ಬಿಸಿ ಬಿಸಿ ಸುದ್ದಿ

ಶಿವಯೋಗದ ಸಿದ್ಧಿಪುರುಷ ಅಥಣಿಯ ಶ್ರೀಗಳು: ಪ್ರೊ. ನಿಂಗಮ್ಮ ಪತಂಗೆ

ಕಲಬುರಗಿ: ಅಥಣಿ ಶಿವಯೋಗಿಗಳು ಚುಂಬಕವಾಗಿ ಲೋಕವನ್ನೇ ಆಕರ್ಷಿಸಿದರು.ಯೋಗ್ಯರಾದವರನ್ನು ಪರುಷವಾಗಿ ಪರಿವರ್ತಿಸಿದರು. ಪ್ರದೀಪವಾಗಿ ಕೆಲವರನ್ನು ಪ್ರಕಾಶಗೊಳಿಸಿದರು.ಹಾಗೆಯೇಅವರ ಪ್ರಸಾದ ಪ್ರಭಾವದಿಂದ ಮತ್ತುಕೃಪಾದೃಷ್ಟಿಯಿಂದಅವರ ಆಶೀರ್ವಾದದಆಶ್ರಯದಿಂದತಮ್ಮಆತ್ಮ ಶಕ್ತಿಯನ್ನು ಅರಳಿಸಿಕೊಂಡವರು ಅಸಂಖ್ಯಜನ.

ನಗರದ ಬಸವ ಸಮಿತಿಯಅನುಭವ ಮಂಟಪದಲ್ಲಿ ಶರಣರ ಸ್ಮರಣಾರ್ಥ೬೪೦ ನೆಯಅರಿವಿನ ಮನೆ ಕಾರ್ಯಕ್ರಮದಲ್ಲಿಅಥಣಿ ಮುರುಘೇಂದ್ರ ಶಿವಯೋಗಿಗಳು ಎಂಬ ವಿಷಯ ಕುರಿತು ಅನುಭಾವ ನೀಡಿದ ನಿವೃತ್ತ ಪ್ರಾಂಶುಪಾಲರಾದ ಪ್ರೊ. ನಿಂಗಮ್ಮ ಪತಂಗೆ ಯವರಯ ಅಥಣಿ ಮುರುಘೇಂದ್ರ ಶಿವಯೋಗಿಗಳು ಲಿಂಗೈಕ್ಯರಾಗಿ ನೂರು ವರ್ಷಗಳಾದರೂ ಆ ತಾಣ ಇಂದಿಗೂ ಅವರು ನೆಲೆಸಿದೆ ಪರಂಜ್ಯೋತಿಯ ಸ್ಫುರಣವಾಗಿ ಅವರ ಕ್ರಿಯಾಗದ್ದುಗೆಯಲ್ಲಿ ಮತ್ತು ಆ ಪರಿಸರದಲ್ಲಿ ನೆಲೆಸಿದ ಎಂದುಅಭಿಪ್ರಾಯ ಪಟ್ಟರು.ಬೆಳಗಾವಿ ಜಿಲ್ಲೆ ಅಥಣಿತಾಲೂಕಿನ ಇಂಗಳಗಾವಿ ಎಂಬ ಗ್ರಾಮದಲ್ಲಿ ಭಾಗೋಜಿ ಮನೆತನದಲ್ಲಿ ಇವರಜನ್ಮವಾಗುತ್ತದೆ. ರಾಚಯ್ಯ ಮತ್ತು ನೀಲಮ್ಮರು ಇವರ ಪೂರ್ವಾಶ್ರಮದ ತಂದೆ-ತಾಯಿಗಳು. ಇವರಆರುಜನ ಮಕ್ಕಳಲ್ಲಿ ಮೂರನೆಯವರಾಗಿಗುರುಲಿಂಗಯ್ಯ ಜನಿಸಿ, ಇವರೇ ಮುಂದೆಅಥಣಿಯ ಮುರುಘೇಂದ್ರ ಶಿವಯೋಗಳೆಂಬ ಅಭಿದಾನ ಪಡೆಯುತ್ತಾರೆ.ಅಥಣಿಯಗಚ್ಚಿನಮಠದ ಆಗಿನ ಪೀಠಾಧಿಪತಿಗಳಾದ ಮರುಳು ಶಂಕರ ಸ್ವಾಮಿಗಳು ಬಾಲಕನನ್ನು ಬೆಳೆಸುವ ಹೊಣಗಾರಿಯನ್ನು ಹೊರುತ್ತಾರೆ.

ಮುಂದಿನ ಶಿಕ್ಷಣಕ್ಕಾಗಿ ಬಾಲಕ ಗುರುಸಂಗಯ್ಯನನ್ನುತೆಲಸಂಗದ ಬಸವಲಿಂಗ ಸ್ವಾಮಿಗಳ ಬಳಿ ಕರೆದೊಯ್ಯತ್ತಾರೆ.ಆ ಪೂಜ್ಯರು ಜ್ಞಾನಿಗಳಾಗಿದ್ದರೂ ಅವರಿಗೆಕುಷ್ಠರೋಗವಿತ್ತು.ಅವರ ಬಳಿ ಜ್ಞಾನರ್ಜನೆಗಾಗಿ ಹೋದ ಬಾಲಕ ಗುರುಲಿಂಗಯ್ಯ ಗುರುಗಳ ಕುಷ್ಠರೋಗದ ಗಾಯಗಳನ್ನು ದಿನಕ್ಕೆ ಮೂರುಬಾರಿ ಸ್ವತಃ ತೊಳೆದು ಔಷದ ಹಾಕಿ ಅವರಅಂತಃಕರಣವನ್ನುಗೆಲ್ಲುತ್ತಾರೆ. ಶಿಷ್ಯನಿಂದ ಎನ್ನಕುಷ್ಠರೋಗ ಮಾಯವಾಯಿತುಎಂದು ಬಸವಲಿಂಗ ಸ್ವಾಮಿಗಳು ಉದ್ಗಾರತೆಗೆದರೆಂದುಇತಿಹಾಸದಲ್ಲಿ ಬರುತ್ತದೆ.

