ಶಿಕ್ಷಕರ ವೃತ್ತಿ ಸಾರ್ಥಕ ಸಮರ್ಪಕ ಭಾವದಿಂದ ಕೂಡಿರಬೇಕು: ಮೇಜರ್ ಸಿದ್ಧಲಿಂಗಯ್ಯ ಹಿರೇಮಠ

ಚಿತ್ತಾಪೂರ: ಶಿಕ್ಷಕ ವೃತ್ತಿ ಪರಮಪಾವಿತ್ರ್ಯತೆ ಹೊಂದಿದೆ, ನಮ್ಮ ತಂದೆ ತಾಯಿ ಇಬ್ಬರೂ ಶಿಕ್ಷಕರಾಗಿದ್ದು ಅವರ ಆಶಿರ್ವಾದವೇ ನಾವಿಂದು ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಶಿಕ್ಷಕರ ವೃತ್ತಿ ಸಾರ್ಥಕ ಸಮರ್ಪಕ ಭಾವದಿಂದ ಕೂಡಿರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಮೇಜರ್ ಸಿದ್ಧಲಿಂಗಯ್ಯ ಹಿರೆಮಠ ಅಭಿಮತ ವ್ಯಕ್ತಪಡಿಸಿದರು.

ತಾಲ್ಲೂಕಿನ ಪ್ರಜ್ಞಾ The institute of innovative learning ಹೃದಯಾಂತರಾಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ ಹಾಗೂ ಪ್ರಜ್ಞಾ ಸಂಸ್ಥೆಯ ನಿರ್ದೇಶಕರಾದ ಕೆ.ಎಂ.ವಿಶ್ವನಾಥ ಮರತೂರ ಅವರು ಮಕ್ಕಳು ಮೆಚ್ಚುವ ಶಿಕ್ಷಕರಾಗಲು ಇರುವ ಸಾಧ್ಯತೆ ಮತ್ತು ಸವಾಲುಗಳ ಕುರಿತು ವಿ?ಯ ಮಂಡನೆ ಮಾಡಿದರು.

