ಸತ್ಯಂಪೇಟೆ ಅವರ ಮೇಲಿನ ಪ್ರಕರಣ ವಾಪಸ್ ಪಡೆಯಲು ಯುವಕರ ಸಂಘ ಒತ್ತಾಯ

0
94

ಭಾಲ್ಕಿ: ಬಸವ ತತ್ವವನ್ನು ಜನ ಮಾನಸದಲ್ಲಿ ಬಿತ್ತಲು ಸದಾ ಕಾಲ ಸನ್ನದ್ಧವಾಗಿರುವ ಶರಣ ಸಾಹಿತಿ, ಪತ್ರಕರ್ತ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲಿನ ಕಾನೂನು ದಬ್ಬಾಳಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಪೂಜ್ಯ ಶ್ರೀ ಡಾ. ಚನ್ನಬಸವ ಪೂಜ್ಯ ಪಟ್ಟದೇವರು ಯುವಕರ ಸಂಘದಿಂದ ತಹಶೀಲ್ದಾರ ಮುಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ವಿಶ್ವಾರಾಧ್ಯ ಸತ್ಯಂಪೇಟೆ ಇಡೀ ನಾಡೆ ಬಲ್ಲಂತೆ ಒಬ್ಬ ದಿಟ್ಟ ವೈಚಾರಿಕ ಪತ್ರಕರ್ತ ಶರಣ ಸಾಹಿತಿ. ಇದ್ದದ್ದನ್ನು ಇದ್ದಂತೆ ಹೇಳಿ ಯುವಕರಲ್ಲಿ ವಿಜ್ಞಾನದ ದೀವಿಗೆ ಹಿಡಿದು ನಡೆದಿರುವ ಯುವ ಹೋರಾಟಗಾರ. ದಾವಣಗೆರೆ ಜಿಲ್ಲೆಯ ರಾಂಪುರ ಮಠದ ಸ್ವಾಮಿ ಶ್ರೀ ವಿಶ್ವೇಶ್ವರ ಸ್ವಾಮಿ ಎಂಬುವವರ ಕುರಿತು ಆಡಿದ ಮಾತು, ಬರಹ ಚಿಂತನಾರ್ಹ. ವೈಜ್ಞಾನಿಕ ವೈಚಾರಿಕ ನಿಲುವಿನಿಂದ ನೋಡದೆ ದ್ವೇಷಪೂರಿತ ಭಾವನೆಯಿಂದ ನೋಡುವುದು ಸರಿಯಲ್ಲ.

Contact Your\'s Advertisement; 9902492681

ಒಬ್ಬ‌ಮಠಾಧೀಶ ಲಾಂಛನ ಧರಿಸಿ ಅದಕ್ಕೆ ತಕ್ಕುದಾದ ನಡೆಗಳು ಇರಬೇಕು. ಇದನ್ನೆಲ್ಲ ಮರೆತು ಬರೀ ಗಿಮಿಕ್ ಗಳಲ್ಲಿಯೇ ಭಕ್ತರನ್ನು ಕತ್ತಲಲ್ಲಿ ಇಟ್ಟಿರುವುದು ಖಂಡನಾರ್ಹ.‌ ಇಷ್ಟಲಿಂಗ ಪೂಜೆಯ ವಿಧಾನ ಮರೆತು ನಾಟಕೀಯ ಅಂಶಗಳಿಂದ ಪೂಜೆ ನಿಜಕ್ಕೂ ಬಸವ ಭಕ್ತರಿಗೆ ನೋವುಂಟು ಮಾಡುವಂಥದ್ದು.

ಇಷ್ಟಕ್ಕೂ ಸತ್ಯಂಪೇಟೆ ವಿಷಾದ ವ್ಯಕ್ತ ಪಡಿಸಿರುವಾಗಲೂ ಕಾಲು ಕೆದರಿ ಅವರ ಮೇಲೆ ಕೇಸ್ ದಾಖಲಿಸಿ, ಮಾನಸಿಕವಾಗಿ ಅವರನ್ನು ಕುಗ್ಗಿಸಲು ಹೊರಟಿರುವುದುನ್ನು ನಮ್ಮ ಸಂಘಟನೆ ಬಲವಾಗಿ ಖಂಡಿಸುತ್ತವೆ.

ವಿಶ್ವಾರಾಧ್ಯ ರ ಮೇಲಿನ ಪೊಲೀಸ್ ದೌರ್ಜನ್ಯ ಪ್ರಜಾಪ್ರಭುತ್ವದ ಅಣಕ. ಇದನ್ನು ಇಲ್ಲಿಗೆ ನಿಲ್ಲಿಸದೆ ಸರಕಾರ ಸತ್ಯಂಪೇಟೆಯವರಿಗೆ ಕಿರುಕುಳ ನೀಡಿದರೆ ನಾಡಿನ ತುಂಬಾ ಇರುವ ಬಸವ ಅಭಿಮಾನಿಗಳು, ಪ್ರಗತಿ ಪರರು ಬೀದಿಗೆ ಇಳಿದು ಹೋರಾಟ ಮಾಡಬೇಕಾಗಿತ್ತದೆ ಎಂದು ಸಂಘಟನೆಯ ಪ್ರಮುಖರು ಮನವಿಯಲ್ಲಿ ವ್ಯಕ್ತ ಪಡಿಸಿದರು.

ಈ ವೇಳೆಯಲ್ಲಿ ಶಶಿಧರ ಕೋಸಂಬೆ, ಸಂಗಮೇಶ ಮದಕಟ್ಟಿ, ರಾಜಕುಮಾರ್ ಬಿರಾದಾರ್, ಸುರೇಶ್ ಕನಶೆಟ್ಟಿ ಇತ್ತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here