ಬಿಸಿ ಬಿಸಿ ಸುದ್ದಿ

ಇಂದು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮಹಿಳಾ ಕ್ರಾಂತಿಕಾರಿ ಮಾತಂಗಿನಿ ಹಜ್ರಾ ರವರ 78ನೇ ಹುತಾತ್ಮ ದಿನ

“ಮಾತಂಗಿನಿ ಹಜ್ರಾ” ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಮಾತಂಗಿನಿ ಹಜ್ರಾ ಸ್ವಾತಂತ್ರ್ಯ ಹೋರಾಟದ ದಿಟ್ಟ ಮಹಿಳೆ. ಕ್ವಿಟ್ ಇಂಡಿಯಾ ಹಾಗೂ ಅಸಹಕಾರ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ತನ್ನ 73 ನೇ ವಯಸ್ಸಿನಲ್ಲೂ 1942ರ ಸೆಪ್ಟೆಂಬರ್ 29ರಂದು ತಮ್ಲುಕ್ ಪೊಲೀಸ್ ಠಾಣೆ ವಶಪಡಿಸಿಕೊಳ್ಳಲು ಬೆಂಬಲಿಗರೊಂದಿಗೆ ಮೆರವಣಿಗೆ ಸಾಗುತ್ತಾ ಹೋಗುತ್ತಿದ್ದಾಗಲೇ ಗುಂಡೇಟಿಗೆ ಬಲಿಯಾಗಿ ಹುತಾತ್ಮರಾದ ಧೀರ ಮಹಿಳೆ ಮಾತಂಗಿನಿ ಹಜ್ರಾ.

1870ರಲ್ಲಿ ತಮ್ಲುಕ್ ಬಳಿಯ ಹೋಗ್ಲಾ ಎಂಬ ಹಳ್ಳಿಯಲ್ಲಿ ಅಕ್ಟೋಬರ್ 19 ರಂದು ಜನಿಸಿದ ಮಾತಂಗಿನಿ ಹಜ್ರಾ ಆ ಕಾಲಕ್ಕೇ ಅಸಾಮಾನ್ಯ ಮಹಿಳೆ. ಅವರು ಓರ್ವ ಬಡರೈತನ ಮಗಳಾಗಿದ್ದು ,ಯಾವುದೇ ಔಪಚಾರಿಕ ಶಿಕ್ಷಣವನ್ನು ಹೊಂದಿರಲಿಲ್ಲ. ಕೇವಲ ಹನ್ನೆರಡು ವರ್ಷ ವಯಸ್ಸಿಗೇ ಬಾಲ್ಯವಿವಾಹಕ್ಕೊಳಪಟ್ಟ ಅವರು 18ನೇ ವಯಸ್ಸಿನಲ್ಲೇ ವಿಧವೆಯಾಗುತ್ತಾರೆ.

ತನ್ನ ಸುತ್ತಮುತ್ತಲಿನ ಜನರಿಗೆ ಸಹಾಯ ಮಾಡುತ್ತಾ ಜನಾನುರಾಗಿಯಾಗಿದ್ದ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಲು ಆಸಕ್ತಿ ವಹಿಸಿದರು. ಆದರೆ ಸುಮಾರು ವರ್ಷಗಳ ನಂತರ ಅವರ ಜೀವನವು ಮಹತ್ವದ ತಿರುವು ಪಡೆಯಿತು. ಜನವರಿ 26,1932 , ಅವರ ಗುಡಿಸಲಿನ ಮುಂದೆ ಮೆರವಣಿಗೆ ಹೋಗುತ್ತಿದ್ದಾಗ ತಾವೂ ಸೇರಿಕೊಂಡು ಬ್ರಿಟಿಷರ ಹಿಡಿತದಿಂದ ಭಾರತದ ವಿಮೋಚನೆಗಾಗಿ ಹೋರಾಡುವುದಕ್ಕಾಗಿ ಪ್ರತಿಜ್ಞೆ ತೊಟ್ಟರು. ಮೆರವಣಿಗೆಯಲ್ಲಿ ಮುಂದೆ ಸಾಗುತ್ತಾ ತನ್ನ ಜೀವನದ ಗುರಿಯನ್ನು ಕಂಡುಕೊಂಡ ಅವರು ನಂತರ ಹಿಂದೆಂ ದೂ ನೋಡಲಿಲ್ಲ.

