ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಿರಿಯ ಸಾಹಿತಿಗಳಿಗೆ ನುಡಿ ನಮನ

0
80

ಕಲಬುರಗಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇಂದು ಕನ್ನಡ ಭವನದಲ್ಲಿ ಈ ಭಾಗದ ಹಿರಿಯ ಸಾಹಿತಿಗಳಾದ ದಿ.ಡಾ.ಚೆನ್ನಣ್ಣ ವಾಲಿಕಾರ, ದಿ.ಡಾ.ಗೀತಾ ನಾಗಭೂಷಣ,ದಿ. ಗವೀಶ ಹಿರೇಮಠ, ದಿ.ಡಾ. ಈಶ್ವರಯ್ಯ ಮಠ ಇವರಿಗೆ ನುಡಿ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿಯವರು ಮಾತನಾಡುತ್ತ ಈ ಭಾಗದ ನಾಲ್ಕು ಜನ ಹಿರಿಯ ಸಾಹಿತಿಗಳನ್ನು ಕಳೆದುಕೊಂಡ ನಾವು ಅನಾಥರಾಗಿದ್ದೆವೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಬಂದವರು ಎಂದು ಹೇಳಿದರು.

Contact Your\'s Advertisement; 9902492681

ಅಧ್ಯಕ್ಷತೆ ವಹಿಸಿ ತಾಲೂಕು ಕಸಾಪ ಅಧ್ಯಕ್ಷರಾದ ಸಿ.ಎಸ್.ಮಾಲಿಪಾಟೀಲ ಮಾತನಾಡುತ್ತ, ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮುಗಿಸಿಕೊಂಡು ಸಂತೋಷದಲ್ಲಿದ್ದ ನಾವುಗಳು ಮುಂದೆ ಕೊರೋನಾ ವೈರಸ್ ಸೋಂಕಿನಿಂದ ಇಡೀ ಪ್ರಪಂಚವು ತಲ್ಲಣಗೊಂಡಿದೆ.

ಸುಮಾರು ಮಾರ್ಚನಿಂದ ಒಬ್ಬರಿಗೊಬ್ಬರು ಯೋಗ ಕ್ಷೇಮದ ಬಗ್ಗೆ ಮೊಬೈಲನಲ್ಲಿಯೇ ವಿಚಾರಿಸುತ್ತಿದ್ದ ಈ ಸಂದರ್ಭದಲ್ಲಿ ನಮ್ಮ ಭಾಗದ ಹಿರಿಯ ಸಾಹಿತಿಗಳು ನಮ್ಮನ್ನಗಲಿ ಹೋಗಿರುವುದು ತುಂಬಲಾರದ ನಷ್ಟವಾಗಿದೆ. ಅದರಲ್ಲೂ ಕರ್ತವ್ಯದಲ್ಲಿದ್ದ ಡಾ.ಈಶ್ವರಯ್ಯ ಮಠರವರು ಅಗಲಿರುವ ಸುದ್ದಿ ಸಾಹಿತಿ ಲೇಖಕರಿಗೂ ಶಿಕ್ಷಣ ಪ್ರೇಮಿಗಳಿಗು ವಿಧ್ಯಾರ್ಥಿಗಳಿಗು ನೋವನ್ನುಂಟು ಮಾಡಿದೆ,ಆ ಕಾರಣಕ್ಕಾಗಿ ಆ ಎಲ್ಲ ಹಿರಿಯ ಸಾಹಿತಿ ದಿಗ್ಗಜರಿಗೆ ತಾಲೂಕು ಪರಿಷತ್ತಿನಿಂದ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ವಿಶ್ವನಾಥ ಭಕರೆ, ದೌಲತರಾವ ಪಾಟೀಲ, ವೆಂಕಟೇಶ ನೀರಡಗಿ, ಅರುಣಾ ಹಳ್ಳಿಖೇಡ, ಭಾನುಕುಮಾರ ಗಿರೇಗೋಳ, ಎನ್.ಸಿ.ವಾರದ ಮಲ್ಲಿಕಾರ್ಜುನ ಸಂಗಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here