ಬಿಸಿ ಬಿಸಿ ಸುದ್ದಿ

ನೀರಿನ ಸಮಸ್ಯೆಗೆ ಸ್ಪಂದಿಸಲು ವಿದ್ಯಾನಗರ ವೆಲ್ ಫೇರ್ ಸೊಸೈಟಿ ಮನವಿ

ಕಲಬುರಗಿ: ನೀರಿನ ಸಮಸ್ಯೆ ಕುರಿತು ನಗರದ ನೀರು ಸರಬರಾಜು ಇಲಾಖೆಯಲ್ಲಿ ಅನೇಕ ಬಾರಿ ಮನವಿ ಮಾಡಿಕೊಂಡರು ಬಹುತೇಕ ಅಧಿಕಾರಿಗಳು ಇನಚಾರ್ಜ ಮೇಲೆ ಇರುವ ಎ.ಇ J.E., AEE ಮತ್ತು EE ಅಧಿಕಾರಿಗಳು ಯಾವುದೇ ರೀತಿಯಾಗಿ ಸಮಸ್ಯೆ ಸ್ಪಂದಿಸುತ್ತಿಲ್ಲ ಎಂದು ವಿದ್ಯಾನಗರ ವೆಲ್ ಫೇರ್ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಅವರು ತಮ್ಮ ಪ್ರಕಟಣೆಯಲ್ಲಿ ಆರೋಪಿಸಿದರು.

ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಬರುವ ವಾರ್ಡ ನಂ. 45 ರಲ್ಲಿ ಇರುವ ವಿದ್ಯಾನಗರ ಕಾಲೋನಿಯಲ್ಲಿ ಸುಮಾರು 100 ಕ್ಕಿಂತಲು ಹೆಚ್ಚು ಮನೆಗಳಿವೆ, ಕೆಲವು ತಿಂಗಳ ಹಿಂದೆ 3-4 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿತ್ತು. ಈಗ ಸುಮಾರು 1 ತಿಂಗಳಿನಿಂದ 8-10 ದಿನಗಳಿಗೊಮ್ಮೆಯಾದರೂ ಸರಿಯಾಗಿ ನೀರು ಬರುತ್ತಿಲ್ಲ.  ಕಾರಣ ಕೇಳಿದರೆ ನೀರು ಸರಬರಾಜು ಮಾಡುವವರು ಮೈಬೂಬ ನಗರದಲ್ಲಿರುವ ನೀರಿನ ಟ್ಯಾಂಕ್ ಪೂರ್ಣ ಪ್ರಮಾಣದಲ್ಲಿ ತುಂಬದೆ ಇರುವ ಕಾರಣಕ್ಕೆ ಈ ರೀತಿ ಸರಬರಾಜಿನಲ್ಲಿ ತೊಂದರೆಯಾಗುತ್ತಿದೆ ಎಂದು ಸಿಬ್ಬಂದಿಗಳು ಹೇಳುತ್ತಿದ್ದಾರೆ.

ವಿದ್ಯಾನಗರ ಕಾಲೋನಿ ಕೇವಲ ನೀರು ಸರಬರಾಜು ಇಲಾಖೆ ವ್ಯವಸ್ಥೆ ಮೇಲೆ ಅವಲಂಭಿತವಿದ್ದು, ಒಂದು ವೇಳೆ ನೀರು ಬರದೇ ಇದ್ದರೆ ಬಡೇಪೂರ ಕಾಲೋನಿ ಮತ್ತು ಆದೇಶ ನಗರದಲ್ಲಿರುವ ಸರ್ಕಾರಿ ಬೋರವೆಲ್‌ಗಳಿಗೆ ಮೋರೆ ಹೋಗಿ ದ್ವಿಚಕ್ರ, ಆಟೋ, ಕಾರಿನ ಮತ್ತು ಮಿನಿ ಲಾರಿ ಮೂಲಕ ನೀರು ತಂದು ಬಳಕೆ ಮಾಡುತ್ತಿದ್ದೇವೆ.

ಆದ್ದರಿಂದ ಮೈಬೂಬ ನಗರ ನೀರಿನ ಟ್ಯಾಂಕನ್ ಕನೆಕ್ಷನ್ ಬದಲಾಯಿಸಿ ಅದಕ್ಕಿಂತ ಸಮೀಪ ಇರುವ ನೀರಿನ ಟ್ಯಾಂಕಿನಿಂದ ನೀರು ಸರಬರಾಜು ಮಾಡುವಂತೆ ಮಾಡಬೇಕು. 15 ದಿನದೊಳಗಡೆ ನೀರು ಸರಬರಾಜು ವ್ಯವಸ್ಥೆ ಮಾಡದಿದ್ದರೆ ಬಡಾವಣೆ ಸದಸ್ಯರು ರಸ್ತಾ ರೋಖೋ ಮಾಡುವಂತಹ ಅಥವಾ ನಿಮ್ಮ ಕಚೇರಿಯ ಎದುರುಗಡೆ ಧರಣಿ ಕೂಡುವಂತಹ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ವಿದ್ಯಾನಗರ ವೆಲೆಫೇರ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರಾದ ಬಸವಂತರಾವ ಜಾಬಶೆಟ್ಟಿ, ಮಲ್ಲಿಕಾರ್ಜುನ ನಾಗಶೆಟ್ಟಿ, ಕಾಶಿನಾಥ ಚಿನ್ನಮಳ್ಳಿ, ಶಾಂತಯ್ಯ ಬಿದಿಮನಿ, ಸುಭಾಷ ಮಂಠಾಳೆ, ನಾಗರಾಜ ಹೆಬ್ಬಾಳ, ಕರಣ ಆಂದೋಲಾ, ಅಮೀತ ಸಿಕೇದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

1 hour ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

4 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

8 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

9 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

11 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420