ಇತಿಹಾಸವು ಮಾತಂಗಿನಿ ಹಾಜ್ರಾ ರವರನ್ನು ಸ್ಮರಿಸುತ್ತದೆ: ಹಜ್ರಾರವರ ಪ್ರತಿಮೆಯು ಕಲ್ಕತ್ತಾದ ಹೃದಯಭಾಗದಲ್ಲಿರುವ ಮೈದಾನದಲ್ಲಿ ಇದೆ. ಸ್ಥಳೀಯವಾಗಿ ತಮ್ಲುಕ್ ನಲ್ಲೂ ನಾವು ಕಾಣಬಹುದು.
ದೇಶದುದ್ದಗಲಕ್ಕೂ ಸ್ಫೋಟಗೊಳ್ಳುತ್ತಿದ್ದ ಸ್ವಾತಂತ್ರ್ಯ ಚಳುವಳಿಯಲ್ಲಿ ಹಿರಿಯ ಮಹಿಳೆಯರೂ, ಯುವತಿಯರು, ಬಾಲಿಕೆಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆದರೆ ಅವುಗಳ ಬಗ್ಗೆ ಉಲ್ಲೇಖಗಳು ಅತಿ ಕಡಿಮೆ. ಬ್ರಿಟಿಷರಿಂದ 1947 ರಲ್ಲಿ ಅಧಿಕಾರವಹಿಸಿಕೊಂಡ ನಮ್ಮ ಆಳ್ವಿಕರು ಅಂದರೆ ಬಂಡವಾಳಶಾಹಿ ವರ್ಗ ಶೋಷಣೆಯಲ್ಲಿ ಬ್ರಿಟಿಷರನ್ನು ಮೀರಿಸಿದ್ದಾರೆ.

ನಮ್ಮ ದೇಶದ ನೈಜ ಇತಿಹಾಸವನ್ನು ಮರೆಮಾಚುತ್ತಿದ್ದಾರೆ. ಮಹಿಳೆಯರನ್ನು ಅಬಲೆಯ ರೂಪದಲ್ಲಿ ಅಡಗಿಸುವ ಪ್ರಯತ್ನ ಪಡುತ್ತಿದ್ದಾರೆ.ಇಂದು ತನ್ನ ಮೇಲೆ ನಡೆಯುತ್ತಿರುವ ಅನ್ಯಾಯ,ದೌರ್ಜನ್ಯ ,ಅತ್ಯಾಚಾರ ಹಾಗೂ ಸಾಮಾಜಿಕ ಸಮಸ್ಯೆಗಳ ವಿರುದ್ಧ ಅವಳು ಪ್ರತಿಭಟಿಸಿದಂತೆ ಆಳುವ ಬಂಡವಾಳಶಾಹಿ ವ್ಯವಸ್ಥೆ ಮಾಡುತ್ತಿದೆ. ಇಂದಿನ ಪ್ರಸ್ತುತ ವ್ಯವಸ್ಥೆಯ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಹಜ್ರಾ ಒಬ್ಬ ಆದರ್ಶ ಮಹಿಳೆಯಾಗಿ ಕಾಣುತ್ತಾರೆ. ಮಹಿಳೆಯನ್ನು ಎರಡೇ ದರ್ಜೆಯಾಗಿ ನೋಡುವ ಪುರುಷಪ್ರಧಾನ ಸಮಾಜ ಇಂದಿಗೂ ಕೂಡ ಸಂಪೂರ್ಣವಾಗಿ ಬದಲಾಗಿಲ್ಲ. ಮಾರ್ಯಾದೆ ಹತ್ಯೆ, ವರದಕ್ಷಿಣೆ ಕಿರುಕುಳ ಮಹಿಳೆಯರ ಮೇಲಿನ ಶೋಷಣೆ ಇಂತ ಹಲವಾರು ಸಮಸ್ಯೆಗಳ ವಿರುದ್ಧ ಚಳುವಳಿಯನ್ನ ಬೆಳೆಸಲು ಇವರ ಸ್ಪೂರ್ತಿದಾಯಕ ಜೀವನ ಯಾವತ್ತೂ ನಮಗೆ ಆದರ್ಶವಾಗಿದೆ.

