ಎರಡು ಕೆರೆಗಳ ದುರಸ್ತಿ ಕಾಮಗಾರಿ ಮಾಡುವಂತೆ ಡಾಂಗೆ ಮನವಿ

0
231

ಕಲಬುರಗಿ: ಜಿಲ್ಲೆಯ ಕಲಬುರಗಿ ತಾಲೂಕಿನ ಸೈಯದ ಚಿಂಚೋಳಿ ಗ್ರಾಮದ ಪಕ್ಕದಲ್ಲಿರುವ ಕೆರಿಭೋಸಗಾದ ಕೆರೆಯು ಮತ್ತು ಸೈಯದ್ ಚಿಂಚೋಳಿ ಗ್ರಾಮದ ಕೆರೆಯು ಹೊಂದಿಕೊಂಡು ಇರುತ್ತದೆ. ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಈ ಎರಡು ಕೆರೆಗಳು ಸಂಪೂರ್ಣವಾಗಿ ತುಂಬಿ ಹರಿಯುತ್ತಿವೆ. ಇದರಿಂದ ಎರಡವು ಕೆರೆಗಳು ಒಡೆದು ಹೋಗುವ ಸಂಭವವಿದೆ ಆದ್ದರಿಂದ ತ್ವರಿತವಾಗಿ ಎರಡು ಕೆರೆಗಳನ್ನು ಒಡೆದು ಹೋಗದಂತೆ ದುರಸ್ತಿ ಕಾಮಗಾರಿಯನ್ನು ಮಾಡಿಸಬೇಕೆಂದು ಸೈಯದ್ ಚಿಂಚೋಳಿ ಗ್ರಾಮದ ಮುಖಂಡ ಅನೀಲಕುಮಾರ ಎನ್.ಡಾಂಗೆ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿಯನ್ನು ಸಲ್ಲಿಸಿ ಮಾತನಾಡುತ್ತಾ ಅವರು, ಸೈಯದ ಚಿಂಚೋಳಿ ಗ್ರಾಮವು ತಗ್ಗಿನಲ್ಲಿರುತ್ತದೆ. ಒಂದು ವೇಳೆ ಸದರಿ ಕೆರೆಗಳು ಒಡದು ಹೋದರೆ ಸೈಯದ ಚಿಂಚೋಳಿ ಗ್ರಾಮವು ಸಂಪೂರ್ಣವಾಗಿ ಮುಳುಗಿ ಹೋಗುತ್ತದೆ. ಇದ್ದರಿಂದ ಗ್ರಾಮಸ್ಥರೆಲ್ಲರು ಭಯದ ವಾತವರಣದಲ್ಲಿ ಜೀವನ ಮಾಡುವಂತಾಗಿದೆ ಎಂದರು.

Contact Your\'s Advertisement; 9902492681

ಸುಮಾರು ವರ್ಷಗಳ ಹಿಂದೆ ವೀರೆಂದ್ರ ಪಾಟೀಲ್ ಅವರ ನೇತೃತ್ವದಲ್ಲಿ ಸರ್ಕಾರವಿದ್ದಾಗ ಸೈಯದ ಚಿಂಚೋಳಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಗಂಜಿ ಕೇಂದ್ರಗಳನ್ನು ತೆಗೆದು ಉಪಚಾರ ಮಾಡಲಾಗಿತ್ತು. ಆ ಸಮಯಲ್ಲಿ ಕೂಡ ಗ್ರಾಮ ಸ್ಥಳಾಂತರಿಸುವ ಸಲುವಾಗಿ ಮನವಿ ಸಲ್ಲಿಸಿದರು ಕೂಡ ಯಾವುದೇ ಪ್ರಯೋಜನೆಯಾಗಿರುವುದಿಲ್ಲ, ಆದಕಾರ ಗ್ರಾಮಸ್ಥರ ಮನವಿಯನ್ನು ಗಂಭಿರವಾಗಿ ಪರಿಗಣಿಸಿ ಕೂಡಲೇ ಸೈಯದ್ ಚಿಂಚೋಳಿ ಗ್ರಾಮಸ್ಥರನ್ನು ಸ್ಥಳಾಂತರಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸೈಯದ ಪಟೇಲ್ ಎಮ್.ಮುಡ್ಡಿ, ಈರಣ್ಣಾ ಸಿ. ಅವರಾದ, ಚಂದ್ರಶೇಖರ ಕೆ. ಸಿರಸಗಿ, ಶರಣಬಸಪ್ಪಾ ಎ. ಸಂಗೋಳಗಿ, ಅಂಬಾರಾಯ ಕಾಂಬಳೆ, ಜಗನ್ನಾಥ ಎ. ಬಿಂಗೆ, ಲಕ್ಷ್ಮೀಕಾಂತ ಎಸ್.ಮೂಲಗೆ, ಶಂಕರಸಿಂಗ್ ಕೆ. ಠಾಕೂರ, ಶಬ್ಬೀರಖಾನ್ ಬಿ. ಪಠಾಣ, ಇಸ್ಮಾಯಿಲ್ ಪಟೇಲ್ ಕೆ. ಮುಡ್ಡಿ, ಜಾವಿದಖಾನ್ ಎಸ್.ಪಠಾಣ, ಮಹಾದೇವ ಎಂ.ಗೌಳಿ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here