ಶಹಾಬಾದ: ನಗರದಲ್ಲಿ ಶುಕ್ರವಾರ ಸುರಿದ ಭಾರಿ ಮಳೆಯಿಂದ ನಗರದ ಅಜನಿ ಹಳ್ಳ ದುಂಬಿಕ್ಕಿ ಹರಿದ ಪರಿಣಾಮ ನಗರದ ಮಡ್ಡಿ ಪ್ರದೇಶ ಅಕ್ಷರಶಃ ನಡುಗಡ್ಡೆಯಂತಾಗಿ, ಐತಿಹಾಸಿಕ ದೇವಸ್ಥಾನಗಳು ನೀರಿನಿಂದ ಜಲಾವೃತಗೊಂಡಿವೆ.
ತಾಲೂಕಿನ ಎಲ್ಲಾ ಪ್ರದೇಶಗಳಲ್ಲಿ ರಾತ್ರಿ ಮಳೆಯಾದ ಪರಿಣಾಮ ನಗರದ ಅಜನಿ ಹಳ್ಳದಲ್ಲಿ ಪ್ರವಾಹ ಉಂಟಾಗಿ ಸಣ್ಣ ಸೇತುವೆ ಹಾಗೂ ಇತ್ತಿಚ್ಚಿಗೆ ನಿರ್ಮಾಣವಾದ ಹೊಸ ಸೇತುವೆಯೂ ಮುಳುಗಿ ಹೋಗಿದೆ.
ಅಲ್ಲದೇ ನಗರದ ಐತಿಹಾಸಿಕ ಬಸವಣ್ಣ ದೇವರ ಗುಡಿ, ಅಡವಿತಾತನ ಗುಡಿ, ತೆಗನೂರ ಗ್ರಾಮದ ಶಿವಯೋಗೇಶ್ವರ ಮಂದಿರದಲ್ಲಿ ಅಪಾರ ಪ್ರಮಾಣದ ನೀರು ನುಗ್ಗಿದೆ. ಅಲ್ಲದೇ ನಗರದ ಮಧ್ಯಭಾಗದ ಮುಸ್ಲಿಂ ರುದ್ರಭೂಮಿ, ಹಿಂದೂ ರುದ್ರಭೂಮಿ ಹಾಗೂ ಕೋಲಿ ಸಮಾಜದ ರುದ್ರಭೂಮಿಯಲ್ಲೂ ಸಂಪೂರ್ಣ ನೀರು ಆವರಿಸಿದೆ. ಮಡ್ಡಿ ಪ್ರದೇಶದ ಮುಖ್ಯ ರಸ್ಥೆಯ ಅರ್ಧ ಕಿಮೀವರೆಗೆ ನೀರು ಆವರಿಸಿದ್ದರಿಂದ ಜನರು ನೀರಿನಲ್ಲಿ ಹೋಗುವ ಸಾಹಸ ದೃಶ್ಯ ಕಂಡು ಬಂದಿತು. ಮೊಬೈಲ್ ಕ್ಯಾಮರಾಗಳನ್ನು ಹಿಡಿದು ದೃಶ್ಯವನ್ನು ಸೆರೆ ಹಿಡಿಯಲು ಹಾಗೂ ನೋಡಲು ನಗರದ ಸಾವಿರಾರು ಜನರು ಕಿಕ್ಕಿರಿದು ನಿಂತಿದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…