ಸುರಪುರ: ಶೃಂಗೇರಿಯಲ್ಲಿ ಎರಡು ದಿನದ ಹಿಂದೆ ನಡೆದ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಪುತ್ಥಳಿಗೆ ಧಕ್ಕೆ ಮಾಡಿದವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಸುರಪುರ ವಿಪ್ರ ಸಮಾಜ ನಗರ ಘಟಕದಿಂದ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕೇದಾರನಾಥ ಶಾಸ್ತ್ರಿ ಹಾಗು ಇತರರು ಮಾತನಾಡಿ,ಶೃಂಗೇರಿಯಲ್ಲಿರುವ ಸ್ವಾಗತ ಗೋಪುರದ ಮೇಲಿರುವ ಹಿಂದು ಸಮಾಜ ಸಂಸ್ಥಾಪಕ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಪುತ್ಥಳಿಯ ಮೇಲೆ ಅನ್ಯ ಧರ್ಮಿಯರ ಧ್ವಜವನ್ನು ಕಟ್ಟಿ ಪುತ್ಥಳಿಗೆ ಧಕ್ಕೆ ಮಾಡಲಾಗಿದೆ,ಇದನ್ನು ಇಡೀ ವಿಪ್ರ ಸಮಾಜ ಹಾಗು ಹಿಂದು ಸಮಾಜ ಉಗ್ರವಾಗಿ ಖಂಡಿಸುತ್ತದೆ.ಒಬ್ಬ ಹಿಂದು ಸಮಾಜದ ಜಗದ್ಗುರುವಿನ ಪುತ್ಥಳಿಗೆ ಹೀಗೆ ಅಪಮಾನಿಸಿರುವುದು ಶಂಕರಾಚಾರ್ಯರ ಅನುಯಾಯಿಗಳು ಮತ್ತು ಹಿಂದು ಸಮಾಜ ಬಾಂಧವರಿಗೆ ಬೇಸರವನ್ನುಂಟು ಮಾಡಿದೆ.ಕೂಡಲೆ ಸರಕಾರ ಈ ಕೃತ್ಯಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು.ಇಲ್ಲವಾದಲ್ಲಿ ವಿಪ್ರ ಸಮಾಜ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗುವುದು ಎಂದು ಎಚ್ಚರಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಸಿರಸ್ತೇದಾರ ನಾಸಿರ್ ಅಹ್ಮದ್ ಅವರ ಮೂಲಕ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಶ್ರೀ ಮದಾದ್ಯ ಜಗದ್ಗುರು ಶಂಕರಭಗವತ್ಪಾದಾಚಾರ್ಯ ಸೇವಾ ಸಮಿತಿಯಿಂದಲೂ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಭೀಮಸೇನಾಚಾರ್ಯ ಜೋಷಿ ಧೀರೆಂದ್ರ ಕುಲಕರ್ಣಿ ಗಣೇಶ ಜಹಾಗೀರದಾರ್ ವೆಂಕಟೇಶ ಎಂ.ಜೋಷಿ ಮಲ್ಹಾರಾವ್ ಪಟವಾರಿ ಪ್ರಕಾಶ ಲಾಯಗುಣಸಿ ಶ್ರೀಕರ ಭಟ್ ರಾಘವೇಂದರ ಕುಲಕರ್ಣಿ ಗೆದ್ದಲಮರಿ ಚಂದ್ರಕಾಂತ ನಾಡಗೌಡ ವೆಂಕಟೇಶ ರಾಯನಪಾಳ್ಯ ಗುರಾಚಾರ್ಯ ಪಾಲ್ಮೂರು ನಾಗೇಶ ಕುಲಕರ್ಣಿ ಶ್ರೀಕರ ಜೋಷಿ ನಾಗರಾಜ ಹಾಲಗೇರಿ ಉಮಾಶಂಕರ ದಿಕ್ಷೀತ್ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…