ಎರಡನೆಯ ಗುರುಗಳಾದ ಗುರುಶಾಂತದೇವರಲ್ಲಿ ಸಕಲ ವಿದ್ಯಾ ಸಂಪನ್ನರಾಗಿಅವರಿಂದಲೇಚಿನ್ಮಯ ದೀಕ್ಷೆಯನ್ನು ಪಡೆದು ಮುರುಘೇಂದ್ರ ಎಂಬ ಅಭಿದಾನವನ್ನು ಸಹ ಪಡೆಯುತ್ತಾರೆ.ನಂತರಇಪ್ಪತ್ತು ವರ್ಷ ಲೋಕ ಸಂಚಾರ ಮಾಡುತ್ತ ಶಿವಯೋಗ ಸಾಧನೆಯನ್ನು ಮಾಡುತ್ತಾರೆ.ಆರು ವರ್ಷಗಳ ಕಾಲ ತಪಸ್ಸು ಮಾಡಿಯೋಗಾಂಗ ಸಿದ್ಧಿಯನ್ನು ಪಡೆಯುತ್ತಾರೆ.ಪ್ರಕೃತಿ ಶುದ್ಧಿಯನ್ನು ಹೊಂದುತ್ತಾರೆ.ತದನಂತರಅಥಣಿಯಚರಪಟ್ಟಾಧಿಕಾರವನ್ನು ವಹಿಸಿಕೊಂಡು ಅನೇಕ ಮವಾಡಗಳನ್ನು ಮಾಡಿಜನ ಮಾನಸದಲ್ಲಿ ನೆಲೆಗೊಳ್ಳುತ್ತಾರೆ.

ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯಅಧ್ಯಕ್ಷರಾದಡಾ. ವಿಲಾಸವತಿ ಖೂಬಾ, ಉಪಾಧ್ಯಾಕ್ಷರಾದಡಾ.ಜಯಶ್ರೀದಂಡೆ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರದ ನಿರ್ದೇಶಕರಾದಡಾ.ವೀರಣ್ಣದಂಡೆ ಉಪಸ್ಥಿತರಿದ್ದರು.ಶ್ರೀ ಹೆಚ್.ಕೆ.ಉದ್ದಂಡಯ್ಯಅವರು ನಿರೂಪಿಸಿದರು.

emedialine

Recent Posts

ಜೇವರ್ಗಿ: ಲಂಚಾಪಡೆಯುತ್ತಿದ್ದಾಗ ಮಹಿಳಾ ಸಿಬ್ಬಂದಿ ಲೋಕಾಯುಕ್ತರ ಬಲೆಗೆ

ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…

11 hours ago

371 ಜೆ ಅಡಿ ಉದ್ಯೋಗ ನೇಮಕಾತಿ ಸಂಬಂಧದ ಗೊಂದಲ ನಿವಾರಿಸಿ ಮಾರ್ಗಸೂಚಿ ಸಿದ್ಧಪಡಿಸಲು ಸಚಿವರ ಸೂಚನೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…

13 hours ago

ಶ್ಯಾಮರಾವ ನಾಟಿಕಾರಗೆ ಅಧ್ಯಕ್ಷರನ್ನಾಗಿ ನೇಮಕಕ್ಕೆ ಡಾ. ಮಲ್ಲಿಕಾರ್ಜುನ ಖರ್ಗೆಗೆ ಮನವಿ

ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…

13 hours ago

ಚಿರಂಜೀವಿ ವೆಂಕಯ್ಯ ಕುಶಾಲ್ ಗುತ್ತೇದಾರ್ ಗೆ ಸನ್ಮಾನ

ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…

13 hours ago

ಮಹಿಳಾ ಘಟಕದ ನೂತನ ಪದಾಧಿಕಾರಿಗಳ ನೇಮಕ

ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಗೌಡ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ…

14 hours ago

ಮಜರ್ ಆಲಂ ಖಾನ್ ಅಧ್ಯಕತೆಯಲ್ಲಿ ನಗರದ ವಿನ್ಯಾಸ ಮಾಲೀಕರು, ಡೆವಲಪರ್ಸ್, ಬಿಲ್ಡರ್ಸ್ ಅವರೊಂದಿಗೆ ಸಭೆ

ಕಲಬುರಗಿ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್ ಇವರ ಅಧ್ಯಕ್ಷತೆಯಲ್ಲಿ ನಗರದ ಬಿಲ್ಡರ್ಸ್ ಡೆವಲಪರ್ಸ್ ಮತ್ತು ವಿನ್ಯಾಸದ ಮಾಲೀಕರವರೊಂದಿಗೆ…

14 hours ago