ಸಿರವಾರ: ತಾಲೂಕಿನ ಬಹುದಿನಗಳ ವಿದ್ಯಾರ್ಥಿಗಳ ಕನಸು ಆಗಿದ್ದ SSLC ಸಪ್ಲಿಮೆಟರಿ ಪರೀಕ್ಷಾ ಕೆಂದ್ರ ಸಿರವಾರಕ್ಕೆ ನೀಡಬೇಕು ಎಂದು SFI ತಾಲೂಕ ಸಮಿತಿ ನೇತೃತ್ವದಲ್ಲಿ ಹೋರಾಟವನ್ನು ಮಾಡಿ ಸಂಬಂಧಿಸಿದ DDPI BEO ಮತ್ತು ತಹಶಿಲ್ದಾರರು ಸೇರಿ ಇತರರ ಗಮನ ಸೆಳೆದಿತ್ತು. ಇದಕ್ಕೆ ಸ್ಪಂದಿಸಿದ ಸಂಬಂಧಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಅಧಿಕೃತ ಆದೇಶದ ಮೇರೆಗೆ ಸಿರವಾರ ಪಟ್ಟಣಕ್ಕೆ ಪೂರಕ ಪರೀಕ್ಷಾ ಕೇಂದ್ರವನ್ನ ನೀಡಿದ್ದಾರೆ. ಇದಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು, ಮತ್ತು ಪೋಷಕರು, ಸಂತಸದ ವ್ಯಕ್ತಪಡಿಸಿದರು.
SFI ಸಂಘಟನೆ ವತಿಯಿಂದ ಸಿಹಿ ಹಂಚಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಸಿರವಾರದ ಮುಖ್ಯಗುರುಗಳಾದ ಸುರೇಶ (ಬಾಲಕರ ಪ್ರೌಢ ಶಾಲೆ ಸಿರವಾರ) ಮಂಜುಳಾ (ಬಾಲಕಿಯರ ಪ್ರೌಢ ಶಾಲೆ ಸಿರವಾರ) ಮಲ್ಲಪ್ಪ PWD ಮುಖ್ಯಗುರುಗಳು & ಪೋಷಕರು ಶುಭ ಹಾರೈಸಿ ಸಂಭ್ರಮಿಸಿದರು.
ಇನ್ನೂ ಇನ್ನೊಂದು ಬೇಡಿಕೆಯಾದ PUC ಸಪ್ಲಿಮೆಂಟರಿ ಕೇಂದ್ರವು ಸಿರವಾರಕ್ಕೆ ಮುಂದಿನ ಶೈಕ್ಷಣಿಕ ವರ್ಷದಿಂದ ತಾಲ್ಲೂಕಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನೀಡುವ ಭರವಸೆಯಲ್ಲಿದ್ದೇವೆ. ಪಿ ಯು ಸಪ್ಲಿಮೆಂಟರಿ ಪರೀಕ್ಷಾ ಕೇಂದ್ರ ತಾಲೂಕಿಗೆ ಕೊಡುವವರೆಗೂ SFI ನ ಹೋರಾಟ ನಿರಂತರವಾಗಿ ನಡೆಯುತ್ತದೆ.
ಈ ಸಂದರ್ಭದಲ್ಲಿ DYFI ಮುಖಂಡ ಚಂದ್ರಶೇಖರ್ ಎಲ್ಲೇರಿ, SFI ತಾಲ್ಲೂಕು ಅಧ್ಯಕ್ಷ ಚಿದಾನಂದ ಕರಿಗೂಳಿ, ಕಾರ್ಯದರ್ಶಿ ಪ್ರವೀಣ್ ಕುಮಾರ,ಉಪಾಧ್ಯಕ್ಷ ಬಸವಲಿಂಗ ಖಜಾಂಚಿ ಸುದರ್ಶನ, ಪ್ರತಾಪ್, ದೇವರಾಜ್ ಸಿದ್ದಾರ್ಥ ಅರುಣಕುಮಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…