ಶಿಕ್ಷಕರಿಂದ ಸುಗಮಕಾರರಾಗಿ ಬದಲಾಗಬೇಕಾದದ್ದು ಇಂದಿನ ಅಗತ್ಯವಾಗಿದೆ.ಶಿಕ್ಷಕ ಸದಾ ನಗುಮುಖದಿಂದಿರುವುದು ಬಹಳ ಅವಶ್ಯಕೆತಯಿದೆ. ಶಿಕ್ಷಕರಾದವರಿಗೆ ಆತ್ಮವಿಶ್ವಾಸ ಬಹಳ ಮುಖ್ಯವಾಗುತ್ತದೆ. ಶಿಕ್ಷಕರಿಗೆ ಉತ್ತಮವಾಗಿ ಓದುವ ಹವ್ಯಾಸವಿರಬೇಕು.ಶಿಕ್ಷಕನ ಬಹುಮುಖ್ಯ ಆಸ್ತಿ ಅವರ ಧ್ವನಿ ಅಥವಾ ಕಂಠ. ಶಿಕ್ಷಕರು ತಮ್ಮದೇ ಆದ ಶಾರೀರಿಕ ಅಭಿವ್ಯಕ್ತಿಯನ್ನು ಹೊಂದುವುದು ಅತ್ಯಂತ ಮುಖ್ಯವಾಗುತ್ತದೆ. ಉತ್ತಮ ಶಿಕ್ಷಕ ಉತ್ತಮ ಬರವಣಿಗೆಕಾರನು ಆಗಿರುವುದು ಅಗತ್ಯವಾಗಿದೆ.ಮಾತು ಮಕ್ಕಳ ಮನಸ್ಸಿನಾಳಕ್ಕಿಳಿದರೆ ಅರ್ಧಪಾಠ ಮುಗಿಸಿದ ಹಾಗೆ.ಶಿಕ್ಷಕ ವೃತ್ತಿಯನ್ನು ಪ್ರೀತಿಸಿ ಅದರಂತೆ ವರ್ತಿಸುವುದು ಅನಿವಾರ್ಯವಿದೆ. ಸಮರ್ಪಕ ತಯಾರಿ ನಡೆಸದೇ ತರಗತಿ ಪ್ರವೇಶಿಸಬೇಡಿ.ಸಮಯವನ್ನು ಸರಿಯಾಗಿ ನಿರ್ವಹಿಸಿ ನೀವು ಮಕ್ಕಳಿಗೆ ಮಾದರಿಯಾಗಿ. ಶಿಕ್ಷಕ ವೃತ್ತಿಯಲ್ಲಿ ನಂಬಿಕೆ ಅವಶ್ಯಕೆತೆಯಿದೆ.ಮಕ್ಕಳಿಗೆ ಅನುಕೂಲಿಸುವ ಪಾತ್ರ ನಮ್ಮದು.ಸರ್ವಧರ್ಮ ಸಮಾನತ್ವ ಭಾವನೆಯನ್ನು ಬೆಳಸಬೇಕುನಾವು ಶೋಧಕ-ಬೋಧಕ ಶಿಕ್ಷಕರಾಗಬೇಕು. ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೊದಲ ಪ್ರತಿಕ್ರಿಯೆ ನೀಡಿದ ವಾಸುದೇವ ಶರ್ಮಾ ಕಾರ್ಯನಿರ್ವಾಹಣ ಅಧಿಕಾರಿಗಳು ಚೈಲ್ಡ್ ರೈಟ್ಸ್ ಟ್ರಸ್ಟ್ ಬೆಂಗಳೂರು ಇವರು ಶಿಕ್ಷಕರ ಕುರಿತು ವಿಷಯ ಮಂಡನೆ ತುಂಬಾ ಅರ್ಥಪೂರ್ಣವಾಗಿತ್ತು. ಮಕ್ಕಳ ಹಕ್ಕುಗಳ ದೃಷ್ಠಿಯಲ್ಲಿ ಎಲ್ಲಾ ಶಿಕ್ಷಕರು ಮಕ್ಕಳನ್ನು ತಾರತಮ್ಯರಹಿತ ಶಿಕ್ಷಣ ಕೊಡಬೇಕು. ಮಕ್ಕಳನ್ನು ಹೋಲಿಕೆ ಮಾಡದೇ ಅವರಲ್ಲಿ ಇರುವ ಕೌಶಲ್ಯಕ್ಕೆ ತಕ್ಕಂತೆ ಸುಗಮಕಾರರಾಗಿ ಮಕ್ಕಳಿಗೆ ಕಲಿಸಬೇಕು. ಮಕ್ಕಳನ್ನು ಸರ್ವಧರ್ಮ ಸಮಾನತ್ವ, ಸಂವಿಧಾನದ ತತ್ವದಡಿಯಲ್ಲಿ ಕಲಿಕೆಗೆ ಅಣಿಮಾಡಿಸಬೇಕು ಎಂದು ಅಭಿಪ್ರಾಯಪಟ್ಟರು.

ಎಸ್.ಆರ್. ಬುರಡಿ, ವಿಠೋಬಾ ಎಂ. ಪತ್ತಾರ್ ಡಾ. ನಾಗರಾಜ ಹೆಬ್ಬಾಳ , ಡಾ. ಕೃ?ಮೂರ್ತಿ ಕುಲಕರ್ಣಿ ,ಡಾ. ಸಿದ್ಧರಾಜ ರೆಡ್ಡಿ , ಕಿರಣ ಕೆ.ಪಿ. ಉಮಾಮಹೇಶ ಎ. ತಮ್ಮ ಅಮುಲ್ಯವಾದ ಪ್ರತಿಕ್ರಿಯೆಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ೮೦ ಜನ ಶಿಕ್ಷಣ ಪ್ರೇಮಿಗಳು ಶಿಕ್ಷಕರು ಭಾಗವಹಿಸಿ ಯಶಶ್ವೀಗೊಳಿಸಿದರು.

ಶಿಕ್ಷಣ ಪ್ರೇಮಿ ಕಾಶಿನಾಥ ಪುಜಾರಿ ಉಪಸ್ಥಿತರಿದ್ದು ಉಮೇಶ ಗುತ್ತೇದಾರ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

emedialine

Recent Posts

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

6 seconds ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

2 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

13 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

16 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

16 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

16 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420