ ಬೇಕು.ಆದರೆ ಸರಕಾರಿ ಶಾಲೆಯಲ್ಲಿ ನಿಮ್ಮ ಮಕ್ಕಳು ಓದುವುದು ಬೇಡ ಎಂದರೆ ಹೇಗೆ ? ಮೊದಲು…

2 hours ago

ಪಠ್ಯಕ್ರಮ ರಚನೆ ಗುಣಾತ್ಮಕ ಅಂಶಗಳಿಂದ ಕೂಡಿರಲಿ

ವಿಜಯಪುರ: ಇಂದಿನ ಪ್ರಸ್ತುತ ಶಿಕ್ಷಣ ಪದ್ದತಿ ಕೌಶಲ್ಯಾಧಾರಿತ ಹಾಗೂ ಔದ್ಯೋಗಿಕ ಮತ್ತು ಉದ್ಯೋಗ ಪೂರಕನಂತೆ ಇರಬೇಕು ಎಂದು ಕರ್ನಾಟಕ ರಾಜ್ಯ…

3 hours ago

ಪತ್ರಕರ್ತ ಸಿದ್ರಾಮ್ ನಾಡಗೇರಿ ಪುತ್ರಿ ಸ್ಪಂದನಾ ಎಸ್. ನಡಗೇರಿಗೆ ಪತ್ರಕರ್ತರ ಸಂಘದಿಂದ ಸನ್ಮಾನ

ಹಾವೇರಿ: SSLC,PUC ಯಲ್ಲಿ 90% ಕಿಂತ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು,…

3 hours ago