ಕಲಬುರಗಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇಂದು ಕನ್ನಡ ಭವನದಲ್ಲಿ ಈ ಭಾಗದ ಹಿರಿಯ ಸಾಹಿತಿಗಳಾದ ದಿ.ಡಾ.ಚೆನ್ನಣ್ಣ ವಾಲಿಕಾರ, ದಿ.ಡಾ.ಗೀತಾ ನಾಗಭೂಷಣ,ದಿ. ಗವೀಶ ಹಿರೇಮಠ, ದಿ.ಡಾ. ಈಶ್ವರಯ್ಯ ಮಠ ಇವರಿಗೆ ನುಡಿ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿಯವರು ಮಾತನಾಡುತ್ತ ಈ ಭಾಗದ ನಾಲ್ಕು ಜನ ಹಿರಿಯ ಸಾಹಿತಿಗಳನ್ನು ಕಳೆದುಕೊಂಡ ನಾವು ಅನಾಥರಾಗಿದ್ದೆವೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಬಂದವರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ತಾಲೂಕು ಕಸಾಪ ಅಧ್ಯಕ್ಷರಾದ ಸಿ.ಎಸ್.ಮಾಲಿಪಾಟೀಲ ಮಾತನಾಡುತ್ತ, ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮುಗಿಸಿಕೊಂಡು ಸಂತೋಷದಲ್ಲಿದ್ದ ನಾವುಗಳು ಮುಂದೆ ಕೊರೋನಾ ವೈರಸ್ ಸೋಂಕಿನಿಂದ ಇಡೀ ಪ್ರಪಂಚವು ತಲ್ಲಣಗೊಂಡಿದೆ.
ಸುಮಾರು ಮಾರ್ಚನಿಂದ ಒಬ್ಬರಿಗೊಬ್ಬರು ಯೋಗ ಕ್ಷೇಮದ ಬಗ್ಗೆ ಮೊಬೈಲನಲ್ಲಿಯೇ ವಿಚಾರಿಸುತ್ತಿದ್ದ ಈ ಸಂದರ್ಭದಲ್ಲಿ ನಮ್ಮ ಭಾಗದ ಹಿರಿಯ ಸಾಹಿತಿಗಳು ನಮ್ಮನ್ನಗಲಿ ಹೋಗಿರುವುದು ತುಂಬಲಾರದ ನಷ್ಟವಾಗಿದೆ. ಅದರಲ್ಲೂ ಕರ್ತವ್ಯದಲ್ಲಿದ್ದ ಡಾ.ಈಶ್ವರಯ್ಯ ಮಠರವರು ಅಗಲಿರುವ ಸುದ್ದಿ ಸಾಹಿತಿ ಲೇಖಕರಿಗೂ ಶಿಕ್ಷಣ ಪ್ರೇಮಿಗಳಿಗು ವಿಧ್ಯಾರ್ಥಿಗಳಿಗು ನೋವನ್ನುಂಟು ಮಾಡಿದೆ,ಆ ಕಾರಣಕ್ಕಾಗಿ ಆ ಎಲ್ಲ ಹಿರಿಯ ಸಾಹಿತಿ ದಿಗ್ಗಜರಿಗೆ ತಾಲೂಕು ಪರಿಷತ್ತಿನಿಂದ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ವಿಶ್ವನಾಥ ಭಕರೆ, ದೌಲತರಾವ ಪಾಟೀಲ, ವೆಂಕಟೇಶ ನೀರಡಗಿ, ಅರುಣಾ ಹಳ್ಳಿಖೇಡ, ಭಾನುಕುಮಾರ ಗಿರೇಗೋಳ, ಎನ್.ಸಿ.ವಾರದ ಮಲ್ಲಿಕಾರ್ಜುನ ಸಂಗಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
ಕಲಬುರಗಿ: ಜೀವನದಲ್ಲಿ ಎದುರಾಗುವ ಅರಿಷಡ್ ವೈರಿಗಳನ್ನು ಗೆದ್ದು ಉತ್ತಮ ಬದುಕು ಕಟ್ಟಿದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಲೋಕಸಭಾ…
ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…
ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…
ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…
ಕಲಬುರಗಿ: ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…