ಕಲಬುರಗಿ: ಜಿಲ್ಲೆಯ ಕಲಬುರಗಿ ತಾಲೂಕಿನ ಸೈಯದ ಚಿಂಚೋಳಿ ಗ್ರಾಮದ ಪಕ್ಕದಲ್ಲಿರುವ ಕೆರಿಭೋಸಗಾದ ಕೆರೆಯು ಮತ್ತು ಸೈಯದ್ ಚಿಂಚೋಳಿ ಗ್ರಾಮದ ಕೆರೆಯು ಹೊಂದಿಕೊಂಡು ಇರುತ್ತದೆ. ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಈ ಎರಡು ಕೆರೆಗಳು ಸಂಪೂರ್ಣವಾಗಿ ತುಂಬಿ ಹರಿಯುತ್ತಿವೆ. ಇದರಿಂದ ಎರಡವು ಕೆರೆಗಳು ಒಡೆದು ಹೋಗುವ ಸಂಭವವಿದೆ ಆದ್ದರಿಂದ ತ್ವರಿತವಾಗಿ ಎರಡು ಕೆರೆಗಳನ್ನು ಒಡೆದು ಹೋಗದಂತೆ ದುರಸ್ತಿ ಕಾಮಗಾರಿಯನ್ನು ಮಾಡಿಸಬೇಕೆಂದು ಸೈಯದ್ ಚಿಂಚೋಳಿ ಗ್ರಾಮದ ಮುಖಂಡ ಅನೀಲಕುಮಾರ ಎನ್.ಡಾಂಗೆ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿಯನ್ನು ಸಲ್ಲಿಸಿ ಮಾತನಾಡುತ್ತಾ ಅವರು, ಸೈಯದ ಚಿಂಚೋಳಿ ಗ್ರಾಮವು ತಗ್ಗಿನಲ್ಲಿರುತ್ತದೆ. ಒಂದು ವೇಳೆ ಸದರಿ ಕೆರೆಗಳು ಒಡದು ಹೋದರೆ ಸೈಯದ ಚಿಂಚೋಳಿ ಗ್ರಾಮವು ಸಂಪೂರ್ಣವಾಗಿ ಮುಳುಗಿ ಹೋಗುತ್ತದೆ. ಇದ್ದರಿಂದ ಗ್ರಾಮಸ್ಥರೆಲ್ಲರು ಭಯದ ವಾತವರಣದಲ್ಲಿ ಜೀವನ ಮಾಡುವಂತಾಗಿದೆ ಎಂದರು.
ಸುಮಾರು ವರ್ಷಗಳ ಹಿಂದೆ ವೀರೆಂದ್ರ ಪಾಟೀಲ್ ಅವರ ನೇತೃತ್ವದಲ್ಲಿ ಸರ್ಕಾರವಿದ್ದಾಗ ಸೈಯದ ಚಿಂಚೋಳಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಗಂಜಿ ಕೇಂದ್ರಗಳನ್ನು ತೆಗೆದು ಉಪಚಾರ ಮಾಡಲಾಗಿತ್ತು. ಆ ಸಮಯಲ್ಲಿ ಕೂಡ ಗ್ರಾಮ ಸ್ಥಳಾಂತರಿಸುವ ಸಲುವಾಗಿ ಮನವಿ ಸಲ್ಲಿಸಿದರು ಕೂಡ ಯಾವುದೇ ಪ್ರಯೋಜನೆಯಾಗಿರುವುದಿಲ್ಲ, ಆದಕಾರ ಗ್ರಾಮಸ್ಥರ ಮನವಿಯನ್ನು ಗಂಭಿರವಾಗಿ ಪರಿಗಣಿಸಿ ಕೂಡಲೇ ಸೈಯದ್ ಚಿಂಚೋಳಿ ಗ್ರಾಮಸ್ಥರನ್ನು ಸ್ಥಳಾಂತರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸೈಯದ ಪಟೇಲ್ ಎಮ್.ಮುಡ್ಡಿ, ಈರಣ್ಣಾ ಸಿ. ಅವರಾದ, ಚಂದ್ರಶೇಖರ ಕೆ. ಸಿರಸಗಿ, ಶರಣಬಸಪ್ಪಾ ಎ. ಸಂಗೋಳಗಿ, ಅಂಬಾರಾಯ ಕಾಂಬಳೆ, ಜಗನ್ನಾಥ ಎ. ಬಿಂಗೆ, ಲಕ್ಷ್ಮೀಕಾಂತ ಎಸ್.ಮೂಲಗೆ, ಶಂಕರಸಿಂಗ್ ಕೆ. ಠಾಕೂರ, ಶಬ್ಬೀರಖಾನ್ ಬಿ. ಪಠಾಣ, ಇಸ್ಮಾಯಿಲ್ ಪಟೇಲ್ ಕೆ. ಮುಡ್ಡಿ, ಜಾವಿದಖಾನ್ ಎಸ್.ಪಠಾಣ, ಮಹಾದೇವ ಎಂ.ಗೌಳಿ ಸೇರಿದಂತೆ ಇನ್ನಿತರರು ಇದ್ದರು.
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…
ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…
ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…