ಕಲಬುರಗಿ: ಎಚ್ಕೆಇ ಸಂಸ್ಥೆ ಮಾಲಕರೆಡ್ಡಿ ಹೋಮಿಯೋಪಥಿ ಆಸ್ಪತ್ರೆ ಸಹಯೋಗದಲ್ಲಿ ಕೋವಿಡ್-19 ರೋಗದ ವಿರುದ್ದ ರೋಗ ನಿರೋಧಕ ಶಕ್ತಿ ವೃದ್ಧಿಸುವ ಹೊಮಿಯೋಪಥಿ ಮಾತ್ರೆ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸುತ್ತಿರುವುದು ಸಂತೋಷದ ವಿಷಯವಾಗಿದೆ.
ಇಡಿ ವಿಶ್ವವೇ ಕರೋನಾ ವೈರಸ್ನ ಮರಣ ಮೃದಂಗಕ್ಕೆ ತತ್ತರಿಸಿ ಹೋಗುತ್ತಿರುವ ಇಂತಹ ಸಂದರ್ಭದಲ್ಲಿ ಮಾಲಕರೆಡ್ಡಿ ಹೋಮಿಯೋಪಥಿ ಕಾಲೇಜಿನ ವತಿಯಿಂದ ಹೋಮಿಯೋಪಥಿಕ ಮಾತ್ರೆಗಳನ್ನು ವಿತರಿಸಿ ಕರೋನಾ ವೈರಸ್ನ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆಗಳನ್ನು ವಿತರಿಸಲು ಹರಲಿರುಳು ಶ್ರಮಿಸುತ್ತಿರುವ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಅವರ ಕಾರ್ಯಕ್ಕೆ ಜೆಡಿಎಸ್ ಜಿಲ್ಲಾ ಕಾರ್ಯಧ್ಯಕ್ಷ ಸೈಯದ್ ಜಾಫರ್ ಹುಸೇನ್ ಅವರು ಹರ್ಷ ವ್ಯಕ್ತಪಡಿಸಿದರು.
ವಾರ್ಡ್ನಂ.02 ಮತ್ತು 13.ರಲ್ಲಿ ಬರುವ ಜಮ್ಜಮ್ ಕಾಲೋನಿ, ಅಹ್ಮದ್ ರಜಾ ಕಾಲೋನಿಯಲ್ಲಿ ಜೆಡಿಎಸ್ ಘಟಕ ಹಾಗೂ ಎಚ್ಕೆಇ ಸಂಸ್ಥೆ ಮಾಲಕರೆಡ್ಡಿ ಹೋಮಿಯೋಪಥಿ ಆಸ್ಪತ್ರೆ ಸಹಯೋಗದಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಧ್ಯಕ್ಷ ಸೈಯದ್ ಜಾಫರ್ ಹುಸೇನ್ ನೇತೃತ್ವದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಹೊಮಿಯೋಪಥಿ ಮಾತ್ರೆ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.
ಸೈಯದ್ ಜಾಫರ್ ಹುಸೇನ್ ಮಾತನಾಡುತ್ತಾ ಅವರು, ಕರೋನಾ ರೋಗಕ್ಕೆ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವುದೆ ಔಷಧಿಯಾಗಿದ್ದು, ಎಲ್ಲರೂ ರೋಗ ನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆ ಸೇವಿಸಿ ಕರೋನಾ ಬರದಂತೆ ತಡೆಯಬೇಕು ಎಂದು ಮನವಿ ಮಾಡಿದರು.
ಈ ಮಾತ್ರೆಯಲ್ಲಿ ಸೇವಿಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲಾ. ಈ ಮಾತ್ರೆಗಳನ್ನು ಆರು ತಿಂಗಳ ಮಗುವಿಗೆ, ಗರ್ಭಿಣಿ ಮಹಿಳೆ, ರಕ್ತದೊತ್ತಡ, ಸಕ್ಕರೆ ಕಾಯಿಲೆಗಳು ಇದ್ದಂತಹ ವ್ಯಕ್ತಿಗಳು ಕೂಡ ಸೇವಿಸಬಹುದು ಎಂದು ವೈದ್ಯರು ದೃಡಪಡಿಸಿದ ನಂತರವೇ ರೋಗ ನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಸುಮಾರು ನಾಲ್ಕ್ರಿಂದ ಐದು ಲಕ್ಷ ರೋಗ ನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆಗಳನ್ನು ವಿತರಿಸಲಾಗಿದೆ ಎಂದು ಜಾಫರ್ ಹುಸೇನ್ ಹೇಳಿದರು.
ಮಾಲಕರೆಡ್ಡಿ ಹೋಮಿಯೋಪಥಿ ಕಾಲೇಜಿನ ಪ್ರಾಚಾರ್ಯ ಡಾ.ಪಿ.ಸಂಪತಕುಮಾರ, ಮೆಡಿಕಲ್ ಸುಪ್ರಿಡೆಂಟ್ ಡಾ.ರಾಜೇಂದ್ರ ಪಾಟೀಲ್, ಸಮಿ ಸಾಬ್, ಮೊಹ್ಮದ್ ಅಲೀಮ್ ಇನಾಂದಾರ್, ಶಿರಾಜ್ ಭಾಯಿ, ಅಬ್ದುಲ್ ಮುಖಿಮ್ಮ್, ಎಮ್.ಎ. ಗಫುರ ಜೀಲಾನಿ, ಮಹ್ಮದ್ ಮುಜಿದ್ ಅಲಿಖಾನ್, ಅಬ್ದುಲ್ ಗಫಾರ್, ಶದಾಬ್ ಮಲಿಕ್, ಡಾ.ಸೈಯದ್ ರೆಹಮತ್ ಉಲ್ಲಾ, ಮಹ್ಮದ್ ಅಲ್ ಹುಸೇನಿ, ಅಬ್ದುಲ್ ಅನಾನ ಪಟೇಲ್, ಜಿಯಾಜ್ ಸಾಬ್, ಶಹಬಾಜ್, ಕರಿಂಬಾಯಿ ಇದ್ದರು.
ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…
ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…
ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್ಐಆರ್…
ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…
ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…
ಕಲಬುರಗಿ: ಇನ್ನರ್ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…