“ಮೈ ಮೊನಾಲಿಸಾ ಇನ್ ಡಕ್ಕನಿ ಟಚ್”: ಪೇಂಟಿಂಗ್ ಗೆ ಕಲಬುರಗಿ ರಹಮಾನ್ ಪಟೇಲ್ ಗೆ ಬೆಳ್ಳಿ ಪ್ರಶಸ್ತಿ

  • ಸಾಜಿದ್ ಅಲಿ

ಕಲಬುರಗಿ: ವಿಶ್ವವನ್ನೆ ಬೆರಗು ಗೊಳಿಸಿದ ಮೊನಾಲಿಸಾ ಪೇಂಟಿಗ್ ನ್ನು ಕಲಬುರಗಿ ಕಲಾವಿದರೊಬ್ಬರು ತನ್ನ ಕಲಾಕೃತಿಯ ಮೂಲಕ ಹೊಸ ಬಣ್ಣವನ್ನು ಬಳೆಯುವ ಮೂಲಕ ತನ್ನ ಪ್ರತಿಭೆಯಿಂದ ಭಾರತದ “ಮೈ ಮೊನಾಲಿಸಾ ಇನ್ ಡಕ್ಕನಿ ಟಚ್” ಬೆಳ್ಳಿ ಪ್ರಶಸ್ತಿ ಪಡೆದಿದ್ದಾರೆ.

ಹರಿಯಾಣದ ಗುರಗಾಂವ್ ನ ಉಚಾನ್ ಫೌಂಡೇಶನ್ ಆಯೋಜಿಸಿದ ಆನ್ ಲೈನ್ ಕಲಾಪ್ರದರ್ಶನದಲ್ಲಿ ಕಲಬುರಗಿಯ ಚಿತ್ರಕಲಾವಿದ ರಹಮಾನ್ ಪಟೇಲ್ ಸೇರಿ ಮೂವರು ಕಲಾವಿದರು ಭಾಗವಹಿಸಿದರು, ವಿಶ್ವದಾದ್ಯಂತ ತನ್ನದೆ ಛಾಪು ಮೂಡಿಸಿದ ಮೊನಾಲಿಸಾ ಅವರ 30 ಅತ್ಯುತ್ತಮ ಕಲಾಕೃತಿಗಳು ಅಗಸ್ಟ್ 02 ರಿಂದ 10 ರವರೆಗೆ www.uchaanarts.com ವೆಬ್ ಸೈಟ್ ನಲ್ಲಿ ಆನ್ ಲೈನ್ ಕಲಾ ಪ್ರದರ್ಶನಕ್ಕಿಡಲಾಗಿದೆ, ದೇಶ, ವಿದೇಶದ ವಿವಿಧ ಕಾಲಾವಿದರು ಇದರಲ್ಲಿ ಭಾಗವಹಿಸಿದ್ದಾರೆ.

ಒಂದು ವೇಳೆ ಮೊನಾಲಿಸ ಭಾರತದವರಾಗಿದ್ದರೆ ಹೇಗಿರತ್ತಿತು ಮತ್ತು ಅವರ ಪೇಂಟಿಂಗ್ ಹೇಗೆ ಕಾಣುತ್ತಿತ್ತು ಕುತುಹಲ ಇರಬಹುದೆಂಬ ಭಾವದೊಂದಿಗೆ ಈ ಕಲಾ ಕೃತಿ ಮಾಡಲಾಗಿದೆ ಎಂದು ರಹೆಮಾನ್ ಪಟೇಲ್ ಮಾತನಾಡಿ ತಿಳಿಸಿದ್ದಾರೆ.

ಮೊನಾಲಿಸಾ ಟೈಮ್ ಲ್ಲಿ ಭಾರತದಲ್ಲಿ ಇದ್ದರೆ ಅವರ ಪೇಂಟಿಂಗ್ ಬ್ಯಾಗ್ ರೌಂಡ್ ನಲ್ಲಿ ಗೋಡೆ, ಪರ್ವತ, ಕೆಲವು ಗ್ರಾಮಗಳು, ಮತ್ತು ರಾಣಿ ವಿಹಾರದಲ್ಲಿ ಪ್ರಣಿಗಳ ದರ್ಶನ ಸೇರಿದಂತೆ ಇತರೆ ಸ್ವಂತಿಕೆಯನ್ನು ಇಟ್ಟುಕೊಂಡು ಅದನ್ನು ಡೆಕ್ಕನಿ ಚಿಕಣಿ ಚಿತ್ರಕಲೆಯೊಂದಿಗೆ ವಿಲೀನಗೊಳಿಸಲಾಗಿದೆ.  ಭಾರತದಲ್ಲಿ ಈ ಕಲಾಕೃತಿಗಳಲ್ಲಿ ರಾಜ,ಮಹಾರಜರ ವಂಶಸ್ಥರ ಹಾಗೂ ಕ್ವೀನ್  ಕಲಾಕೃತಿಗಳ ಪ್ರಕಾರ ಮೊನಾಲಿಸಾಳ ಕೈಯಲ್ಲಿ ಒಂದು ಫಾಲ್ಕನ್ ಇರುತ್ತಿತ್ತು ಎಂಬುದನ್ನು ತೊರಿಸಲಾಗಿದ್ದು, ಇದು ಭಾರತ ದೇಶದ ಮೊನಾಲಿಸ ಕಲಾಕೃತಿಯಾಗಿ ಪ್ರತಿನಿಧಿಸಲಿದೆ. – ರಹಮಾನ್ ಪಟೇಲ್, ಚಿತ್ರ ಕಲಾವಿದ ಕಲಬುರಗಿ.

ಖ್ಯಾತ ಕಲಾವಿದ ಲಿಯೊನರ್ಡೊ ಡಾ. ವಿನ್ಸಿಯ ಮೊನಾಲಿಸಾವನ್ನು ತಮ್ಮದೆ ಆದ ಶೈಲಿಯಲ್ಲಿ ರಚಿಸಲು ಕಲಾವಿದರಿಗೆ ಸ್ವಾತಂತ್ರ ನೀಡಿರುವುದು ಈ ಕೃತಿಯಲ್ಲಿ ಕಂಡುಬಂದಿದೆ.  ರಹೆಮಾನ್ ಪಟೇಲ್ ಅವರು ವಿಭಿನ್ನವಾದಿ ಅಮೂಘ 52 ಮೊನಾಲಿಸ ವಿವಿಧ ರೀತಿಯ ಕಲಾಕೃತಿಗಳನ್ನು ರಚಿಸಿದ್ದಾರೆ.

ರಹೆಮಾನ್ ಪಟೇಲ್ ಅವರ ಇನ್ನೂ ಹೆಚ್ಚಿನ ಕಲಾಕೃತಿಗಳಿಗೆ ಇಲ್ಲಿ ಕ್ಲೀಕ್ ಮಾಡಿMy Monalisa Catalgue

emedialine

Recent Posts

ಎಲೇಕ್ಷನ್’ನಲ್ಲಿ ಗಿಮಿಕ್ ಮಾಡಿ ಮತಪಡೆದುಕೊಳ್ಳುವುದು ಮಾತ್ರ ಗೊತ್ತು; ಮಣಿಕಂಠ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…

2 mins ago

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

4 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

9 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

20 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

22 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420