ಭಾಲ್ಕಿ: ಬಸವ ತತ್ವವನ್ನು ಜನ ಮಾನಸದಲ್ಲಿ ಬಿತ್ತಲು ಸದಾ ಕಾಲ ಸನ್ನದ್ಧವಾಗಿರುವ ಶರಣ ಸಾಹಿತಿ, ಪತ್ರಕರ್ತ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲಿನ ಕಾನೂನು ದಬ್ಬಾಳಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಪೂಜ್ಯ ಶ್ರೀ ಡಾ. ಚನ್ನಬಸವ ಪೂಜ್ಯ ಪಟ್ಟದೇವರು ಯುವಕರ ಸಂಘದಿಂದ ತಹಶೀಲ್ದಾರ ಮುಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ವಿಶ್ವಾರಾಧ್ಯ ಸತ್ಯಂಪೇಟೆ ಇಡೀ ನಾಡೆ ಬಲ್ಲಂತೆ ಒಬ್ಬ ದಿಟ್ಟ ವೈಚಾರಿಕ ಪತ್ರಕರ್ತ ಶರಣ ಸಾಹಿತಿ. ಇದ್ದದ್ದನ್ನು ಇದ್ದಂತೆ ಹೇಳಿ ಯುವಕರಲ್ಲಿ ವಿಜ್ಞಾನದ ದೀವಿಗೆ ಹಿಡಿದು ನಡೆದಿರುವ ಯುವ ಹೋರಾಟಗಾರ. ದಾವಣಗೆರೆ ಜಿಲ್ಲೆಯ ರಾಂಪುರ ಮಠದ ಸ್ವಾಮಿ ಶ್ರೀ ವಿಶ್ವೇಶ್ವರ ಸ್ವಾಮಿ ಎಂಬುವವರ ಕುರಿತು ಆಡಿದ ಮಾತು, ಬರಹ ಚಿಂತನಾರ್ಹ. ವೈಜ್ಞಾನಿಕ ವೈಚಾರಿಕ ನಿಲುವಿನಿಂದ ನೋಡದೆ ದ್ವೇಷಪೂರಿತ ಭಾವನೆಯಿಂದ ನೋಡುವುದು ಸರಿಯಲ್ಲ.
ಒಬ್ಬಮಠಾಧೀಶ ಲಾಂಛನ ಧರಿಸಿ ಅದಕ್ಕೆ ತಕ್ಕುದಾದ ನಡೆಗಳು ಇರಬೇಕು. ಇದನ್ನೆಲ್ಲ ಮರೆತು ಬರೀ ಗಿಮಿಕ್ ಗಳಲ್ಲಿಯೇ ಭಕ್ತರನ್ನು ಕತ್ತಲಲ್ಲಿ ಇಟ್ಟಿರುವುದು ಖಂಡನಾರ್ಹ. ಇಷ್ಟಲಿಂಗ ಪೂಜೆಯ ವಿಧಾನ ಮರೆತು ನಾಟಕೀಯ ಅಂಶಗಳಿಂದ ಪೂಜೆ ನಿಜಕ್ಕೂ ಬಸವ ಭಕ್ತರಿಗೆ ನೋವುಂಟು ಮಾಡುವಂಥದ್ದು.
ಇಷ್ಟಕ್ಕೂ ಸತ್ಯಂಪೇಟೆ ವಿಷಾದ ವ್ಯಕ್ತ ಪಡಿಸಿರುವಾಗಲೂ ಕಾಲು ಕೆದರಿ ಅವರ ಮೇಲೆ ಕೇಸ್ ದಾಖಲಿಸಿ, ಮಾನಸಿಕವಾಗಿ ಅವರನ್ನು ಕುಗ್ಗಿಸಲು ಹೊರಟಿರುವುದುನ್ನು ನಮ್ಮ ಸಂಘಟನೆ ಬಲವಾಗಿ ಖಂಡಿಸುತ್ತವೆ.
ವಿಶ್ವಾರಾಧ್ಯ ರ ಮೇಲಿನ ಪೊಲೀಸ್ ದೌರ್ಜನ್ಯ ಪ್ರಜಾಪ್ರಭುತ್ವದ ಅಣಕ. ಇದನ್ನು ಇಲ್ಲಿಗೆ ನಿಲ್ಲಿಸದೆ ಸರಕಾರ ಸತ್ಯಂಪೇಟೆಯವರಿಗೆ ಕಿರುಕುಳ ನೀಡಿದರೆ ನಾಡಿನ ತುಂಬಾ ಇರುವ ಬಸವ ಅಭಿಮಾನಿಗಳು, ಪ್ರಗತಿ ಪರರು ಬೀದಿಗೆ ಇಳಿದು ಹೋರಾಟ ಮಾಡಬೇಕಾಗಿತ್ತದೆ ಎಂದು ಸಂಘಟನೆಯ ಪ್ರಮುಖರು ಮನವಿಯಲ್ಲಿ ವ್ಯಕ್ತ ಪಡಿಸಿದರು.
ಈ ವೇಳೆಯಲ್ಲಿ ಶಶಿಧರ ಕೋಸಂಬೆ, ಸಂಗಮೇಶ ಮದಕಟ್ಟಿ, ರಾಜಕುಮಾರ್ ಬಿರಾದಾರ್, ಸುರೇಶ್ ಕನಶೆಟ್ಟಿ ಇತ್ತರರು ಇದ್ದರು.
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…
ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…