ಆದ್ದರಿಂದ ಸ್ವಾತಂತ್ರ್ಯ ಚಳುವಳಿಯಲ್ಲಿ ಗಣನೀಯ ಪಾತ್ರ ವಹಿಸಿ, ಹುತಾತ್ಮರಾದ ಮಾತಂಗಿನಿ ಹಜ್ರಾರವರನ್ನು ಅತ್ಯಂತ ಶ್ರದ್ಧಾಪೂರ್ವಕವಾಗಿ ನೆನೆಯೋಣ.

 ಭೀಮಾಶಂಕರ್ ಪಾಣೇಗಾಂವ್,

ಹವ್ಯಾಸಿ ಬರಹಗಾರರು, ಕಲಬುರಗಿ.

emedialine

Recent Posts

ಹೊಸ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಸರ್ವೆ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲಾಧಿಕಾರಿಗಳಿಂದ ಕ್ರೀಡಾ ವಸತಿ ನಿಲಯಕ್ಕೆ ಭೇಟಿ ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮಂಗಳವಾರ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ…

22 mins ago

ಫ.ಗು. ಹಳಕಟ್ಟಿ ವಚನ ತವನಿಧಿಯ ಸಂರಕ್ಷಕ: ಬಿ.ಆರ್. ಪಾಟೀಲ

ಕಲಬುರಗಿ: ಮನೆ, ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ತಾಡೋಲೆಗಳನ್ನು ಹೆಕ್ಕಿ ತೆಗೆದ ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯದ ಪಿತಾಮಹ ಎಂದು ಮುಖ್ಯಮಂತ್ರಿಗಳ…

33 mins ago

ಕೆಬಿಎನ್ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

ಕಲಬುರಗಿ: ಸ್ಥಳೀಯ ಕೆಬಿಎನ್ ವಿವಿಯ ಕೆಬಿಎನ್ ಆಸ್ಪತ್ರೆಯಲ್ಲಿ ವೈದ್ಯರ ದಿನವನ್ನು ಆಚರಿಸಲಾಯಿತು. ರೇಡಿಯೋ ಡಿಗ್ನೋಸಿಸ ವಿಭಾಗದ ಮಾಜಿ ಮುಖಸ್ಥ ಡಾ.…

36 mins ago

ಈಡಿಗ ನಿಗಮ ಅನುದಾನಕ್ಕೆ ವಿಧಾನಸಭೆಯಲ್ಲಿ ಧ್ವನಿಯಾಗುವೆ: ಶಾಸಕ ಗವಿಯಪ್ಪ

ಕಲಬುರಗಿ : ರಾಜ್ಯದ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಅಭಿವೃದ್ಧಿಗಾಗಿ ರಾಜ್ಯ ಸರಕಾರವು ಘೋಷಣೆ ಮಾಡಿದ ಬ್ರಹ್ಮಶ್ರೀ ನಾರಾಯಣ…

40 mins ago

ಕಲ್ಯಾಣ ಕರ್ನಾಟಕದ 18 ತಾಲ್ಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣ: ಡಾ. ಅಜುಸಿಂಗ್

ಕಲಬುರಗಿ: ಕಂದಾಯ ಇಲಾಖೆಯ ಸಹಯೋಗದೊಂದಿಗೆ ಕಲ್ಯಾಣ ಕರ್ನಾಟಕ ಭಾಗದ ನೂತನ 18 ತಾಲೂಕು ಕೇಂದ್ರಗಳಲ್ಲಿ ಆಡಳಿತ ವಿಧಾನಸೌಧಗಳನ್ನು ನಿರ್ಮಿಸಲು ತಲಾ…

43 mins ago

ಅಧ್ಯಾತ್ಮದ ಜ್ಞಾನ ಬದುಕಿಗೆ ಬೆಳಕು ನೀಡುತ್ತದೆ

ಕಲಬುರಗಿ:ಮಾನವನ ಬದುಕಿಗೆ ಅಧ್ಯಾತ್ಮದ ಜ್ಞಾನವು ಅರಿವು ಮೂಡಿಸುವುದಲ್ಲದೆ,ಬೆಳಕು ನೀಡುತ್ತದೆ ಎಂದು ಪುರಾಣ ಪಂಡಿತ ಮಲ್ಲಿಕಾರ್ಜುನ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ. ಜಯನಗರ…

5 hours ago