ಶೀಘ್ರವೇ ಆರಂಭವಾಗಲಿರುವ ಐಪಿಎಲ್ 2020ಗೆ ಎಲ್ಲರೂ ಸಿದ್ಧತೆ ನಡೆಸುತ್ತಿದ್ದಾರೆ. ಇದೇ ಮಾದರಿಯಲ್ಲಿ ಡಿಸ್ನಿ + ಹಾಟ್ಸ್ಟಾರ್ ಈ ವರ್ಷ ಪ್ರೀಮಿಯಂ ಶ್ರೇಣಿ ಚಂದಾದಾರರಿಗೆ ಮಾತ್ರವೇ ಐಪಿಎಲ್ 2020 ಸ್ಟ್ರೀಮಿಂಗ್ ಅನ್ನು ನೀಡಲು ಪ್ಲಾನ್ ಮಾಡುತ್ತಿದೆ ಎನ್ನಲಾಗಿದೆ.
ಆದರೆ ಜಿಯೋ ಪ್ರಿಪೇಯ್ಡ್ ಮತ್ತು ಜಿಯೋ ಫೈಬರ್ ಬ್ರಾಡ್ಬ್ಯಾಂಡ್ ಬಳಕೆದಾರರಿಗೆ ಉಚಿತ ಐಪಿಎಲ್ 2020 ಲೈವ್ ಸ್ಟ್ರೀಮಿಂಗ್ ನೀಡಲು ಜಿಯೋ ಮತ್ತು ಡಿಸ್ನಿ + ಹಾಟ್ಸ್ಟಾರ್ ಒಂದಾಗಿವೆ.
ಜಿಯೋ ರೂ. 401 ರೀಚಾರ್ಜ್ ಮಾಡಿದ ಪ್ರೀಪೇಯ್ಡ್ ಬಳಕೆದಾರರಿಗೆ ಮತ್ತು ರೂ. 2,599 ರಿಚಾರ್ಜ್ ಮಾಡುವ ಪ್ರಿಪೇಯ್ಡ್ ಚಂದಾದಾರರಿಗೆ ಈಗಾಗಲೇ ಡಿಸ್ನಿ + ಹಾಟ್ಸ್ಟಾರ್ ಚಂದಾದಾರಿಕೆಯನ್ನು ನೀಡುತ್ತದೆ.
ಇದೇ ಮಾದರಿಯಲ್ಲಿ ಜಿಯೋ ಫೈಬರ್ ರೂ. 849 ಮತ್ತು ಅದಕ್ಕಿಂತ ಹೆಚ್ಚಿನ ಚಂದದಾರಿಕೆಯನ್ನು ಪಡೆದವರಿಗೆ ಈಗಾಗಲೇ ಪೂರಕ ಡಿಸ್ನಿ + ಹಾಟ್ಸ್ಟಾರ್ ವಿಐಪಿ ವಾರ್ಷಿಕ ಚಂದಾದಾರಿಕೆಯನ್ನು ನೀಡಿದೆ. ಆದರೆ ಐಪಿಎಲ್ 2020 ಲೈವ್ ಸ್ಟ್ರೀಮಿಂಗ್ ಪ್ರವೇಶದ ವಿವರಗಳು ಇಲ್ಲಿಯವರೆಗೆ ಖಚಿತವಾಗಿಲ್ಲ.
ವರದಿಯೊಂದರ ಪ್ರಕಾರ ರೂ. 401 ರೀಚಾರ್ಜ್ ಮಾಡಿದ ಪ್ರೀಪೇಯ್ಡ್ ಬಳಕೆದಾರರಿಗೆ ಮತ್ತು ರೂ. 2,599 ರಿಚಾರ್ಜ್ ಮಾಡುವ ಪ್ರಿಪೇಯ್ಡ್ ಚಂದಾದಾರರಿಗೆ ಜಿಯೋ ಐಪಿಎಲ್ 2020 ಲೈವ್ ಸ್ಟ್ರೀಮಿಂಗ್ ಪ್ರಯೋಜನಗಳನ್ನು ನೀಡಲಿದೆ ಮತ್ತು ಜಿಯೋ ಫೈಬರ್ ರೂ. 849 ಮತ್ತು ಅದಕ್ಕಿಂತ ಹೆಚ್ಚಿನ ಚಂದದಾರಿಕೆಯನ್ನು ಪಡೆದವರಿಗೂ ಈಗ ಐಪಿಎಲ್ 2020 ಲೈವ್ ಸ್ಟ್ರೀಮಿಂಗ್ಗೆ ಉಚಿತ ಪ್ರವೇಶವನ್ನು ದೊರೆಯುವಂತೆ ಮಾಡಲಿದೆ.
ಜಿಯೋ ಬಳಕೆದಾರರಾಗಿ ಡಿಸ್ನಿ + ಹಾಟ್ಸ್ಟಾರ್ಗೆ ಚಂದಾದಾರರಾಗಿಲ್ಲವಾದರೆ ಅಥವಾ ಉಚಿತ ಪ್ರವೇಶವಿಲ್ಲದಿದ್ದಲ್ಲಿ, ಐಪಿಎಲ್ 2020 ಸ್ಟ್ರೀಮಿಂಗ್ ಕೇವಲ 5 ನಿಮಿಷಗಳಿಗೆ ಸೀಮಿತವಾಗಿರುತ್ತದೆ.
ಡಿಸ್ನಿ + ಹಾಟ್ಸ್ಟಾರ್ ಈ ವರ್ಷ ಪ್ರೀಮಿಯಂ ಶ್ರೇಣಿ ಚಂದಾದಾರರಿಗೆ ಮಾತ್ರವೇ ಐಪಿಎಲ್ 2020 ಸ್ಟ್ರೀಮಿಂಗ್ ಅನ್ನು ನೀಡಲು ಯೋಜಿಸುತ್ತಿರುವುದರಿಂದ ಜಿಯೋ ಒಪ್ಪಂದವು ಮುಖ್ಯವಾಗಿದೆ.
ಆದ್ದರಿಂದ ಕೇವಲ ಡಿಸ್ನಿ + ಹಾಟ್ಸ್ಟಾರ್ ವಿಐಪಿ ಯೋಜನೆಗೆ ಚಂದಾದಾರರಾಗಿದ್ದರೂ, ಜಿಯೋ ಬಳಕೆದಾರರು ರೂ. 401 ಮತ್ತು ರೂ. 2,599ಕ್ಕೆ ರಿಚಾರ್ಜ್ ಮಾಡಿಸಿಕೊಂಡಿದ್ದಲ್ಲಿ ಐಪಿಎಲ್ 2020 ಅನ್ನು ನೇರಪ್ರಸಾರ ನೋಡಲಿದ್ದಾರೆ ಎನ್ನಲಾಗಿದೆ.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…